MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Mandya
  • ಅಂತೂ, ಇಂತೂ ಜಲಾಶಯಗಳಿಗೆ ಬಂತು ಜೀವಕಳೆ.. KRS, ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ

ಅಂತೂ, ಇಂತೂ ಜಲಾಶಯಗಳಿಗೆ ಬಂತು ಜೀವಕಳೆ.. KRS, ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ

ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಿಗೆ ಜಲಾಭಿಷೇಕ ಆಗಿದೆ. ಹೊಸ ಜೀವಕಳೆಯೊಂದಿಗೆ ಮೈದುಂಬಿ ನಿಂತಿವೆ. ಕೆಆರ್‍‌ಎಸ್, ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಇಂದಿನ ಸ್ಥಿತಿ ಹೇಗಿದೆ ಅನ್ನೋದ್ರ ವಿವರ ಇಲ್ಲಿದೆ. 

2 Min read
Author : Ganesh Mabla Gowda
Published : Jul 07 2026, 10:37 AM IST
Share this Photo Gallery
  • FB
  • TW
  • Linkdin
  • Whatsapp
15
ಜೀವಕಳೆ ತಂದ ಮುಂಗಾರು
Image Credit : Asianet News

ಜೀವಕಳೆ ತಂದ ಮುಂಗಾರು

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಸುಡುತ್ತಿದ್ದ ಬಿಸಿಲಿಗೆ ಬತ್ತಿ ಹೋಗುತ್ತಿದ್ದ ಜಲಾಶಯಗಳಿಗೆ ಈಗ ಮಳೆರಾಯ ಜೀವಕಳೆ ತಂದಿದ್ದಾನೆ. ನದಿಗಳ ಹರಿವು ಹೆಚ್ಚಾಗಿ ಜಲಾಶಯಗಳು ಭರ್ತಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಾಡಿನ ಅನ್ನದಾತರ ಮೊಗದಲ್ಲಿ ಸಂತೋಷದ ಚಿಲುಮೆ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶಿವಮೊಗ್ಗ: ತುಂಗಾ ಜಲಾಶಯ ಭರ್ತಿ!
Image Credit : Asianet News

ಶಿವಮೊಗ್ಗ: ತುಂಗಾ ಜಲಾಶಯ ಭರ್ತಿ!

ಮಲೆನಾಡಿನಲ್ಲಿ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ಶಿವಮೊಗ್ಗದ ತುಂಗಾ ಜಲಾಶಯಕ್ಕೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವನ್ನು ತಲುಪಿದ್ದು, ನದಿಗೆ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ.

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಮಟ್ಟ: 588.24 ಮೀಟರ್ (ಸಂಪೂರ್ಣ ಭರ್ತಿ)
  • ಒಳಹರಿವು: 21,508 ಕ್ಯೂಸೆಕ್
  • ಹೊರಹರಿವು: 19,078 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ: 2.411 ಟಿಎಂಸಿ

Related Articles

Related image1
ಮಳೆಯಿಂದ ಸದ್ಯಕ್ಕಿಲ್ಲ ರಿಲೀಫ್.. ಈ 2 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ!
Related image2
ರಾಜ್ಯದ ಅನ್ನದಾತರಿಗೆ ಗುಡ್‌ ನ್ಯೂಸ್.. 6 ತಿಂಗಳ ಬಳಿಕ KRS ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ
35
ಕೆಆರ್‌ಎಸ್ ಜಲಾಶಯಕ್ಕೆ ಹರಿದುಬಂದ ವರುಣನ ಕೃಪೆ
Image Credit : our own

ಕೆಆರ್‌ಎಸ್ ಜಲಾಶಯಕ್ಕೆ ಹರಿದುಬಂದ ವರುಣನ ಕೃಪೆ

ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಕಾವೇರಿ ನದಿಯ ಒಳಹರಿವು ಹೆಚ್ಚಾಗಿದೆ. ಇದರಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕಳೆದ ಎರಡು ದಿನಗಳಲ್ಲಿ ಭರ್ತಿ 2 ಅಡಿಗಳಷ್ಟು ಏರಿಕೆಯಾಗಿದೆ. ಇದು ಮೈಸೂರು ಮತ್ತು ಮಂಡ್ಯ ಭಾಗದ ರೈತರ ಮೊಗದಲ್ಲಿ ನಗು ತಂದಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 82.45 ಅಡಿ (ಎರಡು ದಿನದಲ್ಲಿ 2 ಅಡಿ ಏರಿಕೆ)
  • ಒಳಹರಿವು: 5,734 ಕ್ಯೂಸೆಕ್
  • ಹೊರಹರಿವು: 777 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ: 11.909 ಟಿಎಂಸಿ
45
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಪ್ರಾರಂಭ
Image Credit : our own

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಪ್ರಾರಂಭ

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೂ ಈಗ ಹೊಸ ನೀರಿನ ಹರಿವು ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 3 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದ್ದು, ಒಣಗುತ್ತಿದ್ದ ನದಿ ಪಾತ್ರಕ್ಕೆ ಮಳೆರಾಯ ಹೊಸ ಕಳೆ ನೀಡಿದ್ದಾನೆ.

  • ಇಂದಿನ ಮಟ್ಟ: 1587.92 ಅಡಿ
  • ಪ್ರಸ್ತುತ ಒಳಹರಿವು: 2,150 ಕ್ಯೂಸೆಕ್
  • ಪ್ರಸ್ತುತ ನೀರಿನ ಸಂಗ್ರಹ: 9.379 ಟಿಎಂಸಿ

ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 77.343 ಟಿಎಂಸಿ ನೀರಿತ್ತು. ಈ ಬಾರಿ ಮಳೆ ತಡವಾಗಿದ್ದರೂ, ಈಗ ಒಳಹರಿವು ಆರಂಭವಾಗಿರುವುದು ಆಶಾದಾಯಕವಾಗಿದೆ.

55
ಕೃಷಿ ಚಟುವಟಿಕೆ ಚುರುಕು
Image Credit : Social media platform X

ಕೃಷಿ ಚಟುವಟಿಕೆ ಚುರುಕು

ಒಟ್ಟಾರೆಯಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಎಲ್ಲಾ ಜಲಾಶಯಗಳು ಆದಷ್ಟು ಬೇಗ ಭರ್ತಿಯಾಗಲಿ, ಈ ಬಾರಿ ನಾಡು ಸುಭಿಕ್ಷವಾಗಿರಲಿ ಎನ್ನುವುದು ರಾಜ್ಯದ ರೈತರ ಏಕೈಕ ಪ್ರಾರ್ಥನೆಯಾಗಿದೆ.

About the Author

GM
Ganesh Mabla Gowda
ನೀರು
ಕರ್ನಾಟಕ ಮಳೆ
ಸುದ್ದಿ
ಕೃಷ್ಣರಾಜಸಾಗರ ಅಣೆಕಟ್ಟು
ತುಂಗಭದ್ರಾ ಅಣೆಕಟ್ಟು

Latest Videos
Recommended Stories
Recommended image1
ಬಂಗಾರದ ವಂಚನೆ ಆರೋಪಿ ಐಶ್ವರ್ಯ ಗೌಡಗೆ ಹೈಕೋರ್ಟ್‌ ಬಿಗ್ ರಿಲೀಫ್: 5 ಕೇಸುಗಳ ಖುಲಾಸೆಗೆ ಇಲ್ಲಿವೆ ಕಾರಣ!
Recommended image2
ರಾಜ್ಯದ ಅನ್ನದಾತರಿಗೆ ಗುಡ್‌ ನ್ಯೂಸ್.. 6 ತಿಂಗಳ ಬಳಿಕ KRS ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ
Recommended image3
ಡಿಕೆಶಿ ಸಿಎಂ ಆಗಿ ಒಂದು ತಿಂಗಳು ಕಳೆದಿಲ್ಲ, ರಾಜ್ಯದ ಎಲ್ಲ ಡ್ಯಾಂಗಳು ಖಾಲಿ: ಆರ್ ಅಶೋಕ್ ವಾಗ್ದಾಳಿ, ರೈತರಿಗೆ 50 ಸಾವಿರ ಪರಿಹಾರಕ್ಕೆ ಆಗ್ರಹ
Related Stories
Recommended image1
ಮಳೆಯಿಂದ ಸದ್ಯಕ್ಕಿಲ್ಲ ರಿಲೀಫ್.. ಈ 2 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ!
Recommended image2
ರಾಜ್ಯದ ಅನ್ನದಾತರಿಗೆ ಗುಡ್‌ ನ್ಯೂಸ್.. 6 ತಿಂಗಳ ಬಳಿಕ KRS ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved