ಯಡಿಯೂರಪ್ಪ ಪ್ರಮಾಣ, ಪೋಟೋಗಳಲ್ಲಿ ಅನಾವರಣ..ಯಾರೆಲ್ಲ ಬಂದಿದ್ರು?
ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ. ಹಸಿರು ಶಾಲು ಹೊದ್ದು ಬಂದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗಾದರೆ ಜುಲೈ 26 ರಂದು ಬಿಎಸ್ ವೈ ದಿನಚರಿ ಹೇಗಿತ್ತು?ಪ್ರಮಾಣ ವಚನದ ಹೈಲೈಟ್ಸ್ ಏನು?
22ನೇ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ.
ಕಾಂಗ್ರೆಸ್ ನಾಯಕ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿ.
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು...
ಸಂಸದೆ ಶೋಭಾ ಕರಂದ್ಲಾಜೆ ಆದಿಯಾಗಿ ಬಿಜೆಪಿ ನಾಯಕರ ಸಂಭ್ರಮ
ರಾಷ್ಟ್ರಗೀತೆಗೆ ವಂದನೆ
ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕಾರ
ಮತ್ತೊಮ್ಮೆ ಸಿಎಂ ಆದ ಸಂಭ್ರಮ
ಪ್ರಮಾಣಕ್ಕೂ ಮುನ್ನ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ.
ಯಡಿಯೂರಪ್ಪ ಜತೆ ಹೆಜ್ಜೆ ಹಾಕಿದ ನಾಯಕರು
ಪ್ರಮಾಣಕ್ಕೂ ಮುನ್ನ ದೇವರ ಆಶೀರ್ವಾದ
ರಾಜ್ಯಪಾಲರಿಂದ ಶುಭಾಶಯ
ಪ್ರಮಾಣಕ್ಕೂ ಮುನ್ನ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹುತಾತ್ಮರಿಗೆ ವಂದನೆ