MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡೋದಿಲ್ಲ, ದೂರ ಆಗಲ್ಲ: Darshan Thoogudeepa ಪತ್ನಿ ವಿಜಯಲಕ್ಷ್ಮೀ

ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡೋದಿಲ್ಲ, ದೂರ ಆಗಲ್ಲ: Darshan Thoogudeepa ಪತ್ನಿ ವಿಜಯಲಕ್ಷ್ಮೀ

Actor Vijayalakshmi Darshan: ವಿಜಯಲಕ್ಷ್ಮೀ ಹಾಗೂ ನಟ ದರ್ಶನ್‌ ತೂಗುದೀಪ ಅವರು 2003 ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದು ವಿವಾಹ ವಾರ್ಷಿಕೋತ್ಸವದ ಖುಷಿಯಿದ್ದರೂ ಕೂಡ, ದರ್ಶನ್‌ ಮಾತ್ರ ಜೈಲಿನಲ್ಲಿದ್ದಾರೆ. ಈಗ ವಿಜಯಲಕ್ಷ್ಮೀ ಅವರು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. 

1 Min read
Author : Padmashree Bhat
Published : May 19 2026, 01:05 PM IST
Share this Photo Gallery
  • FB
  • TW
  • Linkdin
  • Whatsapp
14
ದರ್ಶನ್‌ ಪರವಾಗಿದ್ದ ವಿಜಯಲಕ್ಷ್ಮೀ!
Image Credit : Asianet News

ದರ್ಶನ್‌ ಪರವಾಗಿದ್ದ ವಿಜಯಲಕ್ಷ್ಮೀ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಆರೋಪದಲ್ಲಿ ನಟ ದರ್ಶನ್‌ ತೂಗುದೀಪ ಅವರು ಜೈಲು ಸೇರಿದರು. ಈ ಹಿಂದೆ ದರ್ಶನ್‌, ವಿಜಯಲಕ್ಷ್ಮೀ ಸಂಸಾರದಲ್ಲಿ ಸಮಸ್ಯೆ ಆಗಿ, ವಿವಾದ ಎದ್ದಿತ್ತು. ಆಗಲೂ ದರ್ಶನ್‌ ಜೈಲು ಸೇರಿದ್ದರು. ಈಗ ಕೊ*ಲೆ ಆರೋಪದಲ್ಲಿ ಜೈಲು ಸೇರಿದಾಗ ವಿಜಯಲಕ್ಷ್ಮೀ ಮಾತ್ರ ಸದಾ ದರ್ಶನ್‌ ಪರವಾಗಿದ್ದರು.

Add Asianetnews Kannada as a Preferred SourcegooglePreferred
24
ದರ್ಶನ್‌ಗೆ ಸಾಥ್‌ ಕೊಟ್ಟರು
Image Credit : Asianet News

ದರ್ಶನ್‌ಗೆ ಸಾಥ್‌ ಕೊಟ್ಟರು

ಕಳೆದ ಎರಡು ವರ್ಷಗಳಿಂದ ವಿಜಯಲಕ್ಷ್ಮೀ ಮಾತ್ರ ದರ್ಶನ್‌ ಅವರನ್ನು ಹೊರಗಡೆ ಕರೆದುಕೊಂಡು ಬರಲು, ಅವರ ಸಿನಿಮಾ ಪ್ರಚಾರಕ್ಕೆ ಬೆಂಬಲ ನೀಡಿದರು. ಅಷ್ಟೇ ಅಲ್ಲದೆ ಅವಕಾಶ ಸಿಕ್ಕಾಗೆಲ್ಲ ಜೈಲಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ, ಆಹಾರ, ಬಟ್ಟೆ ನೀಡಿದ್ದರು.

Related Articles

Related image1
ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ಮಹಾ ಮೋಸಗಾರ, ನಂಬಿಕೆ ದ್ರೋಹಿ; ಅಸಲಿ ವಿಷಯ ಹೇಳಿದ ದಿನಕರ್‌ ತೂಗುದೀಪ
Related image2
Darshan Thoogudeepa: ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಏನಾಯ್ತು? Exclusive!
34
ವಿಜಯಲಕ್ಷ್ಮೀ ಪೋಸ್ಟ್‌ ಏನು?
Image Credit : Asianet News

ವಿಜಯಲಕ್ಷ್ಮೀ ಪೋಸ್ಟ್‌ ಏನು?

“ಪ್ರತಿಯೊಂದು ಬಿರುಗಾಳಿಯಲ್ಲೂ ಮತ್ತು ಪ್ರತಿಯೊಂದು ಮೌನದಲ್ಲೂ ನಾನು ನಿನ್ನ ಕೈ ಹಿಡಿದು ಮುನ್ನಡೆಸುತ್ತೇನೆ. ಪರಿಸ್ಥಿತಿಗಳು ನಮ್ಮನ್ನು ದೂರ ಮಾಡಲು ಪ್ರಯತ್ನಿಸಿದರೂ, ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತದೆ... ಮತ್ತು ಇಡೀ ಜಗತ್ತೇ ನಿನಗೆ ಎದುರಾಗಿ ನಿಂತರೂ, ನಾನು ನಿನ್ನ ಪಕ್ಕದಲ್ಲೇ ನಿಲ್ಲುತ್ತೇನೆ, ಎಲ್ಲದರ ನಡುವೆಯೂ ನಿನ್ನನ್ನೇ ಆರಿಸಿಕೊಳ್ಳುತ್ತೇನೆ” ಎಂದು ವಿಜಯಲಕ್ಷ್ಮೀ ದರ್ಶನ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

44
ಅದ್ದೂರಿ ಆಚರಣೆ!
Image Credit : Asianet News

ಅದ್ದೂರಿ ಆಚರಣೆ!

2024 ರಲ್ಲಿ ದುಬೈನಲ್ಲಿ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ಇವರಿಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು, ಡ್ಯಾನ್ಸ್‌ ಮಾಡಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು. ಅದಾದ ಬಳಿಕವೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್‌ ಜೈಲು ಸೇರಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ದರ್ಶನ್ ತೂಗುದೀಪ
ಸ್ಯಾಂಡಲ್‌ವುಡ್
ವಿಜಯಲಕ್ಷ್ಮಿ ದರ್ಶನ್

Latest Videos
Recommended Stories
Recommended image1
ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ: ಡಿಜಿಪಿಗೆ ಪತ್ನಿ ಹೀಗೊಂದು ವಿಶೇಷ ಮನವಿ
Recommended image2
Malashri Secret: 'ನಂಜುಂಡಿ ಕಲ್ಯಾಣ'ಕ್ಕಿಂತ ಮೊದಲು ಮಾಲಾಶ್ರೀ 35 ಸಿನಿಮಾಗಳಲ್ಲಿ ನಟಿಸಿದ್ರು; ಕನಸಿನ ರಾಣಿಯ ಹಲವು ಸೀಕ್ರೆಟ್ ಇಲ್ಲಿವೆ ನೋಡಿ!
Recommended image3
ಜೈಲಧಿಕಾರಿಗಳಿಗೆ ತಲೆಬಾಗಿದ ನಟ ದರ್ಶನ್: ಜೈಲಿನಲ್ಲಿ ಒಂದೇ ಒಂದು ಬಾರಿ ಹೆಂಡತಿ-ಮಗನ ಒಳ ಸಂದರ್ಶನಕ್ಕೆ ಮನವಿ!
Related Stories
Recommended image1
ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ಮಹಾ ಮೋಸಗಾರ, ನಂಬಿಕೆ ದ್ರೋಹಿ; ಅಸಲಿ ವಿಷಯ ಹೇಳಿದ ದಿನಕರ್‌ ತೂಗುದೀಪ
Recommended image2
Darshan Thoogudeepa: ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಏನಾಯ್ತು? Exclusive!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved