ಮೋದಿ ದಿಗ್ವಿಜಯ ಕಣ್ಣು ತುಂಬಿಕೊಂಡ ಕುವೈತ್ ಕನ್ನಡಿಗರು
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರ ದಿಗ್ವಿಜಯದ ದಂಡಯಾತ್ರೆಯನ್ನು ಸಮುದ್ರದ ಆಚೆಗಿನ ಕನ್ನಡಿಗರು ಸಂಭ್ರಮಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದಿಗ್ವಿಜಯ ಭಾರತೀಯರು ಅಲ್ಲದೇ ಭಾರತದಿಂದ ವಿವಿಧ ದೇಶಗಳಿಗೆ ತೆರಳಿ ಅಲ್ಲಿ ನೆಲೆ ನಿಂತವರು ಸಂಭ್ರಮಿಸುವಂತೆ ಮಾಡಿದೆ.
ದೇಶದಿಂದ ದೂರದಲ್ಲಿ ನೆಲೆ ನಿಂತ ಕನ್ನಡಿಗರು ಸಹ ಸಿಹಿ ಹಂಚಿ ಸಂಭ್ರಮಿಸಿದರು.
ಕುವೈತ್ ನಲ್ಲಿಯೂ ಮೋದಿ ಗೆಲುವಿಗೆ ಸಿಹಿ ಹಂಚಿ, ಮೋದಿ ಮುಖವಾಡ ಧರಿಸಿ ಸಂಭ್ರಮ.
ಭಾರತೀಯ ಪ್ರವಾಸಿ ಪರಿಷತ್ ಮೋದಿ ದಿಗ್ವಿಜಯ ವೀಕ್ಷಣೆ ಅವಕಾಶ ಮಾಡಿಕೊಟ್ಟಿತ್ತು.
ಬಿನ್ನಿ ಸೆಬಾಸ್ಟಿಯನ್, ರಾಜ್ ಭಂಡಾರಿ, ಮಂಜೇಶ್ವರ ಮೋಹನದಾಸ್ ಕಾಮತ್, ಕೋಲ್ಕತ್ತಾ ಮೂಲದ ಉದ್ಯಮಿ ಎಂಎಸ್ ರಾಯ್, ದೀಕ್ಷಿತ್ ಯೆಕ್ಕೂರ್, ಸವಿನಯ್ ಮಂಗಳೂರು, ಅಜಿತ್ ಕಾಸರಗೋಡು, ಶೇಖರ್ ಕಾಸರಗೋಡು ಸೇರಿದಂತೆ ಹಲವರು ಹಾಜರಿದ್ದರು.
700ಕ್ಕೂ ಅಧಿಕ ಮಂದಿ ಮೋದಿ ದಿಗ್ವಿಜಯದ ನೇರ ಪ್ರಸಾರಕ್ಕೆ ಸಾಕ್ಷಿಯಾದರು.