ಚಿರಂಜೀವಿ ಸರ್ಜಾ ಬಗ್ಗೆ ರಮ್ಯಾ ಹಂಚಿಕೊಂಡ ವಿಚಾರ
ಬೆಂಗಳೂರು(ಜೂ. 08) ಸ್ಯಾಂಡಲ್ ವುಡ್ ಯುವ ಪ್ರತಿಭೆ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿದ್ದಾರೆ. ಸ್ಯಾಂಡಲ್ವುಡ್ ನಟಿ ರಮ್ಯಾ ಕಂಬನಿ ಮಿಡಿದಿದ್ದು ತಮ್ಮ ಮತ್ತು ಸರ್ಜಾ ನಡುವಿನ ಬಾಂಧ್ಯವ್ಯವನ್ನು ಹಂಚಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಅವರೊಂದಿಗಿನ ಪೋಟೋ ಹಂಚಿಕೊಂಡು ಬಾಂಧವ್ಯ ವಿವರಿಸಿದ್ದಾರೆ.
ನೀವು ಯಾವಾಗಲು ಒಬ್ಬ ಅದ್ಭುತ ಸಹಕಲಾವಿದರಾಗಿ ಇರುತ್ತೀರಿ ಎಂದು ರಮ್ಯಾ ಹೇಳಿದ್ದಾರೆ. ಸದಾ ಆನಂದದಿಂದ ಇರುವುದು, ಪಾಸಿಟಿವ್ ಆಗಿ ಯೋಚನೆ ಮಾಡುವುದು ನಿಮ್ಮ ಶಕ್ತಿ. ನಿಮ್ಮೊಂದಿಗೆ ಕೆಲಸ ಮಾಡಿದ ಅನುಭವ ಸದಾ ಹಸಿರಾಗಿರುತ್ತದೆ.
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ನೋವು ಭರಿಸುವ ಧೈರ್ಯ ಬರಲಿ ಓಂ ಶಾಂತಿ ಎಂದು ಸಂತಾಪ ತಿಳಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರು ರಮ್ಯಾ ಅವರೊಂದಿಗೆ ‘ದಂಡಂ ದಶಗುಣಂ’ ನಟಿಸಿದ್ದರು. 2011ರ ಏಪ್ರಿಲ್ನಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ಚಿರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.