ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!
ಜೀವನದಲ್ಲಿ ಉತ್ತಮ ಸಂಗಾತಿ ಬಂದರೆ ಅವರ ಜೀವನ ಸ್ವರ್ಗದಂತಿರುತ್ತದೆ. ಮೌಲ್ಯಗಳಿಲ್ಲದ ಸಂಗಾತಿ ಬಂದರೆ ಕಷ್ಟಗಳಿಂದ ತುಂಬಿರುತ್ತದೆ. ಚಾಣಕ್ಯನ ಪ್ರಕಾರ, ಜೀವನ ಸಂಗಾತಿ ಹೇಗಿದ್ದರೆ ಕಷ್ಟಗಳು ತಪ್ಪುವುದಿಲ್ಲ ಎಂದು ನೋಡೋಣ.

ಜೀವನಪೂರ್ತಿ ಕಷ್ಟ ತಪ್ಪದು
ಆಚಾರ್ಯ ಚಾಣಕ್ಯರ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರ ಬರಹಗಳು ಮತ್ತು ಬೋಧನೆಗಳು ಇಂದಿಗೂ ಪ್ರಸಿದ್ಧ. ಚಾಣಕ್ಯರು ಹಲವು ವರ್ಷಗಳ ಹಿಂದೆಯೇ ತಮ್ಮ ಚಾಣಕ್ಯ ನೀತಿಯಲ್ಲಿ ಮಾನವ ಸಂಬಂಧಗಳ ಬಗ್ಗೆ ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಮದುವೆ ಸಂಬಂಧದಲ್ಲಿ ನೋವು, ಕಷ್ಟಗಳು ಬರಲು ಕೆಲವು ಪ್ರಮುಖ ಕಾರಣಗಳಿವೆ. ಕೆಲವು ಗುಣಗಳಿರುವ ಸಂಗಾತಿ ಜೀವನದಲ್ಲಿದ್ದರೆ ಜೀವನಪೂರ್ತಿ ಕಷ್ಟ ತಪ್ಪದು. ಅವು ಯಾವುವು ಎಂದು ಇಲ್ಲಿ ವಿವರವಾಗಿ ತಿಳಿಯೋಣ.
ನಂಬಿಕೆ ಹೋಗಿ ಜಗಳ ಶುರು
'ಸುಳ್ಳುಗಾರ ದಾಂಪತ್ಯಕ್ಕೆ ಯೋಗ್ಯನಲ್ಲ' ಎಂಬುದು ಚಾಣಕ್ಯನ ಮಾತು. ಸಂಗಾತಿ ಸುಳ್ಳು ಹೇಳಿದರೆ ನಂಬಿಕೆ ಹೋಗಿ ಜಗಳ ಶುರುವಾಗುತ್ತದೆ.
ಅಹಂಕಾರದ ಸ್ವಭಾವ
ಅಹಂಕಾರವನ್ನು 'ಕುಟುಂಬ ನಾಶದ ಮೂಲ' ಎಂದಿದ್ದಾನೆ. ಅಹಂಕಾರವಿರುವ ವ್ಯಕ್ತಿ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ.
ಕೆಟ್ಟ ವಾತಾವರಣಕ್ಕೆ ಕಾರಣ
ಚಾಣಕ್ಯನ ಪ್ರಕಾರ, ಗಂಡ-ಹೆಂಡತಿಯರಲ್ಲಿ ಒಬ್ಬರಿಗೆ ಅಸೂಯೆ ಹೆಚ್ಚಿದ್ದರೆ, ಇನ್ನೊಬ್ಬರ ಯಶಸ್ಸನ್ನು ಸಹಿಸುವುದಿಲ್ಲ. ಇದು ಕುಟುಂಬದಲ್ಲಿ ಕೆಟ್ಟ ವಾತಾವರಣಕ್ಕೆ ಕಾರಣವಾಗುತ್ತದೆ.
ಸಹನೆ ಇಲ್ಲದಿರುವುದು
'ಕೋಪಿಷ್ಠ ಸಂಗಾತಿ ಮನೆಯನ್ನು ಹಾಳುಮಾಡುತ್ತಾನೆ.' ಕೋಪ ಬಂದಾಗ ನಿಯಂತ್ರಣ ಕಳೆದುಕೊಳ್ಳುವ ವ್ಯಕ್ತಿ ಮನೆಯಲ್ಲಿ ಭಯ ಹುಟ್ಟಿಸುತ್ತಾನೆ. ಇದು ಮಕ್ಕಳಿಗೆ ಒಳ್ಳೆಯದಲ್ಲ.
ಅವರು ಸ್ವಾರ್ಥಿಗಳು
ಪ್ರಾಮಾಣಿಕತೆ, ಗೌರವ, ಕೃತಜ್ಞತೆ, ಪ್ರೀತಿ, ಜವಾಬ್ದಾರಿ ಇಲ್ಲದ ಸಂಗಾತಿ ಜೀವನವನ್ನು ಹಾಳುಮಾಡುತ್ತಾರೆ. ಅವರು ಸ್ವಾರ್ಥಿಗಳು.
ಚಟಗಳಿರುವ ಸಂಗಾತಿ
ಕೆಟ್ಟ ಚಟಗಳಿರುವ ವ್ಯಕ್ತಿ ಕುಟುಂಬಕ್ಕೆ ಆರ್ಥಿಕ ಹೊರೆ ಮತ್ತು ಮಾನಸಿಕ ಒತ್ತಡ ತರುತ್ತಾನೆ. ಪ್ರೀತಿ ಇದ್ದರೂ ಭದ್ರತೆ ಇರುವುದಿಲ್ಲ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ದಾಂಪತ್ಯ ಜೀವನವನ್ನು ಹಾಳುಮಾಡುತ್ತದೆ
ಚಾಣಕ್ಯ ನೀತಿಯ ಪ್ರಕಾರ, "ಗೌರವವಿಲ್ಲದ ಮನೆಯಲ್ಲಿ ಶಾಂತಿ ಇರುವುದಿಲ್ಲ." ಸಂಗಾತಿಗೆ ಅಗೌರವ ತೋರುವುದು, ಅವಮಾನಿಸುವುದು, ಮಾತುಗಳಿಂದ ನೋಯಿಸುವುದು ದಾಂಪತ್ಯ ಜೀವನವನ್ನು ಹಾಳುಮಾಡುತ್ತದೆ. ಗೌರವವಿಲ್ಲದ ಸಂಬಂಧದಲ್ಲಿ ಎಂದಿಗೂ ಸಂತೋಷ ಇರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

