ಕೊರೋನಾ: ಸಾಮಾಜಿಕ ಕಳಕಳಿಯಿಂದ ಹುಟ್ಟಿದಬ್ಬಕ್ಕೆ ನೋ ಎಂದ ಪವರ್!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬರ್ಥ್ಡೇ ಅಂದರೆ ಫ್ಯಾನ್ಸ್ಗಳಿಗೆ ಹಬ್ಬ. ರಾಜ್ಯದ ಮೂಲೆ ಮೂಲೆಯಿಂದ ಅಪ್ಪುವಿಗೆ ವಿಶ್ ಮಾಡಲು ಅಭಿಮಾನಿಗಳು ಬರುತ್ತಾರೆ. ಈ ಬಾರಿ ಪುನೀತ್ ಬರ್ಥ್ಡೇ ಸೆಲೆಬ್ರೆಶನ್ಗೂ ಕೊರೋನಾ ಭೀತಿ ತಟ್ಟಿದೆ. ಪುನೀತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸದಂತೆ ವಿನಂತಿಸಿಕೊಂಡಿದ್ದಾರೆ. ಸರ್ಕಾರದ ನಿರ್ದೇಶನವನ್ನು ನಾವು ಗೌರವಿಸೋಣ ಎಂದು ಕೇಳಿಕೊಂಡು ಕೊರೋನಾ ವೈರಸ್ ಹರಡದಂತೆ ತಡೆಯುವಲ್ಲಿ ಸಾಮಾಜಿಕ ಜಾವಬ್ದಾರಿಯನ್ನು ಮೆರೆದಿದ್ದಾರೆ ಪವರ್ ಸ್ಟಾರ್.
45ನೇ ವರ್ಷಕ್ಕೆ ಕಾಲಿಡುತ್ತಿರುವ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಕಿರಿಯ ಪುತ್ರ ಪುನೀತ್ .
ಪುನೀತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸದಂತೆ ವಿನಂತಿಕೊಂಡಿದ್ದಾರೆ.
ಈ ಸಮಯದಲ್ಲಿ ಆರೋಗ್ಯ ಮೊದಲ ಆದ್ಯತೆ ಮತ್ತು ನಿಮ್ಮ ಆರೋಗ್ಯಕ್ಕೆ ಯಾವುದೇ ಅಪಾಯವನ್ನುಂಟುಮಾಡಲು ಬಯಸೋಲ್ಲ ಎಂದಿದ್ದಾರೆ.
ಸರ್ಕಾರದ ನಿರ್ದೇಶನವನ್ನು ನಾವು ಗೌರವಿಸೋಣ . ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳಿಗೆ ನಾನು ಕೃತಜ್ಞ: ಪುನೀತ್
ಹರಿದು ಬರುತ್ತಿರುವ ಬರ್ಥ್ಡೇ ವಿಶ್ಗಳು, ಒಂದು ದಿನ ಮೊದಲೇ ಅಡ್ವಾನ್ಸ್ ವಿಶ್ ಮಾಡಿದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು.
ಈ ಸಂಧರ್ಭದಲ್ಲಿ ಅಪ್ಪುಗಾಗಿ ಫ್ಯಾನ್ ಗಾಯಕಿ ವೇದಶ್ರೀ ಮಾಡಿರುವ ಆಲ್ಬಂ ವೈರಲ್ ಆಗುತ್ತಿದೆ.
ಹುಟ್ಟುಹಬ್ಬಕ್ಕಾಗಿ ಯುವರತ್ನ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಪವರ್ ಸ್ಟಾರ್.
ಚಾಮರಾಜನಗರ ಜಿಲ್ಲಾ ಅಭಿವೃದ್ಧಿ ರಾಯಭಾರಿಯಾಗಿ ಈಗ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ.
ವರ ಇನ್ನೊಂದು ಮೋಸ್ಟ್ ಅವೈಟಿಂಗ್ ಸಿನಿಮಾ ಜೇಮ್ಸ್ ಶೂಟಿಂಗ್ ಭರದಲ್ಲಿ ನೆಡೆಯುತ್ತಿದೆ.
ಮಹಿಳಾ ದಿನಾಚರಣೆ ಅಂಗವಾಗಿ ರಿಲೀಸ್ ಆಗಿದ್ದ ಮಹಿಳೆಯರ ರಕ್ಷಣೆ ಕುರಿತಾಗಿರುವ ಬಿಎಂಟಿಸಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.