ಯಾದಗಿರಿ ವಿಷಾನಿಲ ದುರಂತ: ಮೂವರು ಕಾರ್ಮಿಕರು ದುರ್ಮರಣ, ಇಬ್ಬರು ಸಾವು ಬದುಕಿನ ಹೋರಾಟ!
ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಯಾದಗಿರಿ ಕೆಮಿಕಲ್ ಫ್ಯಾಕ್ಟರಿ ದುರಂತ ಮೂವರು ದುರ್ಮರಣ!
ಯಾದಗಿರಿೆಯ ಕಡೇಚೂರು ಇಂಡಸ್ಟ್ರಿಯಲ್ ಏರಿಯಾದ ಮಿಕಲ್ ಫ್ಯಾಕ್ಟರಿ ಒಂದರಲ್ಲಿ ಅವಘಡ ಸಂಭವಿಸಿ ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ನಡೆದಿದ್ದು, ಇನ್ನಿಬ್ಬರು ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಮೃತ ಕಾರ್ಮಿಕರು:
- ಸಂಜಯ್ ( 25)
- ವಿಕ್ರಮ್ (25)
- ಗಣೇಶ ( 23)(ರಿಮ್ಸ್ ಆಸ್ಪತ್ರೆಯಲ್ಲಿ ಸಾವು)
ಗಾಯಾಳುಗಳು
- ಹೇಮಂತ್ (23)
- ಶಿವಕುಮಾರ್( 25
ಸಾವು-ಬದುಕಿನ ನಡುವಿನ ಗಾಯಾಳುಗಳು
ಮೃತ ಕಾರ್ಮಿಕರು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಆಲಂಪಲ್ಲಿ ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಸ್ವಸ್ಥಗೊಂಡಿರುವ ಹೇಮಂತ್ ಹಾಗೂ ಶಿವಕುಮಾರ್ ಎಂಬುವವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆ ಶಿಫ್ಟ್ ಮಾಡಲಾಗಿದ್ದು ತುರ್ತು ನಿಗಾದಲ್ಲಿ ಚಿಕಿತ್ಸೆ ಮುಂದುವರಿದೆ.
ಯಾದಗಿರಿ ಕೆಮಿಕಲ್ ದುರಂತ: ವೈದ್ಯರಿಗೆ ಕೈಮುಗಿಯುತ್ತಿರೋ ಗಾಯಾಳು
ದುರಂತದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಾಯಾಳು ಹೇಮಂತ್ ಶಿವಕುಮಾರ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಕುಟುಂಬದ ಜವಾಬ್ದಾರಿ ನೆನೆದು' ನಮ್ಮನ್ನು ಬದುಕಿಸಿ' ಎಂದು ವೈದ್ಯರಿಗೆ ಕೈಮುಗಿಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇಬ್ಬರ ನರಳಾಟ ನೋಡಿ ವೈದ್ಯ, ಸಿಬ್ಬಂದಿಯೂ ಪ್ರತಿಕ್ರಿಯೆ ನೀಡದಂತಾಗಿದೆ.
ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..
ಒಂದು ಕಡೆ ಗಾಯಾಳುಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರೆ, ರಿಮ್ಸ್ ಆಸ್ಪತ್ರೆಯ ಹೊರಗಡೆ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಮೃತ ಗಣೇಶನ ತಾಯಿ ತೀವ್ರ ಆಘಾತಕ್ಕೊಳಾಗಿದ್ದಾರೆ.
ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..
ನನ್ನ ಮಗ ನಿನ್ನೆ ಸಂಜೆ 6 ಗಂಟೆಗೇ ಶಿಫ್ಟ್ ಮುಗಿಸಿ ಬರಬೇಕಿತ್ತು. ತನ್ನ ಕೆಲಸ ಮುಗಿಸಿ ಬಂದಿದ್ರೆ ಮಗ ಬದುಕುಳಿತಿದ್ದ ಅಂತಾ ಮೃತ ಗಣೇಶನ ತಾಯಿ ಪದ್ಮ ಕಣ್ಣೀರು. ಸಹೋದ್ಯೋಗಿ ರಜೆ ಹಾಕಿದ್ದನೋ ಏನೋ ಅವನ ಶಿಫ್ಟ್ ಮಾಡಲು ನೈಟ್ ಶಿಫ್ಟ್ ಮಾಡಲು ಫ್ಯಾಕ್ಟರಿಯಲ್ಲೇ ಉಳಿದುಬಿಟ್ಟ. ನಿನ್ನೆ ಫೋನ್ ಮಾಡಿ, ಬೇರೊಬ್ಬನ ಶಿಫ್ಟ್ ಇದೆ ಅಮ್ಮಾ ಕಂಟಿನ್ಯೂ ಮಾಡಿ ಬರ್ತಿನಿ ಅಂತಾ ಹೇಳಿದ್ದ ಮಗ ಬಾರದ ಲೋಕಕ್ಕೆ ಹೋಗಿಬಿಟ್ಟ ಎಂದು ಕಣ್ಣೀರು ಹಾಕುತ್ತಿರುವ ತಾಯಿ. ತಂದೆ ಇಲ್ಲದ ಕುಟುಂಬಕ್ಕೆ ತಾನೇ ಹೆಗಲಾಗಿ ನಿಂತಿದ್ದ ಮಗ ಗಣೇಶ ಈಗ ದುರಂತದಲ್ಲಿ ಮೃತನಾಗಿರುವುದು ತಾಯಿಯನ್ನ ಒಂಟಿಯಾಗಿಸಿದ್ದಾನೆ.

