ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ ಇನ್ನಿಲ್ಲ
ಹುಬ್ಬಳ್ಳಿ(ನ.19): ಜಕ್ಕೂರಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮಾದರಿ ಗ್ರಾಮದ ಪರಿಕಲ್ಪನೆ ಮತ್ತು ಸಾಕಾರಗೊಳಿಸಿದ ನಾಡಿನ ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ(71) ಇಂದು(ಗುರುವಾರ) ಬೆಳಿಗ್ಗೆ ಮಹಾಮಾರಿ ಕೋವಿಡ್-19ಗೆ ಬಲಿಯಾಗಿದ್ದಾರೆ.

<p>ಕೊರೋನಾ ದಾಳಿಗೆ ತುತ್ತಾಗಿದ್ದ ಡಾ. ಟಿ.ಬಿ. ಸೊಲಬಕ್ಕನವರ ಅವರನ್ನ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೊಲಬಕ್ಕನವರ ಇಂದು ಬೆಳಗಿನ ಜಾವ ಇಲಲೋಕ ತ್ಯಜಿಸಿದ್ದಾರೆ. </p>
ಕೊರೋನಾ ದಾಳಿಗೆ ತುತ್ತಾಗಿದ್ದ ಡಾ. ಟಿ.ಬಿ. ಸೊಲಬಕ್ಕನವರ ಅವರನ್ನ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೊಲಬಕ್ಕನವರ ಇಂದು ಬೆಳಗಿನ ಜಾವ ಇಲಲೋಕ ತ್ಯಜಿಸಿದ್ದಾರೆ.
<p>ಮೃತರ ಅಂತ್ಯಕ್ರಿಯೆ ಇಂದು ಹಾವೇರಿ ಜಿಲ್ಲೆಯ ರಾಕ್ ಗಾರ್ಡನ್ ಪಕ್ಕ ಹೊಸ ವರ್ಕ್ ಶಾಪ್ ಹತ್ತಿರ ಜರುಗಲಿದೆ ಎಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. </p>
ಮೃತರ ಅಂತ್ಯಕ್ರಿಯೆ ಇಂದು ಹಾವೇರಿ ಜಿಲ್ಲೆಯ ರಾಕ್ ಗಾರ್ಡನ್ ಪಕ್ಕ ಹೊಸ ವರ್ಕ್ ಶಾಪ್ ಹತ್ತಿರ ಜರುಗಲಿದೆ ಎಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
<p>ಇತ್ತೀಚೆಗೆ ಮಾದರಿ ಗ್ರಾಮ ಉದ್ಘಾಟಿಸಿ ಕಲಾವಿದ ಸೊಲಬಕ್ಕನವರ ಕಲೆ ಮತ್ತು ಕಾರ್ಯವನ್ನು ಶ್ಲಾಘಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ</p>
ಇತ್ತೀಚೆಗೆ ಮಾದರಿ ಗ್ರಾಮ ಉದ್ಘಾಟಿಸಿ ಕಲಾವಿದ ಸೊಲಬಕ್ಕನವರ ಕಲೆ ಮತ್ತು ಕಾರ್ಯವನ್ನು ಶ್ಲಾಘಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
<p>ಡಾ. ಟಿ.ಬಿ. ಸೊಲಬಕ್ಕನವರ ಅವರು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲೆಯಲ್ಲಿರುವ ರಾಕ್ ಗಾರ್ಡ್ ರೂವಾರಿಯಾಗಿದ್ದರು. </p>
ಡಾ. ಟಿ.ಬಿ. ಸೊಲಬಕ್ಕನವರ ಅವರು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲೆಯಲ್ಲಿರುವ ರಾಕ್ ಗಾರ್ಡ್ ರೂವಾರಿಯಾಗಿದ್ದರು.
<p>ಇತ್ತೀಚೆಗಷ್ಟೇ ಬೆಂಗಳೂರಿನ ಜಕ್ಕೂರಿನ ಶ್ರೀರಾಮಪುರ ಅಡ್ಡರಸ್ತೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದರು. </p>
ಇತ್ತೀಚೆಗಷ್ಟೇ ಬೆಂಗಳೂರಿನ ಜಕ್ಕೂರಿನ ಶ್ರೀರಾಮಪುರ ಅಡ್ಡರಸ್ತೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದರು.
<p>ರಾಜ್ಯದ ಎಲ್ಲ ಗ್ರಾಮಗಳ ಜೀವನ ಕ್ರಮವನ್ನು ಬಿಂಬಿಸುವ ಪಾರಂಪರಿಕ ಗ್ರಾಮ ಅದ್ಭುತವಾಗಿ ಮೂಡಿ ಬಂದಿದ್ದು, ಹಿಂದಿನ ಕಾಲದ ಗ್ರಾಮ ಜೀವನವನ್ನು ಹಳ್ಳಿಯ ಮತ್ತು ನಗರದ ಮಕ್ಕಳು ನೋಡಿ ತಿಳಿದುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಈ ಮಾದರಿ ಪಾರಂಪರಿಕ ಗ್ರಾಮ </p>
ರಾಜ್ಯದ ಎಲ್ಲ ಗ್ರಾಮಗಳ ಜೀವನ ಕ್ರಮವನ್ನು ಬಿಂಬಿಸುವ ಪಾರಂಪರಿಕ ಗ್ರಾಮ ಅದ್ಭುತವಾಗಿ ಮೂಡಿ ಬಂದಿದ್ದು, ಹಿಂದಿನ ಕಾಲದ ಗ್ರಾಮ ಜೀವನವನ್ನು ಹಳ್ಳಿಯ ಮತ್ತು ನಗರದ ಮಕ್ಕಳು ನೋಡಿ ತಿಳಿದುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಈ ಮಾದರಿ ಪಾರಂಪರಿಕ ಗ್ರಾಮ
<p>ಮಾದರಿ ಪಾರಂಪರಿಕ ಗ್ರಾಮದಲ್ಲಿ ಗ್ರಾಮ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಬಿಡಿಸಿದ್ದ ಡಾ. ಟಿ.ಬಿ. ಸೊಲಬಕ್ಕನವರ </p>
ಮಾದರಿ ಪಾರಂಪರಿಕ ಗ್ರಾಮದಲ್ಲಿ ಗ್ರಾಮ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಬಿಡಿಸಿದ್ದ ಡಾ. ಟಿ.ಬಿ. ಸೊಲಬಕ್ಕನವರ
<p>ಸಂಸಾರ ಸಹಿತ ಬುತ್ತಿಕಟ್ಟಿಕೊಂಡು ಬಂದು ಅರ್ಧ ದಿನ, ಇಲ್ಲಿದ್ದು ಗ್ರಾಮಗಳ ಪರಂಪರೆ ಕಣ್ತುಂಬಿಕೊಳ್ಳಬೇಕು. ಇಂತಹ ಕಲಾಕೃತಿಯನ್ನು ರಚಿಸಿದ ಕಲಾವಿದರನ್ನು ಹೊಗಳಲು ಪದಗಳು ಸಿಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ</p>
ಸಂಸಾರ ಸಹಿತ ಬುತ್ತಿಕಟ್ಟಿಕೊಂಡು ಬಂದು ಅರ್ಧ ದಿನ, ಇಲ್ಲಿದ್ದು ಗ್ರಾಮಗಳ ಪರಂಪರೆ ಕಣ್ತುಂಬಿಕೊಳ್ಳಬೇಕು. ಇಂತಹ ಕಲಾಕೃತಿಯನ್ನು ರಚಿಸಿದ ಕಲಾವಿದರನ್ನು ಹೊಗಳಲು ಪದಗಳು ಸಿಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ
<p>ಕರ್ನಾಟಕ ರಾಜ್ಯದ ಗ್ರಾಮಗಳು ಹೇಗಿದ್ದವು ಎಂಬುದು ಇಲ್ಲಿಗೆ ಬಂದರೆ ಗೊತ್ತಾಗುತ್ತದೆ. ನಮ್ಮ ಯುವ ಜನತೆ ಈ ಪಾರಂಪರಿಕೆ ಗ್ರಾಮಕ್ಕೆ ಬರಬೇಕು. ಇಡೀ ರಾಜ್ಯದ ಶಾಲಾ - ಕಾಲೇಜು ಮಕ್ಕಳನ್ನು ಇಲ್ಲಿಗೆ ಪ್ರವಾಸಕ್ಕೆ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ</p>
ಕರ್ನಾಟಕ ರಾಜ್ಯದ ಗ್ರಾಮಗಳು ಹೇಗಿದ್ದವು ಎಂಬುದು ಇಲ್ಲಿಗೆ ಬಂದರೆ ಗೊತ್ತಾಗುತ್ತದೆ. ನಮ್ಮ ಯುವ ಜನತೆ ಈ ಪಾರಂಪರಿಕೆ ಗ್ರಾಮಕ್ಕೆ ಬರಬೇಕು. ಇಡೀ ರಾಜ್ಯದ ಶಾಲಾ - ಕಾಲೇಜು ಮಕ್ಕಳನ್ನು ಇಲ್ಲಿಗೆ ಪ್ರವಾಸಕ್ಕೆ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ
<p>ನಗರಗಳಲ್ಲಿನ ಬಹುತೇಕರು ಹಳ್ಳಿಯಿಂದಲೇ ಬಂದಿದ್ದರೂ ಕೂಡ ಈಗ ಮೂಲದಿಂದ ದೂರವಾಗುತ್ತಿದ್ದಾರೆ. ಅವರಿಗೆ ಇಪ್ಪತ್ತು-ಮೂವತ್ತು ವರ್ಷಗಳ ಹಿಂದಿನ ಗ್ರಾಮೀಣ ಬದುಕನ್ನು ಈ ಪಾರಂಪರಿಕ ಗ್ರಾಮ ನೆನಪಿಸಲಿದೆ. </p>
ನಗರಗಳಲ್ಲಿನ ಬಹುತೇಕರು ಹಳ್ಳಿಯಿಂದಲೇ ಬಂದಿದ್ದರೂ ಕೂಡ ಈಗ ಮೂಲದಿಂದ ದೂರವಾಗುತ್ತಿದ್ದಾರೆ. ಅವರಿಗೆ ಇಪ್ಪತ್ತು-ಮೂವತ್ತು ವರ್ಷಗಳ ಹಿಂದಿನ ಗ್ರಾಮೀಣ ಬದುಕನ್ನು ಈ ಪಾರಂಪರಿಕ ಗ್ರಾಮ ನೆನಪಿಸಲಿದೆ.
<p>ಡಾ. ಟಿ.ಬಿ. ಸೊಲಬಕ್ಕನವರ ಮತ್ತವರ ತಂಡ ನಿರ್ಮಿಸಿದ ಈ ಪಾರಂಪರಿಕ ಗ್ರಾಮವನ್ನ ಸುಮಾರು 12 ಕೋಟಿ ರು. ವೆಚ್ಚದಲ್ಲಿ ಮೂರು ವರ್ಷದಲ್ಲಿ ನಿರ್ಮಾಣವಾಗಿರುವ ಈ ಪಾರಂಪರಿಕ ಗ್ರಾಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ, ಬಹುತೇಕ ಗ್ರಾಮ ಸಮುದಾಯದ ಜೀವನ ಕ್ರಮದ ಚಿತ್ರಣವಿದೆ.</p>
ಡಾ. ಟಿ.ಬಿ. ಸೊಲಬಕ್ಕನವರ ಮತ್ತವರ ತಂಡ ನಿರ್ಮಿಸಿದ ಈ ಪಾರಂಪರಿಕ ಗ್ರಾಮವನ್ನ ಸುಮಾರು 12 ಕೋಟಿ ರು. ವೆಚ್ಚದಲ್ಲಿ ಮೂರು ವರ್ಷದಲ್ಲಿ ನಿರ್ಮಾಣವಾಗಿರುವ ಈ ಪಾರಂಪರಿಕ ಗ್ರಾಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ, ಬಹುತೇಕ ಗ್ರಾಮ ಸಮುದಾಯದ ಜೀವನ ಕ್ರಮದ ಚಿತ್ರಣವಿದೆ.