MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • 3 ವರ್ಷಗಳ Shrirasthu Shubhamasthuಗೆ ಇಂದು ಅಂತ್ಯ! ಅಂದುಕೊಂಡದ್ದೇನು? ಆಗಿದ್ದೇನು?

3 ವರ್ಷಗಳ Shrirasthu Shubhamasthuಗೆ ಇಂದು ಅಂತ್ಯ! ಅಂದುಕೊಂಡದ್ದೇನು? ಆಗಿದ್ದೇನು?

2022ರ ಅಕ್ಟೋಬರ್​ನಿಂದ ಶುರುವಾದ ಶ್ರೀರಸ್ತು ಶುಭಮಸ್ತು ಸೀರಿಯಲ್ ಕೊನೆಗೂ ಅಂತ್ಯ ಕಂಡಿದೆ. ಚಿತ್ರ ವಿಚಿತ್ರ ತಿರುವುಗಳ ಮೂಲಕ ಕೊನೆಗೆ ಧಾರಾವಾಹಿಯಲ್ಲಿ ಆಗಿದ್ದೇನು? 

2 Min read
Suchethana D
Published : Aug 31 2025, 04:06 PM IST
Share this Photo Gallery
  • FB
  • TW
  • Linkdin
  • Whatsapp
17
ಕೊನೆಗೂ ಮುಗಿದ ಶ್ರೀರಸ್ತು ಶುಭಮಸ್ತು
Image Credit : Instagram

ಕೊನೆಗೂ ಮುಗಿದ ಶ್ರೀರಸ್ತು ಶುಭಮಸ್ತು

ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿದೇ ಬಿಡ್ತು ಎನ್ನುವಷ್ಟರಲ್ಲಿಯೇ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇತ್ತು. ಶಾರ್ವರಿಯ ಕುತಂತ್ರ ತಿಳಿಯಿತು, ಸೀರಿಯಲ್​ ಮುಗಿಯತ್ತೆ ಅಂದುಕೊಳ್ಳುವಷ್ಟರಲ್ಲಿ ಅವಳು ನಾಪತ್ತೆಯಾದಳು. ಕೈಯಲ್ಲಿ ದುಡ್ಡು ಇಲ್ಲದಿದ್ದರೂ ರೌಡಿಗಳನ್ನು ಹೇಗೆ ಸಾಕಿದಳು ಎನ್ನುವುದೇ ಪ್ರಶ್ನಾರ್ಹವಾಗಿ ಉಳಿದುಕೊಂಡಿತು. ಕೊನೆಗೆ ಅವಳ ಅಕ್ಕ ಶರ್ಮಿಳಾ ಸಿಕ್ಕಾಗ, ಅಲ್ಲೊಂದಿಷ್ಟು ವಿಚಿತ್ರಗಳೇ ನಡೆದುಹೋದವು. 2022ರ ಅಕ್ಟೋಬರ್​ನಿಂದ ಶುರುವಾದ ಈ ಸೀರಿಯಲ್​ಗೆ 3 ವರ್ಷಗಳಾಗಿವೆ.

27
ರಾಧಾಳೇ ಶರ್ಮಿಳಾ
Image Credit : zee5

ರಾಧಾಳೇ ಶರ್ಮಿಳಾ

ಕೊನೆಗೆ ರಾಧಾಳೇ ಶರ್ಮಿಳಾ ಎಂದು ತಿಳಿದಾಗ, ಶಾರ್ವರಿ ಒಳ್ಳೆಯವಳಾಗುತ್ತಾಳೆ ಎಂದುಕೊಂಡರೆ ಹಾಗೂ ಆಗದೇ ಮತ್ತದೇ ಕಿಡ್ನಾಪ್​, ಸಾಯಿಸಲು ಪ್ರಯತ್ನ ಎಲ್ಲವೂ ನಡೆದವು. ಎಲ್ಲವೂ ಚಿತ್ರ-ವಿಚಿತ್ರಗಳಂತೆಯೇ ನಡೆಯತೊಡಗಿದವು. ವಯಸ್ಸಾದವರ ಮದುವೆಯ ಸುಮಧುರ ಕಥೆಯಿಂದ ಪ್ರಾರಂಭವಾದ ಸೀರಿಯಲ್ ಎಲ್ಲೋ ತಾಳ ತಪ್ಪುತ್ತಿದೆ ಎಂದು ಹಲವರು ಅಂದುಕೊಂಡದ್ದೂ ಇದೆ.

Related Articles

Related image1
ಸ್ಕೇಟಿಂಗ್ ಶೂಸ್​ನಲ್ಲೇ ಕ್ಯಾಟ್​ವಾಕ್​ ಮಾಡಿದ Bhagyalakshmi ಭಾಗ್ಯ! ಆದಿ ಬಂದ ಖುಷಿಗಾ ಕೇಳ್ತಿರೋ ಫ್ಯಾನ್ಸ್​
Related image2
ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ 'ಅಣ್ಣಯ್ಯ' ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ...
37
ತುಳಸಿ-ಮಾಧವ ಪ್ರೀತಿಯ ಪಯಣ
Image Credit : Instagram

ತುಳಸಿ-ಮಾಧವ ಪ್ರೀತಿಯ ಪಯಣ

ಆರಂಭದಲ್ಲಿ ಮಾಧವ್​ ಮತ್ತು ತುಳಸಿ ಒಂದಾಗಲಿ ಎಂದು ಅಂದುಕೊಂಡವರು ಹಲವರಾಗಿದ್ದರೆ, ಈ ವಯಸ್ಸಲ್ಲಿ ಮದುವೆಯಾಕೆ ಅಂದವರ ಮತ್ತೊಂದಿಷ್ಟು ಮಂದಿ. ಆದರೆ ಪ್ರೀತಿ, ಮದುವೆ, ಒಂಟಿತನದ ತೊಳಲಾಟಕ್ಕೆ ಸಂಗಾತಿ ಬೇಕು ಎನ್ನುವುದನ್ನು ಸಾರುವ ಉದ್ದೇಶದಿಂದ ಮಾಧವ್​ ಮತ್ತು ತುಳಸಿಯನ್ನು ಮದುವೆ ಮಾಡಲಾಯಿತು. ಇವರಿಬ್ಬರ ಸುಮಧುರ ಪ್ರೀತಿಗೆ ಹಲವರು ಖುಷಿ ಪಟ್ಟರು. ನಿಜಕ್ಕೂ ಇದೊಂದು ಒಳ್ಳೆಯ ಸಂದೇಶ ಎಂದರು.

47
ಗರ್ಭಿಣಿಯಾದಾಗ ಹಂಗಾಮಾ
Image Credit : Instagram

ಗರ್ಭಿಣಿಯಾದಾಗ ಹಂಗಾಮಾ

ಕೊನೆಗೆ ನಾವಿಬ್ಬರೂ ಸ್ನೇಹಿತರಾಗಿಯೇ ಇರೋಣ ಎಂದುಕೊಂಡಿದ್ದ ಡೈಲಾಗ್​ ತುಳಸಿ ಗರ್ಭಿಣಿ ಎಂದು ತಿಳಿದಾಗ ವೀಕ್ಷಕರು ಮತ್ತೊಂದಿಷ್ಟು ಶಾಕ್​ಗೆ ಒಳಗಾದರು. ಆಗಂತೂ ಒಂದು ಹಂತದಲ್ಲಿ ವಾಹಿನಿಯವರು ಕಮೆಂಟ್​ ಸೆಕ್ಷನ್​ ಆಫ್ ಮಾಡುವಷ್ಟರ ಮಟ್ಟಿಗೆ ಟೀಕೆಗಳೇ ಹರಿದು ಬಂದವು. ಇದರ ಹೊರತಾಗಿಯೂ ಈ ವಯಸ್ಸಿನಲ್ಲಿ ಮಗುವಾದರೆ ತಪ್ಪೇನು ಎಂದು ಹೇಳಿದವರೂ ಇದ್ದಾರೆ.

57
ತುಳಸಿ ಮಗುವನ್ನು ಒಪ್ಪಿಕೊಂಡು ಮನಗೆದ್ದ ಕಥೆ
Image Credit : Instagram

ತುಳಸಿ ಮಗುವನ್ನು ಒಪ್ಪಿಕೊಂಡು ಮನಗೆದ್ದ ಕಥೆ

ಆದರೆ, ಕೊನೆಗೆ ಎಲ್ಲರೂ ತುಳಸಿಯ ಮಗುವನ್ನು ಒಪ್ಪಿಕೊಂಡರು. ಬಳಿಕ ಶಾರ್ವರಿ ನಾಪತ್ತೆ, ರಾಧಾಳ ಪ್ರತ್ಯಕ್ಷತೆ. ಮಗುವನ್ನು ಶಾರ್ವರಿ ಕಿಡ್ನಾಪ್​ ಮಾಡಿದ್ದು ಅದರ ಮೇಲೆ ಅವಳಿಗೆ ಪ್ರೀತಿ ಹುಟ್ಟಿದ್ದು.... ಹೀಗೆ ಚಿತ್ರ-ವಿಚಿತ್ರವಾಗಿಯೇ ಸೀರಿಯಲ್​ ಮುಂದುವರೆದು ಅಂತೂ ಇಂದು ಅದು ಅಂತ್ಯ ಕಾಣುತ್ತಿದೆ.

67
ಪೊಲೀಸರ ಕೈ ಸೇರಿದ ಶಾರ್ವರಿ
Image Credit : Instagram

ಪೊಲೀಸರ ಕೈ ಸೇರಿದ ಶಾರ್ವರಿ

ಶಾರ್ವರಿ ಪೊಲೀಸರ ಕೈಗೆ ಕೊನೆಗೂ ಸೇರಿದ್ದಾಳೆ. ಆದರೆ ಸೀರಿಯಲ್​ಗಳಲ್ಲಿ ಪೊಲೀಸರು, ತನಿಖಾಕಾಧಿಕಾರಿಗಳು ಎಲ್ಲರೂ ಸೀರಿಯಲ್​ ನಾಯಕ, ನಾಯಕರೇ ಆಗಿರುತ್ತಾರೆಯೇ ವಿನಾ ಪೊಲೀಸರು ದಡ್ಡರು ಎನ್ನುವಂತೆ ತೋರಿಸಲಾಗುತ್ತದೆ. ಅದರಲ್ಲಿಯೂ ಹಾಗೆಯೇ ಆಗಿ ಕೊನೆಗೆ ಎಲ್ಲವೂ ಸುಖಾಂತ್ಯಗೊಂಡಿದೆ. ಶಾರ್ವರಿ ಜೈಲುಪಾಲಾಗಿದ್ದು, ಎಲ್ಲರು ಅಂದುಕೊಂಡಂತೆ ಸೀರಿಯಲ್​ ಅಂತ್ಯಕಂಡಿದೆ.

77
ಟ್ವಿಸ್ಟ್​ ಇಲ್ಲದೇ ಅಂತ್ಯ
Image Credit : Instagram

ಟ್ವಿಸ್ಟ್​ ಇಲ್ಲದೇ ಅಂತ್ಯ

ಕೊನೆಯಲ್ಲಿ ಹೇಳಿಕೊಳ್ಳುವಂಥ ಟ್ವಿಸ್ಟ್​ ಏನೂ ಇರಲಿಲ್ಲ ಎಂದು ಒಂದಿಷ್ಟು ಮಂದಿ, ಒಂದೊಳ್ಳೆ ಸೀರಿಯಲ್​ ಹಾದಿ ತಪ್ಪಿಸಿದ್ದು ಸರಿಯಲ್ಲ ಎಂದು ಮತ್ತೊಂದಿಷ್ಟು ಮಂದಿ, ಶಾರ್ವರಿ ದುಡ್ಡಿಲ್ಲದಿದ್ದರೂ ರೌಡಿಗಳನ್ನು ಹೇಗೆ ಇಟ್ಟುಕೊಂಡಳು ಎಂದು ಇನ್ನೊಂದಿಷ್ಟು ಮಂದಿ... ಹೀಗೆ ಪ್ರಶ್ನೆಗಳ ನಡುವೆಯೇ, ತರಾತುರಿಯಿಲ್ಲದೇ ಎಂಡ್​ ಮಾಡಿದ್ದು ಮಾತ್ರ ನೆಮ್ಮದಿ ಕೊಟ್ಟಿದೆ. ಇದು ನೆಟ್ಟಿಗರ ಕಮೆಂಟ್​ಗಳಿಂದ ತಿಳಿದುಬರುತ್ತದೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved