ಗೆಳತಿ ನೀನು ಕೇಳಲೇ ಬೇಕು 'ಏನೀ ಅದ್ಭುತವೇ'! ಚಿತ್ರರಂಗದ ಕಲಾವಿದೆ ಮಾನಸಿ ಸುಧೀರ್!
ಸಾಮಾಜಿಕ ಜಾಲತಾಣ ಅದೆಷ್ಟೋ ಪ್ರತಿಭೆಗಳಿಗೆ ತನ್ನ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇದೀಗ ಲಾಕ್ ಡೌನ್ ಸಮಯವನ್ನು ಒಳ್ಳೆಯ ರೀತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ಈ ವೈರಲ್ ವಿಡಿಯೋ ಒಂದು ಸಾಬೀತುಮಾಡಿದೆ . ಕನ್ನಡದ ಸಾಹಿತ್ಯ ವಲಯ ಕಂಡ ಶ್ರೇಷ್ಠ ಕವಿಗಳಾದ ಅಂಬಿಕಾತನಯದತ್ತ ದ.ರಾ.ಬೇಂದ್ರೆ ಮತ್ತು ಜಾಲಿ ಬಾರಿನ ಪೋಲಿ ಗೆಳೆಯರನ್ನು ಪರಿಚಯಿಸಿದ ಬಿಆರ್ ಲಕ್ಷ್ಮಣ್ ರಾವ್ ಅವರ ಕವಿತೆಗಳಿಗೆ ತನ್ನ ಅಭಿನಯದ ಮೂಲಕ ಹೊಸದೊಂದು ರೂಪ ಕೊಟ್ಟಿರುವ ಈ ಅದ್ಭುತ ಕಲಾವಿದೆಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. 'ಏನೀ ಅದ್ಭುತವೇ' ಕವಿತೆಯನ್ನು ಭಾವಾಭಿನಯ ರೂಪದಲ್ಲಿ ಮತ್ತಷ್ಟು ಅದ್ಭುತವಾಗಿಸಿ ಅಪಾರ ಮೆಚ್ಚುಗೆಗಳಿಸಿದ್ದಾರೆ .ಇಷ್ಟೆಲ್ಲಾ ಪೀಠಿಕೆಗೆ ಕಾರಣರಾಗಿರುವ ಆ ಕಲಾವಿದೆ ಯಾರು ?ಎಲ್ಲಿಯವರು ? ಅವರ ಹಿನ್ನೆಲೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ..

<p> 'ಏನೀ ಅದ್ಭುತವೇ' ಕಾವ್ಯಭಾವಾಭಿನಯ ಮಾಡಿರುವ ಮಾನಸಿ ಜೋಶಿ ಭರತನಾಟ್ಯ ಕಲಾವಿದೆ ಮಾತ್ರವಲ್ಲ ಗಾಯಕಿಯೂ ಹೌದು. </p>
'ಏನೀ ಅದ್ಭುತವೇ' ಕಾವ್ಯಭಾವಾಭಿನಯ ಮಾಡಿರುವ ಮಾನಸಿ ಜೋಶಿ ಭರತನಾಟ್ಯ ಕಲಾವಿದೆ ಮಾತ್ರವಲ್ಲ ಗಾಯಕಿಯೂ ಹೌದು.
<p>ಮಾನಸಿ ಅವರು ಮೂಲತಃ ಉಡುಪಿಯವರಾಗಿದ್ದು ಈ ರೀತಿಯ ಮತ್ತಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡುವ ಯೋಜನೆ ರೂಪಿಸಿದ್ದಾರೆ. </p>
ಮಾನಸಿ ಅವರು ಮೂಲತಃ ಉಡುಪಿಯವರಾಗಿದ್ದು ಈ ರೀತಿಯ ಮತ್ತಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡುವ ಯೋಜನೆ ರೂಪಿಸಿದ್ದಾರೆ.
<p>ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು 15 ವರ್ಷಗಳ ಹಿಂದೆ ಕಲಿತ ಭಾವಗೀತೆಗಳನ್ನು ಮರು ಪ್ರಯತ್ನ ಮಾಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳ ಕವಿತೆಗಳಿಗೆ ಹೊಸದೊಂದು ರೂಪ ನೀಡಿದ್ದಾರೆ.</p>
ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು 15 ವರ್ಷಗಳ ಹಿಂದೆ ಕಲಿತ ಭಾವಗೀತೆಗಳನ್ನು ಮರು ಪ್ರಯತ್ನ ಮಾಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳ ಕವಿತೆಗಳಿಗೆ ಹೊಸದೊಂದು ರೂಪ ನೀಡಿದ್ದಾರೆ.
<p>ಬೇಂದ್ರೆ ಅವರ 'ಭೃಂಗದ ಬೆನ್ನೇರಿ ಹಾಗೂ ಬಿ ಆರ್ ಲಕ್ಷ್ಮಣರಾವ್ ಅವರ 'ಹೇಗಿದ್ದೀಯೇ ಟ್ವಿಂಕಲ' ಹಾಗೂ ಇನ್ನೂ ಅನೇಕ ಹಾಡುಗಳಿಗೆ ಭಾವಾಭಿನಯ ಮಾಡಿರುವ ಇವರು ಕನ್ನಡಿಗರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. </p>
ಬೇಂದ್ರೆ ಅವರ 'ಭೃಂಗದ ಬೆನ್ನೇರಿ ಹಾಗೂ ಬಿ ಆರ್ ಲಕ್ಷ್ಮಣರಾವ್ ಅವರ 'ಹೇಗಿದ್ದೀಯೇ ಟ್ವಿಂಕಲ' ಹಾಗೂ ಇನ್ನೂ ಅನೇಕ ಹಾಡುಗಳಿಗೆ ಭಾವಾಭಿನಯ ಮಾಡಿರುವ ಇವರು ಕನ್ನಡಿಗರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
<p>ನೃತ್ಯಕ್ಕೆ ಸಂಬಂಧ ಪ್ರಯೋಗಳನ್ನು ಮಾಡುತ್ತಲೇ ಇರುವ ಇವರು ಇದಕ್ಕೂ ಕೂಡ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ ಅದರ ಪ್ರತಿಫಲವಾಗಿ ಇಂದು ತಮ್ಮ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿಗೆ ತಲುಪಿದ್ದಾರೆ . </p>
ನೃತ್ಯಕ್ಕೆ ಸಂಬಂಧ ಪ್ರಯೋಗಳನ್ನು ಮಾಡುತ್ತಲೇ ಇರುವ ಇವರು ಇದಕ್ಕೂ ಕೂಡ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ ಅದರ ಪ್ರತಿಫಲವಾಗಿ ಇಂದು ತಮ್ಮ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿಗೆ ತಲುಪಿದ್ದಾರೆ .
<p>ಈ ವಿಡಿಯೋಗೆ ಜನರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಇನ್ನು ಹೆಚ್ಚು ವಿಶೇಷವಾಗಿ ವಿಭಿನ್ನ ಪ್ರಯತ್ನಗಳನ್ನು ಡಿಜಿಟಲ್ ಪರದೆಯ ಮೇಲೆ ತಂದು ಮತ್ತಷ್ಟು ಜನರನ್ನು ರಂಜಿಸುವ ಚಿಂತನೆಯಲ್ಲಿದ್ದಾರೆ ಮಾನಸಿ ಅವರು. </p>
ಈ ವಿಡಿಯೋಗೆ ಜನರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಇನ್ನು ಹೆಚ್ಚು ವಿಶೇಷವಾಗಿ ವಿಭಿನ್ನ ಪ್ರಯತ್ನಗಳನ್ನು ಡಿಜಿಟಲ್ ಪರದೆಯ ಮೇಲೆ ತಂದು ಮತ್ತಷ್ಟು ಜನರನ್ನು ರಂಜಿಸುವ ಚಿಂತನೆಯಲ್ಲಿದ್ದಾರೆ ಮಾನಸಿ ಅವರು.
<p>ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್ ರಾವ್ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ ಅವರು ಕರುನಾಡಿಗೆ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ. </p>
ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್ ರಾವ್ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ ಅವರು ಕರುನಾಡಿಗೆ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ.
<p> ರಾಘವೇಂದ್ರ ರಾಜ್ಕುಮಾರ್ ಅಭಿನಯದ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ಇವರು ನಟನೆಯ್ಲಲೂ ತಮ್ಮ ಛಾಪು ಮೂಡಿಸಿದ್ದಾರೆ .</p>
ರಾಘವೇಂದ್ರ ರಾಜ್ಕುಮಾರ್ ಅಭಿನಯದ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ಇವರು ನಟನೆಯ್ಲಲೂ ತಮ್ಮ ಛಾಪು ಮೂಡಿಸಿದ್ದಾರೆ .
<p>ಕನ್ನಡ ಮಾತ್ರವಲ್ಲದೆ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.</p>
ಕನ್ನಡ ಮಾತ್ರವಲ್ಲದೆ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
<p>ಪೌರಾಣಿಕ ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.</p>
ಪೌರಾಣಿಕ ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.