MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • 'ಜಸ್ಟ್‌ NTR ಸಲುವಾಗಿ ನಾನು ಈ ಕೆಲಸ ಮಾಡಿದ್ದೆ..' ಕಾಜಲ್‌ ಅಗರ್ವಾಲ್‌ ಮಾತಿನ ಅರ್ಥವೇನು..

'ಜಸ್ಟ್‌ NTR ಸಲುವಾಗಿ ನಾನು ಈ ಕೆಲಸ ಮಾಡಿದ್ದೆ..' ಕಾಜಲ್‌ ಅಗರ್ವಾಲ್‌ ಮಾತಿನ ಅರ್ಥವೇನು..

ನಟಿ ಕಾಜಲ್‌ ಅಗರ್ವಾಲ್‌ ಬಹಳ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.  ಈ ವೇಳೆ ಅವರು ಹೇಳಿರುವ ಮಾತು ಸಖತ್‌ ವೈರಲ್‌ ಆಗಿದೆ.

2 Min read
Author : Santosh Naik
| Updated : May 10 2024, 11:15 AM IST
Share this Photo Gallery
  • FB
  • TW
  • Linkdin
  • Whatsapp
114

ಕಾಜಲ್ ಅಗರ್ವಾಲ್ ಬಹಳ ದಿನಗಳ ನಂತರ ಸಂದರ್ಶನವೊಂದನ್ನು ನೀಡಿದ್ದು. ಎನ್‌ಟಿಆರ್‌ ಬಗ್ಗೆ ಆಕೆಯ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಜೂನಿಯರ್‌ ಎನ್‌ಟಿಆರ್‌ ಎನ್ನುವ ಏಕೈಕ ಕಾರಣಕ್ಕಾಗಿ ಈ ಕೆಲಸ ಮಾಡಿದ್ದಾಗಿ ಕಾಜಲ್‌ ಅಗರ್ವಾಲ್‌ ಹೇಳಿದ್ದಾರೆ.

214

ಬಹಳ ದೀರ್ಘ ಸಮಯದ ಕಾಲ ದಕ್ಷಿಣ ಭಾರತದ ಸಿನಿಮಾರಂಗವನ್ನು (South Indian Movie Industry) ಆಳಿದ ಕೆಲವೇ ಕೆಲವು ನಟಿಮಣಿಯರಲ್ಲಿ ಕಾಜಲ್‌ ಅಗರ್ವಾಲ್‌ ಕೂಡ ಒಬ್ಬರು. ಅವರ ಹವಾ ಬಹಳ ದೀರ್ಘಕಾಲದವರೆಗೂ ಚಾಲ್ತಿಯಲ್ಲಿತ್ತು.

314

ಸುಮಾರು ಎರಡು ದಶಕಗಳಿಂದ ಅವರು ಸ್ಟಾರ್ ಹೀರೋಯಿನ್ (Star Heroine) ಪಟ್ಟವನ್ನು ಅನುಭವಿಸಿದ್ದರು. ಅವರು ಟಾಲಿವುಡ್ (Tollywood) - ಕಾಲಿವುಡ್‌ (Kollywood)ನಲ್ಲಿ ಟಾಪ್ ಸ್ಟಾರ್‌ಗಳ ಎದುರು ನಟಿಸಿದ್ದಾರೆ.
 

414

ಚಿರಂಜೀವಿ, ಬಾಲಕೃಷ್ಣ ಅವರಂತಹ ಹಿರಿಯ ನಾಯಕರ ಜೊತೆ ಜೊತೆಯಾಗಿ ನಟಿಸಿದ ದಾಖಲೆಯೂ ಇವರದಾಗಿದೆ. ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಮೂಲಕ ಅವರ ವೃತ್ತಿಜೀವನವನ್ನು (Career) ಅದ್ಭುತವಾಗಿ ಆರಂಭಿಸಿದ್ದರು. 
 

514

ಮಗಧೀರ ಸಿನಿಮಾದ ಮಹಾ ಯಶಸ್ಸಿನ ನಂತರ ಕಾಜಲ್ ಹಿಂತಿರುಗಿ ನೋಡಲೇ ಇಲ್ಲ. ಮಗಧೀರದ ನಂತರವೂ ಅವರ ಸಾಲು ಸಾಲು ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಗಳಿಸುವಲ್ಲಿ ಯಶಸ್ವಿಯಾಯಿತು.
 

614

ಕಾಜಲ್ ಅಗರ್ವಾಲ್ ಬಹಳ ಸಮಯದ ನಂತರ ಟಾಕ್ ಶೋನಲ್ಲಿ ಭಾಗವಹಿಸಿದ್ದಾರೆ. ಜನಪ್ರಿಯ ಹಾಸ್ಯನಟ ಆಲಿ ಆಯೋಜಿಸಿರುವ ಫನ್ ವಿತ್ ಆಲಿ ಸೀಸನ್ 2 ಗೆ ಅತಿಥಿಯಾಗಿ ಪಾಲ್ಗೊಂಡಿದ್ದರು. 

714

ಅವರ ಇತ್ತೀಚಿನ ಚಲನಚಿತ್ರ ಸತ್ಯಭಾಮಾ ಸಂಗಟು ಜೊತೆಗೆ, ಅವರು ತಮ್ಮ ಅಭಿಮಾನಿಗಳೊಂದಿಗೆ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳನ್ನು ಟಾಕ್‌ ಶೋನಲ್ಲಿ ಹಂಚಿಕೊಂಡಿದ್ದಾರೆ.
 

814

ತೆಲುಗಿನಲ್ಲಿ ಕಾಜಲ್ ಅವರ ಮೊದಲ ಚಿತ್ರ ಲಕ್ಷ್ಮಿ ಕಲ್ಯಾಣಂ ಮತ್ತು ನಿರ್ದೇಶಕ ತೇಜಾ ಅವರನ್ನು ಹೇಗೆ ಆಯ್ಕೆ ಮಾಡಿದರು ಎಂದು ಅಲಿ ಪ್ರಶ್ನೆ ಮಾಡಿದ್ದಾರೆ.. ಫೋಟೋಗಳನ್ನು ನೋಡಿದ ನಂತರ ತೇಜಾ ಆಡಿಷನ್‌ಗೆ ಕರೆದಿದ್ದರು ಎಂದಿದ್ದಾರೆ. ಇದು ಜೀವನದಲ್ಲಿ ನನ್ನ ಮೊದಲ ಆಡಿಷನ್ (Audition) ಆಗಿತ್ತು ಎಂದು ಕಾಜಲ್‌ ತಿಳಿಸಿದ್ದಾರೆ.
 

914

ಆಡಿಷನ್‌ನಲ್ಲಿ ನನಗೆ ಅಳಲು ಅವರು ಹೇಳಿದ್ದರು. ನಾನು ನನ್ನ ಜೀವನದಲ್ಲಿ ಎಂದೂ ಅತ್ತೇ ಇರಲಿಲ್ಲ. ಈ ಹಂತದಲ್ಲಿ ನನ್ನ ತಂದೆ ಏನೋ ಹೇಳಿದಾಗ ನನಗೆ ಅಳು ಬಂತು. ಅದರ ಬೆನ್ನಲ್ಲಿಯೇ ನಾನು ಚಿತ್ರಕ್ಕೆ ಸೆಲೆಕ್ಟ್‌ ಆದೆ ಎಂದಿದ್ದಾರೆ.

 

1014

ನಿಮ್ಮದು ಪ್ರೇಮ ವಿವಾಹವೇ (Love Marriage) ಅಥವಾ ಅರೇಂಜ್ಡ್‌ ವಿವಾಹವೇ? (Arranged Marriage) ಎನ್ನುವ ಪ್ರಶ್ನೆಗೆ..ನನಗೆ ಗೌತಮ್ ಕಿಚ್ಲು (ಕಾಜಲ್ ಪತಿ) ಹತ್ತು ವರ್ಷಗಳಿಂದ ಗೊತ್ತು.  ಲಾಕ್‌ಡೌನ್ (Lockdown) ಸಮಯದಲ್ಲಿ ಇಡೀ ವಿಶ್ವವೇ ಸ್ತಬ್ಧಗೊಂಡಿತ್ತು. ಏನಾಗುತ್ತೋ ಗೊತ್ತಿರಲಿಲ್ಲ. ಆಗ ನಾವು ಮದುವೆಯಾಗಲು ನಿರ್ಧರಿಸಿದ್ದೆವು ಎಂದು ಕಾಜಲ್ ಹೇಳಿದ್ದಾರೆ.

1114

ಕಾಜಲ್ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದಾರೆ. ಈ ಬಗ್ಗೆಯೂ ಅಲಿ ಪ್ರಶ್ನೆ ಮಾಡಿದ್ದರು. ಜನತಾ ಗ್ಯಾರೇಜ್ ಚಿತ್ರದಲ್ಲಿ ಐಟಂ ಸಾಂಗ್ ಮಾಡಲು ಕಾರಣ ಯಾರು? ಎಂದು ಹೇಳಿದ್ದರು.
 

1214

ನಾಯಕ, ನಿರ್ದೇಶಕ ಅಥವಾ ನಿರ್ಮಾಪಕ? ಯಾರ ಕಾರಣಕ್ಕಾಗಿ ನೀವು ಈ ಐಟಂ ಸಾಂಗ್‌ನಲ್ಲಿ ಮಾಡಿದ್ರಿ ಎಂದು ಕೇಳಲಾಯಿತು. ಅದಕ್ಕೆ ಕಾಜಲ್‌,  ಕೇವಲ ಎನ್ ಟಿಆರ್ ಕಾರಣದಿಂದ ಐಟಂ ಸಾಂಗ್ ಗೆ ಒಪ್ಪಿಕೊಂಡೆ ಎಂದಿದ್ದಾರೆ.
 

1314

ಕಾಜಲ್, ಎನ್ ಟಿಆರ್ ಜೊತೆ ಮೂರು ಚಿತ್ರಗಳಲ್ಲಿ ನಟಿಸಿದ್ದರು. ವೃಂದಾವನಂ, ಬಾದ್ ಶಾ ಮತ್ತು ಟೆಂಪರ್ ಒಟ್ಟಿಗೆ ಜೋಡಿಯಾಗಿವೆ. ಈ ಮೂರು ಚಿತ್ರಗಳು ಯಶಸ್ವಿಯಾಗಿರುವುದು ಗಮನಾರ್ಹ

1414

ಜೂನಿಯರ್‌ ಎನ್ ಟಿಆರ್ ಜೊತೆಗಿನ ಆಪ್ತತೆಯಿಂದಾಗಿ ಐಟಂ ಸಾಂಗ್‌ನಲ್ಲಿ ಡಾನ್ಸ್‌ ಮಾಡಿದ್ದೆ ಎಂದು ನಟಿ ಕಾಜಲ್‌ ಅಗರ್ವಾಲ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕಾಜಲ್ ಅಗರ್ವಾಲ್
ಟಾಲಿವುಡ್
ಜೂನಿಯರ್ ಎನ್.ಟಿ.ಆರ್

Latest Videos
Recommended Stories
Recommended image1
ಹಾವು-ಮುಂಗುಸಿಯಂತಿದ್ದ ನಯನತಾರಾ-ತ್ರಿಷಾ ಕೃಷ್ಣನ್ ಬೀಚ್‌ನಲ್ಲಿ ಸುತ್ತಾಟ.. ಈ ಶತ್ರುಗಳು ಸ್ನೇಹಿತರಾಗಿದ್ದು ಹೇಗೆ?
Recommended image2
ಶ್ರೀ ರಾಮನವಮಿ ದಿನವೇ ರಿಲೀಸ್ ಆಗುತ್ತಾ ರಾಜಮೌಳಿ-ಮಹೇಶ್ ಬಾಬು ಜೋಡಿಯ 'ವಾರಣಾಸಿ' ಸಿನಿಮಾ?
Recommended image3
Shraddha Kapoor: ನನ್ನ ಭಾನುವಾರ ಇವತ್ತೇ.. ನೀವೇನ್ ಮಾಡ್ತೀರಾ? ಶ್ರದ್ಧಾ ಕಪೂರ್ ಕಿಡಿಗೇಡಿತನಕ್ಕೆ ಫ್ಯಾನ್ಸ್ ಶಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved