MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಗಂಡ - ಹೆಂಡತಿಯ ನಡುವೆ ಜಗಳ ಆಗ್ಬೇಕಂತೆ… ಯಾಕೆ ಗೊತ್ತಾ?

ಗಂಡ - ಹೆಂಡತಿಯ ನಡುವೆ ಜಗಳ ಆಗ್ಬೇಕಂತೆ… ಯಾಕೆ ಗೊತ್ತಾ?

ಜಗಳವಾಡುವುದು ಒಳ್ಳೆಯದಲ್ಲ. ಅದರಲ್ಲೂ ಗಂಡ ಹೆಂಡತಿ ನಡುವೆ ಜಗಳ ಬರಲೇ ಬಾರದು, ಇದರಿಂದ ಹಾಗಾಗುತ್ತೆ, ಹೀಗಾಗುತ್ತೆ ಅನ್ನೋದನ್ನೆಲ್ಲಾ ನೀವು ಕೇಳಿದ್ದೀರಿ. ಆದರೆ ಗಂಡ-ಹೆಂಡತಿ ಸಂಬಂಧದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಯಾಕೆ ಅನ್ನೋದನ್ನು ನೋಡೋಣ.

2 Min read
Author : Suvarna News
Published : Feb 05 2023, 05:24 PM IST
Share this Photo Gallery
  • FB
  • TW
  • Linkdin
  • Whatsapp
16

ಗಂಡ ಮತ್ತು ಹೆಂಡತಿಯ ನಡುವಿನ ಜಗಳ (couple fight), ಅಂದರೆ, ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದರ್ಥ. ಜಗಳಗಳನ್ನು ಯಾವಾಗಲೂ ಈ ಕೋನದಿಂದಲೇ ನೋಡಲಾಗುತ್ತದೆ. ಆದರೆ, ನಕಾರಾತ್ಮಕವಾಗಿ ಕಾಣುವ ಈ ವಿಷಯವು ನಿಜವಾಗಿಯೂ ದಂಪತಿಗಳಿಗೆ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಾ?. ಗಂಡ ಮತ್ತು ಹೆಂಡತಿಯ ನಡುವಿನ ವಾದಗಳು ಅಥವಾ ಜಗಳಗಳನ್ನು ಮತ್ತೊಂದು ಕೋನದಿಂದ ನೋಡಿದರೆ, ಅವು ದಂಪತಿಗಳನ್ನು ದೂರ ಮಾಡುವ ಬದಲಾಗಿ, ಅವರನ್ನು ಹತ್ತಿರ ತರುತ್ತದೆ. ಹೇಗೆ ಅನ್ನೋದನ್ನು ನೋಡೋಣ.

26

ಜಗಳ ನಿಮಗಿರುವ ಕಾಳಜಿಯನ್ನು ತೋರಿಸುತ್ತೆ: ಸಂಗಾತಿ ಕೆಲವೊಮ್ಮೆ ಕೋಪದಲ್ಲಿ ಏನಾದರೂ ಹೇಳಿದಾಗ, ನಿಮಗೆ ಇಷ್ಟವಾಗೋದಿಲ್ಲ, ಬೇಸರವಾಗುತ್ತೆ. ಇದರ ಅರ್ಥ, ನೀವು ಅವರ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದೀರಿ ಅನ್ನೋದನ್ನು ತೋರಿಸುತ್ತೆ. ಒಂದು ವೇಳೆ ನಿಮ್ಮ ಯಾವುದೇ ಮಾತಿಗೆ ಸಂಗಾತಿ ರಿಯಾಕ್ಟ್ ಮಾಡದೇ ಇದ್ದರೆ ಅದರರ್ಥ ಅವರಿಗೆ ನಿಮ್ಮ ಮೇಲೆ ಯಾವುದೇ ಫೀಲಿಂಗ್ ಇಲ್ಲ ಎಂದು.

36

ಇಷ್ಟ ಇಲ್ಲದ್ದನ್ನು ಹೇಳೋದು ತಪ್ಪಲ್ಲ:  ಕೋಪದಲ್ಲಿ, ಒಬ್ಬ ವ್ಯಕ್ತಿಯು ಹೃದಯದ ಕೋಪವನ್ನು ಬಹಿರಂಗವಾಗಿ ತೆಗೆದುಹಾಕುತ್ತಾನೆ. ವೈವಾಹಿಕ ಜೀವನದ (married life) ಬಗ್ಗೆ ಮಾತನಾಡುವಾಗ, ದಂಪತಿಗಳು ಶಾಂತಿಯನ್ನು ಕಾಪಾಡಿಕೊಳ್ಳಲು ವಿಷಯಗಳನ್ನು ಹೆಚ್ಚಾಗಿ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಪರಿಸ್ಥಿತಿ, ಇಬ್ಬರನ್ನು ಹತ್ತಿರವಾಗಿಸೋ ಬದಲು, ದೂರ ಮಾಡುತ್ತದೆ.. ಉತ್ತಮ ವಿಷಯವೆಂದರೆ, ಏನಾದರೂ ಚೆನ್ನಾಗಿ ಕಾಣದಿದ್ದರೆ, ಅದನ್ನು ಸಂಗಾತಿಗೆ ಬಹಿರಂಗವಾಗಿ ಹೇಳಿ, ಆಗ ಮಾತ್ರ ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

46

ಸಂಬಂಧದಲ್ಲಿ ಕಹಿ ಇರೋದಿಲ್ಲ: ಜಗಳಗಳನ್ನು ನಕಾರಾತ್ಮಕವಾಗಿ ನೋಡಲಾಗುತ್ತದೆ ಮತ್ತು ಜಗಳದಿಂದ ಸಂಬಂಧ ಹಾಳಾಗುತ್ತದೆ ಎನ್ನಲಾಗುತ್ತೆ. ಆದರೆ, ಸಣ್ಣ ಪುಟ್ಟ ಜಗಳಗಳು ದಂಪತಿಗಳನ್ನು ಹತ್ತಿರ ತರುತ್ತದೆ. ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಬದಲು, ಅವುಗಳ ಬಗ್ಗೆ ಮಾತನಾಡುವಾಗ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದು ಸಂಬಂಧದಲ್ಲಿ ಕಹಿ ಹರಡಲು (no bitterness in relationship) ಬಿಡೋದಿಲ್ಲ.

56

ವಿಶ್ವಾಸವನ್ನು ಹೆಚ್ಚಿಸುತ್ತದೆ: ದಂಪತಿಗಳ ನಡುವೆ ವಾಗ್ವಾದ ನಡೆದಾಗ ಮತ್ತು ನಂತರ ಇಬ್ಬರೂ ಒಟ್ಟಿಗೆ ವಿಷಯಗಳನ್ನು ಪರಿಹರಿಸಿದಾಗ, ಅದು ಅವರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ಮಾತ್ರವಲ್ಲ, ಅವರ ನಡುವಿನ ಪರಸ್ಪರ ನಂಬಿಕೆಯೂ ಹೆಚ್ಚಾಗುತ್ತದೆ. ಏಕೆಂದರೆ ದಂಪತಿಗಳ ದೊಡ್ಡ ಭಯವೆಂದರೆ ಜಗಳ ನಡೆದರೆ, ಅವರ ನಡುವೆ ಅಂತರ ಏರ್ಪಡುತ್ತೆ ಎಂದು. ಜಗಳದ ಬಳಿಕವೂ ಒಂದಾಗಿದ್ದರೆ, ಭರವಸೆ ಹೆಚ್ಚುತ್ತೆ. 

66

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಾಯ: ಜಗಳದ ಸಮಯದಲ್ಲಿ, ವ್ಯಕ್ತಿಯ ನಿಜವಾದ ಸ್ವಭಾವ (rela character revealing) ಬಹಿರಂಗಗೊಳ್ಳುತ್ತದೆ. ಇದು ದಂಪತಿಗಳಿಗೆ ಪರಸ್ಪರರ ನಿಜವಾದ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.  ಇದರೊಂದಿಗೆ, ಇದು ಅವರ ನಡುವಿನ ವ್ಯತ್ಯಾಸಗಳನ್ನು ಸಹ ಹೊರತರುತ್ತದೆ. ಈ ವ್ಯತ್ಯಾಸಗಳ ಮೇಲೆ ಒಟ್ಟಿಗೆ ಕೆಲಸ ಮಾಡಲು ಅವರಿಗೆ ಅವಕಾಶವನ್ನು ನೀಡುತ್ತದೆ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಸಂಬಂಧಗಳು
ಮದುವೆ
ಪ್ರೀತಿ

Latest Videos
Recommended Stories
Recommended image1
ಅವನ ಮುಖ ಹೀಗಿತ್ತು, ಜಗತ್ತು ತಿರಸ್ಕರಿಸಿತು, ಅವಳು ಪ್ರೀತಿಸಿದಳು! ಹೀಗೊಂದು ಲವ್‌ ಸ್ಟೋರಿ
Recommended image2
27 ವರ್ಷಗಳ ದಾಂಪತ್ಯಕ್ಕೆ 250 ಕೋಟಿ ರೂ? ದಳಪತಿ-ಸಂಗೀತಾ ಡಿವೋರ್ಸ್​ಗೆ ಇದೇನಿದು ಟ್ವಿಸ್ಟ್​?
Recommended image3
ಒಂದು ಮದುವೆ ಮುರಿದುಬಿದ್ದರೂ ಮತ್ತೊಂದು ಕೈಹಿಡಿದಿದ್ದು ಹೇಗೆ? ಇದು ಯಾರಿಗೂ ಗೊತ್ತಿಲ್ಲದ ರಶ್ಮಿಕಾ ಮಂದಣ್ಣ ಗುಟ್ಟು..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved