ಕೈಕಟ್ಟಿ ಕುಳಿತ ಬಿಬಿಎಂಪಿ, ರಸ್ತೆಗುಂಡಿಯನ್ನು ಮುಚ್ಚಿದ ಟ್ರಾಫಿಕ್ ಪೊಲೀಸ್ರು
ಬೆಂಗಳೂರಿನಲ್ಲೂ ಸಹ ಎಡಬಿಡದೆ ಮಳೆ ಸುರಿಯುತ್ತಿದೆ. ಬೆಳಗ್ಗೆ-ಸಂಜೆ ರಾತ್ರಿ ಎನ್ನದೇ ಧೋ ಧೋ ಅಂತ ಸುರಿಯುತ್ತಲೇ ಇದೆ. ಇದರಿಂದ ಟ್ರಾಫಿಕ್ ಕಿರಿಕಿರಿಯಾಗುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇದರ ಮಧ್ಯೆ ರಸ್ತೆಗುಂಡಿಗಳು ಬಾಯಿ ತೆರೆದುಕೊಂಡಿದ್ದು, ಒಂದಲ್ಲ ಒಂದು ಅನಾಹುತಗಳು ಆಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಡೋ ಕೆಲಸವನ್ನು ಟ್ರಾಫಿಕ್ ಪೊಲೀಸರು ಮಾಡುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಬಗ್ಗೆ ಹೈಕೋರ್ಟ್ ಹಲವು ದಿನಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುತ್ತಲೇ ಇದೆ. ಆದರೂ ಸಹ ಬಿಬಿಎಂಪಿ ಕೈಕಟ್ಟಿ ಕುಳಿತುಕೊಂಡಿದೆ. ಇದೀಗ ಹಲವೆಡೆ ಟ್ರಾಫಿಕ್ ಪೊಲೀಸರೇ ರಸ್ತೆಗುಂಡಿಗಳನ್ನ ಮುಚ್ಚುತ್ತಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಬಗೆಹರಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಡೋ ಕೆಲಸವನ್ನು ಟ್ರಾಫಿಕ್ ಪೊಲೀಸರು ಮಾಡಿದ್ರು.
ಬೆಂಗಳೂರಿನ ರಾಜಾಜಿನಗರದ ಸಂಚಾರಿ ಪೊಲೀಸರು ರಸ್ತೆ ಗುಂಡಿಗಳನ್ನು ಮುಚ್ಚಿ ಮಾದರಿಯಾದರು.ಮಳೆ ನೀರಿನಿಂದ ತಂಬಿ ವಾಹನ ಸವಾರರಿಗೆ ಗುಂಡಿಗಳು ಕಾಣಿಸುತ್ತಿರಲ್ಲ.ಇದರಿಂದ ಬೈಕ್ ಸವಾರು ಸಾಕಷ್ಟು ಅನುಭವಿಸುವಂತಾಗಿತ್ತು.
ನಂದಿನಿ ಲೇಔಟ್ನಲ್ಲಿದ್ದ ಗುಂಡಿಗಳನ್ನು ರಾಜಾಜಿನಗರದ ಸಂಚಾರಿ ಪೊಲೀಸರು ಮುಚ್ಚಿದರು. ಪೊಲೀಸರ ಈ ಕಾರ್ಯಕ್ಕೆ ಸವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೇ ರಸ್ತೆಗಳನ್ನ ಕಿತ್ತಿದ್ದ ಡಾಂಬರು ಮಿಶ್ರಣದ ಮಣ್ಣನ್ನು ಟ್ರಾಕ್ಟರ್ನಲ್ಲಿ ತಂದು ಗುಂಡಿಗಳಿಗೆ ಹಾಕಿಸಿದರು. ಇದರೊಂದಿಗೆ ಪೊಲೀಸರು ಮಾದರಿಯಾದರು.
ಬೆಂಗಳೂರು ಟ್ರಾಫಿಕ್ ಪೊಲೀಸರು ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವುದು ಇದೇ ಮೊದಲು ಏನು ಅಲ್ಲ.ಈ ಹಿಂದೆ ಗುಂಡಿನಗಳನ್ನ ಮುಚ್ಚಲು ಪೊಲೀಸರು ಸಲಕೆ ಹಿಡಿದಿರುವ ಸಾಕಷ್ಟು ಉದಾಹರಣೆಗಳಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಬಗ್ಗೆ ಹೈಕೋರ್ಟ್ ಹಲವು ದಿನಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುತ್ತಲೇ ಇದೆ.