ಕಾರ್ಗಿಲ್ ವಾರ್ ನಂತರ ಸೈನಿಕರ ಜೊತೆ 8 ದಿನ ಬಂಕರ್ನಲ್ಲಿ ಕಳೆದ ಆಮಿರ್ ಖಾನ್!
ಆಮಿರ್ ಖಾನ್ 'ಸಿತಾರೆ ಜಮೀನ್ ಪರ್' ಪ್ರಮೋಷನ್ ವೇಳೆ ಕಾರ್ಗಿಲ್ ಯುದ್ಧದ ನಂತರ ಸೈನ್ಯದ ಜೊತೆ ಕಳೆದ 8 ದಿನಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಬಂಕರ್ಗಳಲ್ಲಿ ಸಮಯ ಕಳೆದು ಸೈನಿಕರ ಜೊತೆ ಮಾತನಾಡಿದ ಅನುಭವ ಹಂಚಿಕೊಂಡಿದ್ದಾರೆ.
1 Min read
Share this Photo Gallery
- FB
- TW
- Linkdin
Follow Us
19

ಆಮಿರ್ ಖಾನ್ ಅವರ 'ಸಿತಾರೆ ಜಮೀನ್ ಪರ್' ಸಿನಿಮಾ ಬಿಡುಗಡೆಗೂ ಮುನ್ನ ಪ್ರಚಾರ ಭರಾರಿಯಾಗಿದೆ. ಎಲ್ಲೆಡೆ ಪ್ರಶ್ನೆಗಳಿಗೆ ಖುಲ್ಲಂ ಖುಲ್ಲಾ ಉತ್ತರ ನೀಡುತ್ತಿದ್ದಾರೆ. ಹೊಸ ಹೊಸ ವಿಷಯಗಳನ್ನು ಬಿಚ್ಚಿಡುತ್ತಿದ್ದಾರೆ.
29
ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪೋಸ್ಟ್ ಮಾಡಿದ್ದಕ್ಕೆ ಆಮಿರ್ ಖಾನ್ ಆನ್ಲೈನ್ನಲ್ಲಿ ಟ್ರೋಲ್ ಆಗಿದ್ದರು. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿದಾಳಿಯಾಗಿತ್ತು.
39
ರಜತ್ ಶರ್ಮಾ ಜೊತೆ 'ಆಪ್ ಕೀ ಅದಾಲತ್' ನಲ್ಲಿ ಮಾತನಾಡಿದ ಆಮಿರ್, ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಗಿಲ್ ಯುದ್ಧದ ನಂತರ ಸೈನಿಕರ ಜೊತೆ ಕಳೆದ 8 ದಿನಗಳನ್ನು ನೆನಪಿಸಿಕೊಂಡರು.
49
ಸೈನಿಕರನ್ನು ಭೇಟಿ ಮಾಡಿ, ಅವರ ಧೈರ್ಯ ಹೆಚ್ಚಿಸಬೇಕೆಂದು ಅಂದುಕೊಂಡಿದ್ದೆ. ಕಾರ್ಗಿಲ್ ಯುದ್ಧ ಗೆದ್ದ ಮೇಲೆ 8 ದಿನ ಅಲ್ಲೇ ಇದ್ದೆ. ಲೇಹ್ನಿಂದ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ 8 ದಿನ ಪ್ರಯಾಣ ಮಾಡಿದೆ.
59
ಪ್ರತಿಯೊಂದು ರೆಜಿಮೆಂಟ್ನ ಸೈನಿಕರನ್ನು ಭೇಟಿ ಮಾಡಿದೆ. 8 ದಿನಗಳ ಕಾಲ ಸೈನಿಕರ ಜೊತೆ ಇದ್ದು, ಅವರನ್ನು ಹುರಿದುಂಬಿಸಿದೆ. ನಮಗಾಗಿ ಯುದ್ಧ ಮಾಡಿ, ನಮ್ಮನ್ನು ಕಾಪಾಡಿದ್ದಕ್ಕೆ ನಾನು ನಿಮಗೆ ಸೆಲ್ಯೂಟ್ ಹೊಡೆಯುತ್ತೇನೆ.
69
8 ದಿನ ಸೈನಿಕರ ಜೊತೆ ಕಳೆದಾಗ ನಮ್ಮ ಸೈನಿಕರಿಗೆ ಯಾವ ಉತ್ತೇಜನದ ಅಗತ್ಯವಿಲ್ಲ ಅಂತ ಅರ್ಥ ಆಯ್ತು. ಕಷ್ಟದ ಪ್ರದೇಶದಲ್ಲಿದ್ದರೂ ಅವರ ಉತ್ಸಾಹ ಅದ್ಭುತ. ಅವರ ಮುಖದಲ್ಲಿ ನಗು, ಆತ್ಮವಿಶ್ವಾಸ ತುಂಬಿತ್ತು.
79
ನಾನು ಅವರ ಧೈರ್ಯ ಹೆಚ್ಚಿಸೋಕೆ ಹೋಗಿದ್ದೆ, ಆದರೆ ಅವರೇ ನನ್ನ ಧೈರ್ಯ ಹೆಚ್ಚಿಸಿದ್ರು. ಅವರ ಜೊತೆ ಊಟ ಮಾಡಿ, ಅವರ ಬದುಕಿನ ಬಗ್ಗೆ ಮಾತಾಡಿದೆ. ಒಂದು ರಾತ್ರಿ ಬಂಕರ್ನಲ್ಲೂ ಇದ್ದೆ.
89
ಆಮಿರ್ ಖಾನ್ ಮುಂದೆ 'ಸಿತಾರೆ ಜಮೀನ್ ಪರ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರ ಸ್ಪ್ಯಾನಿಷ್ ಚಿತ್ರ 'ಕ್ಯಾಂಪಿಯೋನ್ಸ್' ನ ರಿಮೇಕ್.
99
'ಸಿತಾರೆ ಜಮೀನ್ ಪರ್' ಚಿತ್ರದಲ್ಲಿ ಆಮಿರ್ ಖಾನ್ ಮತ್ತು ಜೆನಿಲಿಯಾ ಡಿಸೋಜಾ ಕೂಡ ಇದ್ದಾರೆ. ಜೂನ್ 20 ರಂದು ಚಿತ್ರ ಬಿಡುಗಡೆ ಆಗಲಿದೆ.