MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಮುರಿದುಬಿದ್ದ ಸಂಬಂಧದಲ್ಲಿ ನಂಬಿಕೆ ಪುನರನಿರ್ಮಾಣ ಮಾಡಲು ಇಲ್ಲಿವೆ ಮಾರ್ಗಗಳು!

ಮುರಿದುಬಿದ್ದ ಸಂಬಂಧದಲ್ಲಿ ನಂಬಿಕೆ ಪುನರನಿರ್ಮಾಣ ಮಾಡಲು ಇಲ್ಲಿವೆ ಮಾರ್ಗಗಳು!

ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಕಾರಣಗಳಿಗೆ ಸಂಬಂಧಗಳು ಮುರಿದುಬಿಳುವುದು ಸಾಮಾನ್ಯವೆಂಬಂತಾಗಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಕೆಲವೊಮ್ಮೆ ಕಾರಣಗಳೇ ಇಲ್ಲದೆ ಮುರಿದುಬಿಳುವುದುಂಟು. ಹೀಗೆ ಮುರಿದುಬಿದ್ದ ಸಂಬಂಧಕ್ಕೆ ಕಾರಣವೇ ತಿಳಿಯದೆ ಬಹಳಷ್ಟು ಜನರು ಕೊರಗುತ್ತಾರೆ. 

2 Min read
Suvarna News
Published : Sep 11 2023, 02:32 PM IST| Updated : Sep 11 2023, 02:35 PM IST
Share this Photo Gallery
  • FB
  • TW
  • Linkdin
  • Whatsapp
16

ಅಪಾರವಾಗಿ ಗೌರವಿಸುವ ವ್ಯಕ್ತಿ, ಬಾಲ್ಯದ ಗೆಳೆಯ, ನೆರೆಹೊರೆಯವರು ಇದ್ದಕ್ಕಿದ್ದಂತೆ ಮಾತು ಬಿಡುತ್ತಾರೆ, ಏಕೆಂದು ಕೇಳುವುದಕ್ಕೆ ಆಗುವುದಿಲ್ಲ, ಅವರು ಸೂಕ್ತ ಕಾರಣ ಕೊಡುವುದಿಲ್ಲ. ಇಂಥ  ಸಂದರ್ಭದಲ್ಲಿ ಪರಸ್ಪರ ನಂಬಿಕೆ, ಸಂಬಂಧಗಳನ್ನು ಮರುನಿರ್ಮಾಣ ಮಾಡುವುದು ಒಂದು ಸಂಕಿರ್ಣ ಪ್ರಕ್ರಿಯೆ. ಇದರಲ್ಲಿ ಯಾರೋ ಒಬ್ಬರ ಪ್ರಯತ್ನದಿಂದ ನಡೆಯುವುದಿಲ್ಲ. ಮುರಿದಬಿದ್ದ ಸಂಬಂಧ ಪುನರ್ ನಿರ್ಮಾಣ ಮಾಡಲು ಎರಡು ಕಡೆಯಿಂದಲೂ ಪ್ರಯತ್ನವಾಗಬೇಕು. ಇಬ್ಬರಲ್ಲೂ ತಾಳ್ಮೆ, ತಿಳಿವಳಿಕೆ ಮತ್ತು ಬದ್ಧತೆಯಿರಬೇಕು. ಇದಕ್ಕಾಗಿ ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ಆದರೆ ಒಟ್ಟಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ನಂಬಿಕೆಯನ್ನು ಪುನರ್ನಿರ್ಮಿಸಲು ಮತ್ತು ಮೊದಲಿಗಿಂತ ಬಲವಾಗಿ ಹೊರಬರಲು ಸಾಧ್ಯವಿದೆ. ⁠

26

ಚಿಕಿತ್ಸಕರು ಸೂಚಿಸಿದ ಕೆಲವು ಮಾರ್ಗಗಳು ಇಲ್ಲಿವೆ. ಇವುಗಳನ್ನು ಅನುಸರಿಸುವ ಮೂಲಕ ಮುರಿದು ಸಂಬಂಧಗಳನ್ನು ಪುನರನಿರ್ಮಾಣ ಮಾಡಲು ಸಾಧ್ಯವಿದೆ. ಸಾಧ್ಯವಾದರೆ ಪ್ರಯತ್ನಿಸಿ ನೋಡಿ

36

ಮುಕ್ತ ಸಂವಹನ: ಯಾವುದೇ ವಿಚಾರಗಳಿರಲಿ ಅಲ್ಲಿ ಸಾಮಾನ್ಯವಾಗಿ ಪರಸ್ಪರ ವ್ಯತಿರಿಕ್ತ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಭಿನ್ನಾಭಿಪ್ರಾಯಗಳು ಎದುರಾದಾಗ ಒಟ್ಟಿಗೆ ಕುಳಿತು ಮುಕ್ತವಾಗಿ ಚರ್ಚಿಸುವುದು ಬಹಳ ಮುಖ್ಯ. ಬಹಳಷ್ಟು ಸಂಬಂಧಗಳು ಶಾಶ್ವತವಾಗಿ ಮುರಿದುಬಿಳಲು ಮುಕ್ತ ಸಂವಹನ ಕೊರತೆಯೇ ಆಗಿದೆ. ಸಂಬಂಧ ಮುರಿದುಬಿಳಲು ಕಾರಣವೇನು? ಸಮಸ್ಯೆ ಬೇರುಗಳಿರುವುದು ಎಲ್ಲಿ? ಮತ್ತು ಅದಕ್ಕೆ ಪರಿಹಾರಗಳೇನು ಎಂಬ ಬಗ್ಗೆ ಮುಕ್ತವಾಗಿ ಚರ್ಚಿಸುವುದು. ಹೀಗೆ ಮಾಡುವುದರಿಂದ ಸಂಬಂಧ ಪುನರನಿರ್ಮಾಣವಾಗುವುದಲ್ಲದೆ ಮುಂದೆ ಅವೇ ತಪ್ಪುಗಳು ಪುನರಾವರ್ತನೆಯಾಗದಂತೆ ತಡೆಯಬಹುದು.

46

 ಕ್ಷಮೆಯಾಚಿಸಿ: ನಾವು ಮನುಷ್ಯರೇ ಹೀಗೆ ಜನರ ನೂರು ತಪ್ಪುಗಳನ್ನು ಗುರುತಿಸುತ್ತೇವೆ, ಖಂಡಿಸುತ್ತೇವೆ. ಆದರೆ ನಮ್ಮಿಂದಾಗುವ ಎರಡು ತಪ್ಪುಗಳನ್ನ ಒಪ್ಪಿ ಕ್ಷಮೆಯಾಚಿಸುವುದಿಲ್ಲ! ಸಂಬಂಧ ಪುನರನಿರ್ಮಾಣದಲ್ಲಿ ನಂಬಿಕೆಯನ್ನು ಪುನರ್ನಿರ್ಮಿಸಲು ಮಾಡಬೇಕಾದ ಪ್ರಾಥಮಿಕ ವಿಷಯವೆಂದರೆ ನಾವು ಮಾಡಿದ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ಇದು ಪರಿಸ್ಥಿತಿಯನ್ನು ಪ್ರಬುದ್ಧವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ನಾವು ನಮ್ಮ ವರ್ತನೆಗಾಗಿ ಕ್ಷಮೆಯಾಚಿಸಬೇಕು ಮತ್ತು ಮತ್ತೆಂದೂ ಅದೇ ತಪ್ಪುಗಳನ್ನು ಮಾಡದಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

56

ಪಾರದರ್ಶಕವಾಗಿರಿ: ಸಂಬಂಧಗಳಲ್ಲಿ ಪಾರದರ್ಶಕ, ಪ್ರಾಮಾಣಿಕತೆ ಮತ್ತು ಸ್ಪಷ್ಟತೆಯ ನಿಲುವು ಬಹಳ ಮುಖ್ಯ. ನಂಬಿಕೆ ಎನ್ನುವುದು ಸ್ಟಿಕರ್‌ನಂತೆ ಒಮ್ಮೆ ಕಿತ್ತಿದರೆ ಮತ್ತೆ ಪುನಃ ಅಂಟಿಸಬಹುದು ಆದರೆ ಮೊದಲಿನಷ್ಟು ಬಿಗಿಯಾಗಿರುವುದಿಲ್ಲ. ಕೆಲವೊಮ್ಮೆ ಸ್ಪಷ್ಟತೆ, ಪಾರದರ್ಶಕವಾಗಿದ್ದು ಸಂಬಂಧಗಳು ಮುರಿದುಬಿದ್ದರೆ ಪುನರನಿರ್ಮಾಣ ಮಾಡಲು ಪ್ರಯತ್ನಿಸಿ ಆಗಲೂ ವಿಫಲವಾದರೆ ಕೊರಗಬೇಕಿಲ್ಲ.

66

ವೃತ್ತಿಪರ ಸಹಾಯವನ್ನು ಪಡೆದುಕೊಳ್ಳಿ: ಸಂಬಂಧದಲ್ಲಿ ನಂಬಿಕೆಯನ್ನು ಪುನರ್ನಿರ್ಮಿಸಲು ಇಬ್ಬರಿಂದಲೂ ಸಾಧ್ಯವಾಗುತ್ತಿಲ್ಲ ಎನಿಸಿದರೆ ಪರಿಹಾರಗಳನ್ನು ಹುಡುಕಲು ವೃತ್ತಿಪರ ಸಹಾಯವನ್ನು ಪಡೆಯಲು ನಾವು ಹಿಂಜರಿಯಬಾರದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಸಂಬಂಧಗಳು

Latest Videos
Recommended Stories
Recommended image1
2026 ರಲ್ಲಿ ಮದುವೆಯಾಗುವ ರಾಶಿ ಇವು, ನಿಮ್ಮ ರಾಶಿಗಿದೆಯೇ ಮದುವೆಯ ಭಾಗ್ಯ
Recommended image2
ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Recommended image3
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved