ಲಾಕ್ಡೌನ್ ಮಧ್ಯೆ ಸಿಎಂ ಮನೆಗೆ ಹೊಸ ಅತಿಥಿ: ಸಂತಸದಿಂದ ಸ್ವಾಗತಿಸಿದ ಬಿಎಸ್ವೈ
ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರಂತರ ಶ್ರಮವಹಿಸುತ್ತಿದ್ದಾರೆ. ಮತ್ತೊಂದೆಡೆ ಆರ್ಥಿಕ ಪುನಶ್ಚೇತನ ನೀಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಲಾಕ್ಡೌನ್ ಮಧ್ಯೆ ಸಿಎಂ ಬಿಎಸ್ ಯಡಿಯೂರನವರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದ್ದು, ಇವರನ್ನು ಬಿಎಸ್ವೈ ಸಂತಸದಿಂದ ಹೊಸ ಮನೆಗೆ ಬರಮಾಡಿಕೊಂಡಿದ್ದಾರೆ.
ಲಾಕ್ಡೌನ್ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಹೊಸ ಅತಿಥಿ ಆಗಮನವಾಗಿದೆ.
ಯಲಹಂಕ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ವಿಶ್ವನಾಥ್ ಅವರು ಬಿಎಸ್ವೈ ಕೊಡುಗೆ ನೀಡಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ಹಸುಗಳ ಕೊಡುಗೆ ನೀಡಿದ್ದಾರೆ.
ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂಗೆ ಗಿರ್ ತಳಿಯ ಎರಡು ಹಸುಗಳನ್ನು ನೀಡಿದ್ದಾರೆ.
ಶುಭ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸೇರಿದಂತೆ ಅವರ ಕುಟುಂಬ ವರ್ಗ ಹೊಸ ಅತಿಥಿಗಳನ್ನು ಸ್ವಾಗತ ಮಾಡಿದರು.
ಒಂದು ಹಸು ಹತ್ತು ಲೀಟರ್ ಹಾಲು ಕೊಡುತ್ತಿದ್ದು, ಮತ್ತೊಂದಕ್ಕೆ ಗರ್ಭ ಧಾರಣೆ ಆಗಿದೆ.
ಕಾವೇರಿ ನಿವಾಸದಲ್ಲಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದ್ದು, ಹಸುಗಳ ಹಾರೈಕೆಯನ್ನು ಸಿಎಂ ಬಿಎಸ್ವೈ ಕುಟುಂಬದವರೇ ನೋಡಿಕೊಳ್ಳಲಿದ್ದಾರೆ.