- Home
- Entertainment
- Sandalwood
- ವಿಜಯ್ ರಾಘವೇಂದ್ರ ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ Anchor Anushree: ಅಭಿಮಾನಿಗಳು ಫುಲ್ ಖುಷ್
ವಿಜಯ್ ರಾಘವೇಂದ್ರ ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ Anchor Anushree: ಅಭಿಮಾನಿಗಳು ಫುಲ್ ಖುಷ್
ಆ್ಯಂಕರ್ ಅನುಶ್ರೀ ಹಂಚಿಕೊಂಡ ವಿಡಿಯೋದಲ್ಲಿ, ನಟ ವಿಜಯ ರಾಘವೇಂದ್ರಗೆ ತಮ್ಮ ಸಿನಿಮಾ ಡೈಲಾಗ್ ಹೇಳಲು ಕೇಳುತ್ತಾರೆ, ಆದರೆ ಅವರಿಗೆ ಡೈಲಾಗ್ ನೆನಪಾಗುವುದಿಲ್ಲ. ಈ ತಮಾಷೆಯ ಸಂಭಾಷಣೆಯು ಅಂತಿಮವಾಗಿ ವಿಜಯ ರಾಘವೇಂದ್ರ ಅವರ ಬಗ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ ಅನುಶ್ರೀ. ಏನದು?

ಏನಿದು ಅನುಶ್ರೀ- ವಿಜಯ ರಾಘವೇಂದ್ರ ಗುಟ್ಟು
ಆ್ಯಂಕರ್ ಅನುಶ್ರೀ ಮತ್ತು ವಿಜಯ ರಾಘವೇಂದ್ರ ಅವರ ವಿಡಿಯೋ ಒಂದು ಅನುಶ್ರೀ ಅವರು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ವಿಜಯ ರಾಘವೇಂದ್ರ (Vijaya Raghavendra) ಅವರು ತಮ್ಮ ಸಿನಿಮಾದ ಡೈಲಾಗ್ ಹೇಳಲು ಪರದಾಡಿದ್ದಾರೆ.
ಡೈಲಾಗ್ ಹೇಳು ಎಂದ ಅನುಶ್ರೀ
ಈ ವಿಡಿಯೋದಲ್ಲಿ ಇಬ್ಬರೂ ಮೊಬೈಲ್ ಹಿಡಿದು ತಮ್ಮ ತಮ್ಮ ಲೋಕದಲ್ಲಿ ಮಗ್ನರಾಗಿದ್ದಾರೆ. ಆ ಸಮಯದಲ್ಲಿ ಅನುಶ್ರೀ ಅವರು, ವಿಜು, ನಿನ್ನ ಸಿನಿಮಾದ ಯಾವುದಾದರೊಂದು ಡೈಲಾಗ್ ಹೇಳೋ ಎಂದಿದ್ದಾರೆ. ಆದರೆ ವಿಜಯ ರಾಘವೇಂದ್ರ ಅವರು ತಾವು 65ಕ್ಕೂ ಅಧಿಕ ಸಿನಿಮಾದಲ್ಲಿ ಮಾಡಿದ್ದರೂ ಡೈಲಾಗ್ ಹೇಳುವಂಥದ್ದು ಏನೂ ಇಲ್ಲ ಎಂದಿದ್ದಾರೆ.
ಅನುಶ್ರೀ ಕೋಪ
ಆ ಬಳಿಕ ಅನುಶ್ರೀ ಅವರು, ಇಷ್ಟೆಲ್ಲಾ ಮಾಡಿದ್ರೂ ಒಂದೂ ಡೈಲಾಗ್ ಇಲ್ವಾ ಎಂದು ಸಿಟ್ಟಿನಿಂದ ಚಿನ್ನಾರಿ ಮುತ್ತದಲ್ಲಿ ಎಂದಾಗ ವಿಜಯ್ ಅವರು ಅದು ಚಿಕ್ಕಮಕ್ಕಳ ಸಿನಿಮಾ, ಅದ್ರಲ್ಲೇನು ಇರತ್ತೆ ಎಂದಿದ್ದಾರೆ. ಸೇವಂತಿ ಸೇವಂತಿ ಚಿತ್ರ ಎಂದಾಗ ಅದರಲ್ಲಿ ಇರೋದು ಬರಿ ಹಾಡುಗಳು ಎಂದಿದ್ದಾರೆ.
ಉದ್ದುದ್ದ ಡೈಲಾಗ್
ಬಳಿಕ ಅನುಶ್ರೀ ಅವರು ಖುಷಿ ಎಂದಾಗ ಅದರಲ್ಲಿ ಡೈಲಾಗ್ಸ್ ಇವೆ. ಆದರೆ ಎಲ್ಲಾ ಉದ್ದುದ್ದ ಡೈಲಾಗ್ಸ್, ಆಮೇಲೆ ಮಸ್ತ್ ಮಜಾ ಮಾಡಿಯಲ್ಲಿ ಡೈಲಾಗ್ಸ್ ಇಲ್ಲ ಎಂದು ಕಳ್ಳ ಸುಳ್ಳ ಮಳ್ಳ ಎಂದಿದ್ದಾರೆ. ಆಗ ಅದು ನೀನೇ ಎಂದಾಗ ವಿಜಯ ರಾಘವೇಂದ್ರ ಅವರು ನಾನು ಮೂರೂ ಅಲ್ಲ ಎಂದಿದ್ದಾರೆ.
ಇಲ್ಲಿದೆ ಟ್ವಿಸ್ಟ್
ಇಲ್ಲೇ ಟ್ವಿಸ್ಟ್ ಇರೋದು. ಹೌದು ನೀನು ಈ ಮೂರು ಅಲ್ಲ, ಬದಲಿಗೆ ಸೀತಾರಾಮ್ ಎಂದಿದ್ದಾರೆ. ಅಂದಹಾಗೆ ಇದು ನಾಳೆ ಅರ್ಥಾತ್ ಫೆಬ್ರುವರಿ 20ರಂದು ಬಿಡುಗಡೆಯಾಗಲಿರುವ ವಿಜಯ್ ರಾಘವೇಂದ್ರ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಅದರರಿ 20, 2026 ರಂದು ಬಿಡುಗಡೆಯಾಗುತ್ತಿದೆ tv9kannada.com. ದೇವಿ ಚಿತ್ರದ ಪ್ರಮೋಷನ್.
ಹೊಸ ಕಥೆ
ಈ ಚಿತ್ರದ ಪ್ರಮೋಷನ್ಗಾಗಿ ಇಬ್ಬರೂ ಹೊಸ ರೀತಿಯಲ್ಲಿ ಕಥೆ ಸೃಷ್ಟಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಪವನ್ ಒಡೆಯರ್ ಪ್ರಸ್ತುತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

