- Home
- Entertainment
- Sandalwood
- ನಟರ ಬಂಡವಾಳ ಬಯಲು ಮಾಡ್ತೇನೆಂದು Kishore ಹೀಗೆಲ್ಲಾ ಹೇಳೋದಾ?: ಫ್ಯಾನ್ಸ್ ಶಾಕ್, ಸಿನಿ ಇಂಡಸ್ಟ್ರಿ ಶೇಕ್
ನಟರ ಬಂಡವಾಳ ಬಯಲು ಮಾಡ್ತೇನೆಂದು Kishore ಹೀಗೆಲ್ಲಾ ಹೇಳೋದಾ?: ಫ್ಯಾನ್ಸ್ ಶಾಕ್, ಸಿನಿ ಇಂಡಸ್ಟ್ರಿ ಶೇಕ್
ನಟ ಕಿಶೋರ್ ಅವರು ಸಿನಿಮಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ನಟರು ತಮ್ಮ ಅಭಿಮಾನಿಗಳನ್ನು ಉದ್ದೇಶಪೂರ್ವಕವಾಗಿ ಮೂರ್ಖರನ್ನಾಗಿಸುತ್ತಾರೆ ಎಂದಿದ್ದಾರೆ. ಅಭಿಮಾನಿಗಳನ್ನು ಹಾಲಿನ ಅಭಿಷೇಕ ಮಾಡಿಸಿಕೊಳ್ಳಲು ಸೀಮಿತಗೊಳಿಸುತ್ತಾರೆ ಎಂದು ಕಿಶೋರ್ ಆರೋಪಿಸಿದ್ದಾರೆ.

ಸಿನಿಮಾ ನಟರ ಬಗ್ಗೆ ಕಿಶೋರ್
ಕನ್ನಡ, ತಮಿಳು ತೆಲುಗು, ಮಲಯಾಳ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಕಿಶೋರ್, ಸದಾ ಸುದ್ದಿಯಲ್ಲಿ ಇರುವ ನಟ. ಸೋಷಿಯಲ್ ಮೀಡಿಯಾದಿಂದ ಹಿಡಿದು ಭಾಷಣಗಳಲ್ಲಿ ಅವರು ಆಡುವ ಮಾತುಗಳು ಕಾಂಟ್ರವರ್ಸಿಯಾಗುವುದೇ ಹೆಚ್ಚು. ರಾಜಕೀಯದಿಂದ ಹಿಡಿದು ಸಿನಿಮಾ ರಂಗದವರೆಗೂ ಅವರು, ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡು ಪ್ರಚಾರದಲ್ಲಿ ಇರುವುದನ್ನೇ ಬಯಸುವವರು. ಅದರಲ್ಲಿಯೂ ಬಿಜೆಪಿ, ಆರ್ಎಸ್ಎಸ್, ಪ್ರಧಾನಿ ಮೋದಿ ಅವರ ಬಗ್ಗೆಯಂತೂ ನೆಗೆಟಿವ್ ಮಾತನಾಡಿರುವ ಮೂಲಕ ಚಾಲ್ತಿಯಲ್ಲಿ ಇರುವ ನಟ ಕಿಶೋರ್.
ಸಿನಿ ಇಂಡಸ್ಟ್ರಿಯಲ್ಲಿ ಹಲ್ಚಲ್
ಆದರೆ, ಇದೀಗ ಸಿನಿಮಾ ನಟರ ಬಗ್ಗೆ ಅವರು ಆಡಿರುವ ಮಾತುಗಳು ಸಿನಿ ಇಂಡಸ್ಟ್ರಿಯಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ. ಅದೂ ಅವರು ಸಿನಿಮಾ ನಟರು ಹೇಗೆ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ. theuniquedeva ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಿಕೊಳ್ಳಲಾಗಿದೆ. ಸತ್ಯವಾದ ಮಾತು ಸರ್ ಎಂದು ಶೀರ್ಷಿಕೆ ಕೊಟ್ಟು ಇದನ್ನು ಶೇರ್ ಮಾಡಲಾಗಿದೆ.
ಬಂಡವಾಳ ಬಯಲು ಮಾಡ್ತಾರೆ
ಸಿನಿಮಾಗಳು ಯಾಕೆ ಯಾರನ್ನೂ ಎಜುಕೇಟ್ ಮಾಡಲ್ಲ ಎಂದು ಹಲವರು ಕೇಳ್ತಾರೆ. ಆದರೆ ನಟರು ಅಭಿಮಾನಿಗಳನ್ನು ಎಜುಕೇಟ್ ಮಾಡಿಬಿಟ್ಟರೆ, ಅಭಿಮಾನಿಗಳು ತಿರ್ಗಾ ಅವರನ್ನೇ ಪ್ರಶ್ನಿಸ್ತಾರೆ. ಉದಾಹರಣೆಗೆ, ಸಿನಿಮಾಗಳಲ್ಲಿ ಕನ್ನಡ ಕನ್ನಡ ಅಂತಾರೆ. ಅದನ್ನು ನೋಡಿದ ಅಭಿಮಾನಿಗಳು ನೀನೇನು ನಿಜ ಜೀವನದಲ್ಲಿ ಕನ್ನಡಕ್ಕಾಗಿ ಹೋರಾಡ್ತಿಯಾ, ಸುಮ್ನೆ ಸಿನಿಮಾದಲ್ಲಿ ರೀಲ್ ಬಿಡಲ್ಲ ಅಂತ ಪ್ರಶ್ನೆ ಮಾಡಲ್ವಾ, ಅದಕ್ಕಾಗಿ ಈ ನಟರು ಯಾವತ್ತಿಗೂ ಅಭಿಮಾನಿಗಳನ್ನು ಎಜುಕೇಟ್ ಮಾಡಲು ಹೋಗೋದೇ ಇಲ್ಲ ಎಂದಿದ್ದಾರೆ.
ಹಾಲಿನ ಅಭಿಷೇಕ ಆಗ್ಬೇಕು ಅಷ್ಟೇ...
ಈ ನಟರಿಗೆ ಏನು ಬೇಕು ಎಂದರೆ, ಫ್ಯಾನ್ಸ್ ಫಾಲೋವರ್ಸ್ ಹೆಚ್ಚಾಗಬೇಕು. ಹಾಲಿನ ಅಭಿಷೇಕ ಮಾಡ್ತಾ ಇರಬೇಕು. ನೀನೇ ನನ್ನ ದೇವರು ಅಂತಾ ಇರಬೇಕು. ಇದೇ ನಟರ ಬಂಡವಾಳ ಎಂದಿದ್ದಾರೆ ನಟ ಕಿಶೋರ್. ಜನರನ್ನು ಮೂರ್ಖರನ್ನಾಗಿ ಮಾಡುವುದು ಇವರ ಕೆಲಸ ಅಷ್ಟೇ. ಅಭಿಮಾನಿಗಳ ಬಾಯಿ ಮುಚ್ಚಿಸಿಕೊಂಡು ಹಾಲಿನ ಅಭಿಷೇಕ ಮಾಡಿಸಿಕೊಳ್ತಾ ಇರ್ತಾರೆ. ಅಭಿಮಾನಿಗಳನ್ನು ಹೆಚ್ಚು ಎಜುಕೇಟ್ ಮಾಡಿದ್ರೆ ನೀವೇನು ಮಹಾ ಎಂದು ಫ್ಯಾನ್ಸ್ ಕೇಳಿದ್ರೆ ಅದಕ್ಕೆ ಇವರ ಬಳಿ ಉತ್ತರ ಇರಲ್ವಲ್ಲಾ ಎಂದು ಟಾಂಗ್ ಕೊಟ್ಟಿದ್ದಾರೆ ಇವರು.
ನನ್ನ ದುಡ್ಡಲ್ಲೇ ನೀನು...
ಒಂದು ವೇಳೆ ಫ್ಯಾನ್ಸ್ಗೆ ಮಾತನಾಡಲು ಬಿಟ್ಟರೆ, ಬಾಯಿ ಮುಚ್ಚಿಕೊಂಡಿರು, ನನ್ನ ದುಡ್ಡಲ್ಲೇ ನೀನು ಕೆಲ್ಸ ಮಾಡೋದು ಅನ್ನೋ ಮಟ್ಟಿಗೆ ಹೋಗಿ ಬಿಡ್ತಾರೆ. ಅದಕ್ಕಾಗಿಯೇ ನಟರು ಅವರಿಗೆ ಹೆಚ್ಚು ಶಿಕ್ಷಣ ಕೊಡುವಂತ ಏನನ್ನೂ ಸಿನಿಮಾಗಳಲ್ಲಿ ತೋರಿಸುವುದಿಲ್ಲ ಎಂದು ಕಾಂಟ್ರವರ್ಸಿಯ ಮಾತನಾಡಿದ್ದಾರೆ.
ಶಾಕ್ ತಂದ ಹೇಳಿಕೆ
ಇದನ್ನು ಕೇಳಿ ಹಲವರು ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಏಕೆಂದರೆ ಎಷ್ಟೋ ಜನರಿಗೆ ಸಿನಿಮಾ ನಟರು ಎಂದರೆ ದೇವರಿಗೆ ಸಮಾನ. ಅವರು ತೋರಿಸುವುದನ್ನು ಕಣ್ಮುಚ್ಚಿ ಮಾಡುತ್ತಾರೆ. ಅವರಂತೆ ತಾವು ಕಾಣಬೇಕು ಎಂದು ಅವರ ಸ್ಟೈಲ್, ಮಾತು ಎಲ್ಲವನ್ನೂ ಅನುಸರಿಸುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಈ ನಟರಿಗಾಗಿ ತಮ್ಮ ಜೀವವನ್ನೇ ಕೊಟ್ಟವರೂ ಇದ್ದಾರೆ. ನಟರ ಒಂದು ಝಲಕ್ ನೋಡಲು ಪ್ರಾಣವನ್ನೇ ಒತ್ತೆ ಇಡುವವರೂ ಇದ್ದಾರೆ. ಇವರೆಲ್ಲರಿಗೂ ಈ ಸ್ಟೇಟ್ಮೆಂಟ್ ಶಾಕ್ ತಂದಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

