- Home
- Money
- ಬಡವರಿಗೆ ಮಕ್ಕಳಾದ್ರೆ ಬಡತನ ಹೆಚ್ಚುತ್ತೆ, ಶ್ರೀಮಂತರಿಗಾದ್ರೆ ಶ್ರೀಮಂತಿಕೆ ಹೆಚ್ಚು: Bharatpe ಫೌಂಡರ್ ಪತ್ನಿ
ಬಡವರಿಗೆ ಮಕ್ಕಳಾದ್ರೆ ಬಡತನ ಹೆಚ್ಚುತ್ತೆ, ಶ್ರೀಮಂತರಿಗಾದ್ರೆ ಶ್ರೀಮಂತಿಕೆ ಹೆಚ್ಚು: Bharatpe ಫೌಂಡರ್ ಪತ್ನಿ
Ashneer Grover Wife Madhuri Jain: Lock UPP ರಿಯಾಲಿಟಿ ಶೋ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗ್ತಿದೆ. ಈ ಶೋನಲ್ಲಿ 'ಭಾರತ್ ಪೇ' (BharatPe) ಸಂಸ್ಥೆಯ ಸಹ-ಸಂಸ್ಥಾಪಕ, ಉದ್ಯಮಿ ಅಶ್ನೀರ್ ಗ್ರೋವರ್ ಪತ್ನಿ ನೀಡಿದ ಹೇಳಿಕೆ ಚರ್ಚೆ ಆಗ್ತಿದೆ. ಬಡತನ, ಮಕ್ಕಳನ್ನು ಲಿಂಕ್ ಮಾಡಿ ಮಾತನಾಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಮಾಧುರಿ ಜೈನ್ ಹೇಳಿದ್ದೇನು?
ಮಾಧುರಿ ಜೈನ್, ಅವರು ನಾವು ಮೂರನೇ ಮಗು ಮಾಡಿಕೊಳ್ಳಬೇಕು ಎಂದುಕೊಂಡೆವು, ಆದರೆ ಕೆಲವು ಕೌಟುಂಬಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮೂರನೇ ಮಗು ನಿಮ್ಮನ್ನು ಸದಾ ಯಂಗ್ ಆಗಿ ಇಡುತ್ತದೆ. ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ಅವರೆಲ್ಲರಿಗೂ ಮೂರನೇ ಮಗು ಇರುತ್ತದೆ. ನಾವು ಇಬ್ಬರು ನಮಗೆ ಇಬ್ಬರು ಎಂಬ ನಿಯಮ ಎಲ್ಲರಿಗೂ ಅಲ್ಲ. ಶ್ರೀಮಂತರು ಹೆಚ್ಚು ಮಕ್ಕಳನ್ನು ಹೆತ್ತರೆ ಸಂಪತ್ತು ವೃದ್ಧಿಯಾಗುತ್ತದೆ, ಅದೇ ಬಡವರು ಹೆಚ್ಚು ಮಕ್ಕಳನ್ನು ಹೆತ್ತರೆ ಬಡತನ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದ್ದರು.
ಈ ಮಾತು ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಇವರಿಬ್ಬರದ್ದು ಒಟ್ಟೂ 900 ಕೋಟಿ ರೂಪಾಯಿ ಆಸ್ತಿ ಇದೆ. ಇದನ್ನು ದಾನ ಮಾಡಿ ಎಂದು ಕೆಲವರು ಹೇಳಿದ್ದರು. ಇದಕ್ಕೆ ಅಶ್ನೀರ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕ್ಲಾಸ್ ತಗೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಬಡವರು ಹೆಚ್ಚು ಮಕ್ಕಳನ್ನು ಹೆತ್ತರೆ ಬಡತನ ಹೆಚ್ಚುತ್ತದೆ ಎಂಬುದು ನಿಮ್ಮ ಪತ್ನಿಯ ತರ್ಕ. ನಿಮ್ಮ ಬಳಿ ಇರುವ ಅಂದಾಜು 900 ಕೋಟಿ ರೂ. ಆಸ್ತಿಯನ್ನು 1,800 ಬಡ ಕುಟುಂಬಗಳಿಗೆ ತಲಾ 50 ಲಕ್ಷ ರೂ. ನಂತೆ ಹಂಚಿಬಿಡಿ. ಇದರಿಂದ ಆ ಕುಟುಂಬಗಳ ಸಾವಿರಾರು ಮಕ್ಕಳು ಆರಾಮವಾಗಿ ಬೆಳೆಯಬಹುದು. ಕೇವಲ ಇಬ್ಬರು ಮಕ್ಕಳಿಗಾಗಿ ಇಷ್ಟೊಂದು ಆಸ್ತಿ ಏಕೆ? ಎಲ್ಲವನ್ನೂ ದಾನ ಮಾಡಿ ಬಡತನ ನಿವಾರಿಸಿ, ನಂತರ ನೀವು ಹಿಮಾಲಯಕ್ಕೆ ಹೋಗಿ ಸನ್ಯಾಸಿಯಾಗಿ ಎಂದು ಹೇಳಿದ್ದರು.
ಅಶ್ನೀರ್ ಕೊಟ್ಟ ಉತ್ತರ ಏನು?
"ಭೀಕ್ಷೆ ಅಥವಾ ದೇಣಿಗೆ ಕೇಳುವ ನಿಮ್ಮ ರೀತಿ ಸ್ವಲ್ಪ ನಾರ್ಮಲ್ ಆಗಿದೆ. ನನ್ನ ಹೆಂಡತಿ ಈಗಾಗಲೇ ನಿಮಗೆ ಜ್ಞಾನ ನೀಡಿದ್ದಾಳೆ; ಇಷ್ಟಕ್ಕೆ ಇಷ್ಟೇ ಸಿಗುವುದು" ಎಂದು ಅಶ್ನೀರ್ ಹೇಳಿದ್ದಾರೆ.
ಪರ-ವಿರೋಧ ಚರ್ಚೆ
ಮಾಧುರಿ ಜೈನ್ ಅವರ ಹೇಳಿಕೆ ಅತ್ಯಂತ ತಾರತಮ್ಯದಿಂದ ಕೂಡಿದೆ. ಬಡತನವನ್ನು ಮಕ್ಕಳ ಸಂಖ್ಯೆಗೆ ಲಿಂಕ್ ಮಾಡುವುದು ತಪ್ಪು ಎಂದು ಹಲವರು ಟೀಕಿಸಿದ್ದಾರೆ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ ಮಕ್ಕಳನ್ನು ಉತ್ತಮವಾಗಿ ಬೆಳೆಸಲು, ಅವರಿಗೆ ಒಳ್ಳೆಯ ಶಿಕ್ಷಣ ನೀಡಲು ಆರ್ಥಿಕ ಭದ್ರತೆ ಅತ್ಯಂತ ಮುಖ್ಯ. ಮಾಧುರಿ ಹೇಳಿದ ಮಾತಿನಲ್ಲಿ ಪ್ರಾಯೋಗಿಕ ಸತ್ಯವಿದೆ ಎಂದು ಇನ್ನು ಕೆಲವರು ವಾದಿಸುತ್ತಿದ್ದಾರೆ.

