MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಬಳ್ಳಾರಿ: ಜೀವಸಮಾಧಿ ಸತ್ಪುರುಷ 'ಎರ್ರಿತಾತ ಮಹಿಮೆ' ಸಿನಿಮಾ ಶೂಟಿಂಗ್‌ ಶುರು

ಬಳ್ಳಾರಿ: ಜೀವಸಮಾಧಿ ಸತ್ಪುರುಷ 'ಎರ್ರಿತಾತ ಮಹಿಮೆ' ಸಿನಿಮಾ ಶೂಟಿಂಗ್‌ ಶುರು

ಬಳ್ಳಾರಿ(ಫೆ.06): ಶಿವಯೋಗ ಸಾಧಕ. ಜೀವಸಮಾಧಿ ಸತ್ಪುರುಷ, ತ್ರಿಕಾಲಜ್ಞಾನಿಯೂ ಆಗಿದ್ದ ಶ್ರೀ ಚೇಳ್ಳಗುರ್ಕಿ ಎರ್ರಿಸ್ವಾಮಿಗಳ ಜೀವನ ಆಧರಿಸಿ ‘ಶ್ರೀ ಗಂಗಾ ಸಿನಿಮಾಸ್‌’ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ ‘ಚೇಳ್ಳಗುರ್ಕಿ ಶ್ರೀ ಎರ್ರಿತಾತ ಮಹಿಮೆ’ ಚಲನಚಿತ್ರದ ಮುಹೂರ್ತ ಹಾಗೂ ಚಿತ್ರೀಕರಣ ಶುಕ್ರವಾರ ತಾಲೂಕಿನ ಚೇಳ್ಳಗುರ್ಕಿಯ ಎರ್ರಿತಾತ ದೇವಸ್ಥಾನದಲ್ಲಿ ಶುರುವಾಗಿದೆ. 

2 Min read
Kannadaprabha News | Asianet News
Published : Feb 06 2021, 02:17 PM IST| Updated : Feb 06 2021, 02:18 PM IST
Share this Photo Gallery
  • FB
  • TW
  • Linkdin
  • Whatsapp
15
<p>ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಎರ್ರಿತಾತನ ಪಾತ್ರವನ್ನು ನಿರ್ವಹಿಸುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಚಿತ್ರತಂಡ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಿತು. ಮುಹೂರ್ತ ಮುನ್ನ ದೇವಸ್ಥಾನದಲ್ಲಿ ಎರ್ರಿತಾತನವರಿಗೆ ಪೂಜೆ ಸಲ್ಲಿಸಿ, ಸಿನಿಮಾ ಯಶಸ್ವಿಗೆ ಚಿತ್ರತಂಡ ಬೇಡಿಕೊಂಡಿತು.</p>

<p>ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಎರ್ರಿತಾತನ ಪಾತ್ರವನ್ನು ನಿರ್ವಹಿಸುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಚಿತ್ರತಂಡ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಿತು. ಮುಹೂರ್ತ ಮುನ್ನ ದೇವಸ್ಥಾನದಲ್ಲಿ ಎರ್ರಿತಾತನವರಿಗೆ ಪೂಜೆ ಸಲ್ಲಿಸಿ, ಸಿನಿಮಾ ಯಶಸ್ವಿಗೆ ಚಿತ್ರತಂಡ ಬೇಡಿಕೊಂಡಿತು.</p>

ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಎರ್ರಿತಾತನ ಪಾತ್ರವನ್ನು ನಿರ್ವಹಿಸುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಚಿತ್ರತಂಡ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಿತು. ಮುಹೂರ್ತ ಮುನ್ನ ದೇವಸ್ಥಾನದಲ್ಲಿ ಎರ್ರಿತಾತನವರಿಗೆ ಪೂಜೆ ಸಲ್ಲಿಸಿ, ಸಿನಿಮಾ ಯಶಸ್ವಿಗೆ ಚಿತ್ರತಂಡ ಬೇಡಿಕೊಂಡಿತು.

25
<p>ಮುಹೂರ್ತ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿತ್ರ ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ್‌, ಪೌರಾಣಿಕ ಹಾಗೂ ಧಾರ್ಮಿಕ ಸೇರಿದಂತೆ ಈವರೆಗೆ 20 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ‘ಚೇಳ್ಳಗುರ್ಕಿ ಶ್ರೀಎರ್ರಿತಾತಯ್ಯ ಮಹಿಮೆ’ 21ನೇ ಸಿನಿಮಾವಾಗಿದೆ. ಧರ್ಮ, ಸಂಸ್ಕೃತಿ ಉಳಿಯಬೇಕು. ಧಾರ್ಮಿಕ ಸ್ಥಳಗಳು ಹಾಗೂ ಸ್ಥಳ ಮಹಿಮೆ ನಾಡಿನ ಜನರಿಗೆ ಪರಿಚಯಿಸಬೇಕು ಎಂಬ ಹಂಬಲದಿಂದ ಪೌರಾಣಿಕ, ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನಲೆಯ ಸಿನಿಮಾಗಳನ್ನು ಮಾಡುತ್ತಾ ಬಂದಿರುವೆ. ಈ ಸಿನಿಮಾದಲ್ಲಿ ಎರ್ರಿತಾತಯ್ಯನವರ ಶಿಷ್ಯರಾದ ತಿಕ್ಕಯ್ಯನ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೇನೆ. ಗಂಗಾಧರಯ್ಯ ಪಾತ್ರವನ್ನು ಶ್ರೀವಿಷ್ಣು, ಗ್ರಾಮದ ಮುಖಂಡ ಭೀಮನಗೌಡರ ಪಾತ್ರದಲ್ಲಿ ರಮೇಶಗೌಡ ಪಾಟೀಲ್‌, ನರಹರಿ ಶಾಸ್ತ್ರಿ ಪಾತ್ರದಲ್ಲಿ ರಘುಚಂದ್ರ ಸೇರಿದಂತೆ ಅನೇಕ ಹಿರಿಯ, ಕಿರಿಯ ಕಲಾವಿದರು ಸಿನಿಮಾದಲ್ಲಿದ್ದಾರೆ.&nbsp;</p>

<p>ಮುಹೂರ್ತ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿತ್ರ ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ್‌, ಪೌರಾಣಿಕ ಹಾಗೂ ಧಾರ್ಮಿಕ ಸೇರಿದಂತೆ ಈವರೆಗೆ 20 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ‘ಚೇಳ್ಳಗುರ್ಕಿ ಶ್ರೀಎರ್ರಿತಾತಯ್ಯ ಮಹಿಮೆ’ 21ನೇ ಸಿನಿಮಾವಾಗಿದೆ. ಧರ್ಮ, ಸಂಸ್ಕೃತಿ ಉಳಿಯಬೇಕು. ಧಾರ್ಮಿಕ ಸ್ಥಳಗಳು ಹಾಗೂ ಸ್ಥಳ ಮಹಿಮೆ ನಾಡಿನ ಜನರಿಗೆ ಪರಿಚಯಿಸಬೇಕು ಎಂಬ ಹಂಬಲದಿಂದ ಪೌರಾಣಿಕ, ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನಲೆಯ ಸಿನಿಮಾಗಳನ್ನು ಮಾಡುತ್ತಾ ಬಂದಿರುವೆ. ಈ ಸಿನಿಮಾದಲ್ಲಿ ಎರ್ರಿತಾತಯ್ಯನವರ ಶಿಷ್ಯರಾದ ತಿಕ್ಕಯ್ಯನ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೇನೆ. ಗಂಗಾಧರಯ್ಯ ಪಾತ್ರವನ್ನು ಶ್ರೀವಿಷ್ಣು, ಗ್ರಾಮದ ಮುಖಂಡ ಭೀಮನಗೌಡರ ಪಾತ್ರದಲ್ಲಿ ರಮೇಶಗೌಡ ಪಾಟೀಲ್‌, ನರಹರಿ ಶಾಸ್ತ್ರಿ ಪಾತ್ರದಲ್ಲಿ ರಘುಚಂದ್ರ ಸೇರಿದಂತೆ ಅನೇಕ ಹಿರಿಯ, ಕಿರಿಯ ಕಲಾವಿದರು ಸಿನಿಮಾದಲ್ಲಿದ್ದಾರೆ.&nbsp;</p>

ಮುಹೂರ್ತ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿತ್ರ ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ್‌, ಪೌರಾಣಿಕ ಹಾಗೂ ಧಾರ್ಮಿಕ ಸೇರಿದಂತೆ ಈವರೆಗೆ 20 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ‘ಚೇಳ್ಳಗುರ್ಕಿ ಶ್ರೀಎರ್ರಿತಾತಯ್ಯ ಮಹಿಮೆ’ 21ನೇ ಸಿನಿಮಾವಾಗಿದೆ. ಧರ್ಮ, ಸಂಸ್ಕೃತಿ ಉಳಿಯಬೇಕು. ಧಾರ್ಮಿಕ ಸ್ಥಳಗಳು ಹಾಗೂ ಸ್ಥಳ ಮಹಿಮೆ ನಾಡಿನ ಜನರಿಗೆ ಪರಿಚಯಿಸಬೇಕು ಎಂಬ ಹಂಬಲದಿಂದ ಪೌರಾಣಿಕ, ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನಲೆಯ ಸಿನಿಮಾಗಳನ್ನು ಮಾಡುತ್ತಾ ಬಂದಿರುವೆ. ಈ ಸಿನಿಮಾದಲ್ಲಿ ಎರ್ರಿತಾತಯ್ಯನವರ ಶಿಷ್ಯರಾದ ತಿಕ್ಕಯ್ಯನ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೇನೆ. ಗಂಗಾಧರಯ್ಯ ಪಾತ್ರವನ್ನು ಶ್ರೀವಿಷ್ಣು, ಗ್ರಾಮದ ಮುಖಂಡ ಭೀಮನಗೌಡರ ಪಾತ್ರದಲ್ಲಿ ರಮೇಶಗೌಡ ಪಾಟೀಲ್‌, ನರಹರಿ ಶಾಸ್ತ್ರಿ ಪಾತ್ರದಲ್ಲಿ ರಘುಚಂದ್ರ ಸೇರಿದಂತೆ ಅನೇಕ ಹಿರಿಯ, ಕಿರಿಯ ಕಲಾವಿದರು ಸಿನಿಮಾದಲ್ಲಿದ್ದಾರೆ. 

35
<p>30 ದಿನಗಳ ಕಾಲ ಚೇಳ್ಳಗುರ್ಕಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಳಿಕ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ರಾಜ್‌ಭಾಸ್ಕರ್‌ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಶ್ರೀವಿಷ್ಣು, ಉಷಾರಾಣಿ, ಗೀತಾ, ರಾಜ್‌ಭಾಸ್ಕರ್‌, ರೋಹಿತ್‌ ಅವರು ನಿರ್ಮಾಪಕರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.</p>

<p>30 ದಿನಗಳ ಕಾಲ ಚೇಳ್ಳಗುರ್ಕಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಳಿಕ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ರಾಜ್‌ಭಾಸ್ಕರ್‌ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಶ್ರೀವಿಷ್ಣು, ಉಷಾರಾಣಿ, ಗೀತಾ, ರಾಜ್‌ಭಾಸ್ಕರ್‌, ರೋಹಿತ್‌ ಅವರು ನಿರ್ಮಾಪಕರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.</p>

30 ದಿನಗಳ ಕಾಲ ಚೇಳ್ಳಗುರ್ಕಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಳಿಕ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ರಾಜ್‌ಭಾಸ್ಕರ್‌ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಶ್ರೀವಿಷ್ಣು, ಉಷಾರಾಣಿ, ಗೀತಾ, ರಾಜ್‌ಭಾಸ್ಕರ್‌, ರೋಹಿತ್‌ ಅವರು ನಿರ್ಮಾಪಕರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

45
<p>ಹಿರಿಯ ನಟ ಶ್ರೀನಿವಾಸ ಮೂರ್ತಿ ಮಾತನಾಡಿ, ಈವರೆಗೆ 360 ಚಿತ್ರಗಳಲ್ಲಿ ನಟಿಸಿರುವೆ. ನಟನೆ ಎಂಬುದು ನಿರಂತರ ಕಲಿಕೆ. ಇಂದಿಗೂ ನಾನು ಕಲಿಯುತ್ತಿರುವೆ. ಕೊಟ್ಟಪಾತ್ರಕ್ಕೆ ಜೀವ ತುಂಬಲು ಪ್ರಮಾಣಿಕ ಪ್ರಯತ್ನ ಮಾಡುವೆ. ಏಳೆಂಟು ವರ್ಷಗಳ ಹಿಂದೆ ರಾಮು ಎಂಟರ್‌ಪ್ರೈಸಸ್‌ರವರ ಸಿನಿಮಾ ಶೂಟಿಂಗ್‌ಗೆ ಬಂದಿದ್ದೆ. ಆಗ ಜೋಳದರಾಶಿ ದೊಡ್ಡನಗೌಡರ ಮನೆಗೆ ಭೇಟಿ ನೀಡಬೇಕು ಎಂದು ಆಗಮಿಸಿದ್ದ ವೇಳೆ ಎರ್ರಿತಾತ ಮಠಕ್ಕೆ ತೆರಳಿ ದರ್ಶನ ಪಡೆಯುವಂತೆ ಅನೇಕರು ಹೇಳಿದರು. ಇಲ್ಲಿಗೆ ಬಂದಾಗ ಶ್ರೀಎರ್ರಿತಾತನವರ ದೊಡ್ಡ ಶಕ್ತಿಯೇ ಇದೆ ಎಂದೆನಿಸಿತು. ಆಗ ನಿರ್ದೇಶಕರಿಗೆ ತಿಳಿಸಿ, ಸಿನಿಮಾ ಮಾಡಲು ಹೇಳಿದೆ. ದೇವರ ಇಚ್ಛೆಯಿಂದ ನೆರವೇರುತ್ತಿದೆ. ಎರ್ರಿತಾತನ ಪಾತ್ರ ಮಾಡುತ್ತಿರುವ ಬಗ್ಗೆ ಖುಷಿ ಇದೆ. ಅನೇಕ ಸಿನಿಮಾಗಳು ಮಾಡಿರಬಹುದು. ಆದರೆ, ತಾತಯ್ಯನ ಪಾತ್ರ ನಿರ್ವಹಿಸುತ್ತಿರುವುದು ಬೇರೆಯದ್ದೇ ಅನುಭೂತಿ ಇದೆ ಎಂದು ಹೇಳಿದರು.</p>

<p>ಹಿರಿಯ ನಟ ಶ್ರೀನಿವಾಸ ಮೂರ್ತಿ ಮಾತನಾಡಿ, ಈವರೆಗೆ 360 ಚಿತ್ರಗಳಲ್ಲಿ ನಟಿಸಿರುವೆ. ನಟನೆ ಎಂಬುದು ನಿರಂತರ ಕಲಿಕೆ. ಇಂದಿಗೂ ನಾನು ಕಲಿಯುತ್ತಿರುವೆ. ಕೊಟ್ಟಪಾತ್ರಕ್ಕೆ ಜೀವ ತುಂಬಲು ಪ್ರಮಾಣಿಕ ಪ್ರಯತ್ನ ಮಾಡುವೆ. ಏಳೆಂಟು ವರ್ಷಗಳ ಹಿಂದೆ ರಾಮು ಎಂಟರ್‌ಪ್ರೈಸಸ್‌ರವರ ಸಿನಿಮಾ ಶೂಟಿಂಗ್‌ಗೆ ಬಂದಿದ್ದೆ. ಆಗ ಜೋಳದರಾಶಿ ದೊಡ್ಡನಗೌಡರ ಮನೆಗೆ ಭೇಟಿ ನೀಡಬೇಕು ಎಂದು ಆಗಮಿಸಿದ್ದ ವೇಳೆ ಎರ್ರಿತಾತ ಮಠಕ್ಕೆ ತೆರಳಿ ದರ್ಶನ ಪಡೆಯುವಂತೆ ಅನೇಕರು ಹೇಳಿದರು. ಇಲ್ಲಿಗೆ ಬಂದಾಗ ಶ್ರೀಎರ್ರಿತಾತನವರ ದೊಡ್ಡ ಶಕ್ತಿಯೇ ಇದೆ ಎಂದೆನಿಸಿತು. ಆಗ ನಿರ್ದೇಶಕರಿಗೆ ತಿಳಿಸಿ, ಸಿನಿಮಾ ಮಾಡಲು ಹೇಳಿದೆ. ದೇವರ ಇಚ್ಛೆಯಿಂದ ನೆರವೇರುತ್ತಿದೆ. ಎರ್ರಿತಾತನ ಪಾತ್ರ ಮಾಡುತ್ತಿರುವ ಬಗ್ಗೆ ಖುಷಿ ಇದೆ. ಅನೇಕ ಸಿನಿಮಾಗಳು ಮಾಡಿರಬಹುದು. ಆದರೆ, ತಾತಯ್ಯನ ಪಾತ್ರ ನಿರ್ವಹಿಸುತ್ತಿರುವುದು ಬೇರೆಯದ್ದೇ ಅನುಭೂತಿ ಇದೆ ಎಂದು ಹೇಳಿದರು.</p>

ಹಿರಿಯ ನಟ ಶ್ರೀನಿವಾಸ ಮೂರ್ತಿ ಮಾತನಾಡಿ, ಈವರೆಗೆ 360 ಚಿತ್ರಗಳಲ್ಲಿ ನಟಿಸಿರುವೆ. ನಟನೆ ಎಂಬುದು ನಿರಂತರ ಕಲಿಕೆ. ಇಂದಿಗೂ ನಾನು ಕಲಿಯುತ್ತಿರುವೆ. ಕೊಟ್ಟಪಾತ್ರಕ್ಕೆ ಜೀವ ತುಂಬಲು ಪ್ರಮಾಣಿಕ ಪ್ರಯತ್ನ ಮಾಡುವೆ. ಏಳೆಂಟು ವರ್ಷಗಳ ಹಿಂದೆ ರಾಮು ಎಂಟರ್‌ಪ್ರೈಸಸ್‌ರವರ ಸಿನಿಮಾ ಶೂಟಿಂಗ್‌ಗೆ ಬಂದಿದ್ದೆ. ಆಗ ಜೋಳದರಾಶಿ ದೊಡ್ಡನಗೌಡರ ಮನೆಗೆ ಭೇಟಿ ನೀಡಬೇಕು ಎಂದು ಆಗಮಿಸಿದ್ದ ವೇಳೆ ಎರ್ರಿತಾತ ಮಠಕ್ಕೆ ತೆರಳಿ ದರ್ಶನ ಪಡೆಯುವಂತೆ ಅನೇಕರು ಹೇಳಿದರು. ಇಲ್ಲಿಗೆ ಬಂದಾಗ ಶ್ರೀಎರ್ರಿತಾತನವರ ದೊಡ್ಡ ಶಕ್ತಿಯೇ ಇದೆ ಎಂದೆನಿಸಿತು. ಆಗ ನಿರ್ದೇಶಕರಿಗೆ ತಿಳಿಸಿ, ಸಿನಿಮಾ ಮಾಡಲು ಹೇಳಿದೆ. ದೇವರ ಇಚ್ಛೆಯಿಂದ ನೆರವೇರುತ್ತಿದೆ. ಎರ್ರಿತಾತನ ಪಾತ್ರ ಮಾಡುತ್ತಿರುವ ಬಗ್ಗೆ ಖುಷಿ ಇದೆ. ಅನೇಕ ಸಿನಿಮಾಗಳು ಮಾಡಿರಬಹುದು. ಆದರೆ, ತಾತಯ್ಯನ ಪಾತ್ರ ನಿರ್ವಹಿಸುತ್ತಿರುವುದು ಬೇರೆಯದ್ದೇ ಅನುಭೂತಿ ಇದೆ ಎಂದು ಹೇಳಿದರು.

55
<p>ಎರ್ರಿತಾತ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಬಾಳನಗೌಡ, ಟ್ರಸ್ಟಿಗಳಾದ ವಿರೂಪಾಕ್ಷಗೌಡ, ಕರಿಬಸವನಗೌಡ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಜಂಬುನಾಥ, ಗ್ರಾಮದ ವೈ.ಎಸ್‌. ಎರ್ರೆಣ್ಣ, ಅಂಗಡಿ ಎರ್ರಿಸ್ವಾಮಿ, ಕೆ. ದೊಡ್ಡಬಸವನಗೌಡ, ಆರ್‌.ಚನ್ನಪ್ಪ ಹಾಗೂ ಎರಿಸ್ವಾಮಿ ಬಳಗದ ಸದಸ್ಯರು ಇದ್ದರು.</p>

<p>ಎರ್ರಿತಾತ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಬಾಳನಗೌಡ, ಟ್ರಸ್ಟಿಗಳಾದ ವಿರೂಪಾಕ್ಷಗೌಡ, ಕರಿಬಸವನಗೌಡ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಜಂಬುನಾಥ, ಗ್ರಾಮದ ವೈ.ಎಸ್‌. ಎರ್ರೆಣ್ಣ, ಅಂಗಡಿ ಎರ್ರಿಸ್ವಾಮಿ, ಕೆ. ದೊಡ್ಡಬಸವನಗೌಡ, ಆರ್‌.ಚನ್ನಪ್ಪ ಹಾಗೂ ಎರಿಸ್ವಾಮಿ ಬಳಗದ ಸದಸ್ಯರು ಇದ್ದರು.</p>

ಎರ್ರಿತಾತ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಬಾಳನಗೌಡ, ಟ್ರಸ್ಟಿಗಳಾದ ವಿರೂಪಾಕ್ಷಗೌಡ, ಕರಿಬಸವನಗೌಡ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಜಂಬುನಾಥ, ಗ್ರಾಮದ ವೈ.ಎಸ್‌. ಎರ್ರೆಣ್ಣ, ಅಂಗಡಿ ಎರ್ರಿಸ್ವಾಮಿ, ಕೆ. ದೊಡ್ಡಬಸವನಗೌಡ, ಆರ್‌.ಚನ್ನಪ್ಪ ಹಾಗೂ ಎರಿಸ್ವಾಮಿ ಬಳಗದ ಸದಸ್ಯರು ಇದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
Recommended image2
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
Recommended image3
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved