MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Karnataka Districts
  • Mysuru: ನಾಳೆ ಮದುವೆ, ಇಂದು ಮದುಮಗಳು-ತಂದೆ-ತಾಯಿ ಮೂವರೂ ಸಾವು! ಡ್ರೈವರ್ ಕಿರುಕುಳಕ್ಕೆ ಕುಟುಂಬವೇ ಸರ್ವನಾಶ!

Mysuru: ನಾಳೆ ಮದುವೆ, ಇಂದು ಮದುಮಗಳು-ತಂದೆ-ತಾಯಿ ಮೂವರೂ ಸಾವು! ಡ್ರೈವರ್ ಕಿರುಕುಳಕ್ಕೆ ಕುಟುಂಬವೇ ಸರ್ವನಾಶ!

ಮೈಸೂರಿನ ಟಿ.ನರಸೀಪುರದಲ್ಲಿ, ಮದುವೆಗೆ ಸಿದ್ಧವಾಗಿದ್ದ ಯುವತಿ ಮತ್ತು ಆಕೆಯ ಪೋಷಕರು ಆ*ತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪರಿಚಯಸ್ಥ ಯುವಕನೊಬ್ಬನ ನಿರಂತರ ಕಿರುಕುಳ ಮತ್ತು ಮಾನಹಾನಿಯಿಂದ ನೊಂದು ಈ ಕುಟುಂಬ ಸಾವಿಗೆ ಶರಣಾಗಿದ್ದು, ಈ ಘಟನೆಯು ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

2 Min read
Author : Sathish Kumar KH
Published : Jun 22 2026, 06:15 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಮೈಸೂರು (ಜೂ.22): ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಇಂದು ಸ್ಮಶಾನ ಮೌನ ಆವರಿಸಿದೆ. ನಾಳೆ ಹಸೆಮಣೆ ಏರಬೇಕಿದ್ದ ಮದುಮಗಳು ಮತ್ತು ಆಕೆಯ ತಂದೆ-ತಾಯಿ ಶವವಾಗಿ ಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಈ ದಾರುಣ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪರಿಚಯಸ್ಥ ಯುವಕನೊಬ್ಬನ ಅತಿಯಾದ ಕಿರುಕುಳ ಮತ್ತು ಮಾನಸಿಕ ಹಿಂಸೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಘಟನೆಯ ವಿವರ:

ಗ್ರಾಮದ ನಿವಾಸಿಗಳಾದ ಶಿವಣ್ಣ (54), ನಾಗರತ್ನ (44) ಮತ್ತು ಅವರ ಪುತ್ರಿ ರಕ್ಷಿತಾ (21) ಆ*ತ್ಮ*ಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರ ಸಾವಿಗೆ ಇದೇ ಗ್ರಾಮದ ಉಲ್ಲಾಸ್ ಗೌಡ ಎಂಬ ಯುವಕ ನೀಡಿದ ಮಾನಸಿಕ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ರಕ್ಷಿತಾಗೆ ಮೂರು ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಯವಾಗಿತ್ತು. ಜೂನ್ 23 ಮತ್ತು 24 ರಂದು ಮದುವೆ ಸಮಾರಂಭ ನಡೆಯಬೇಕಿತ್ತು. ಮದುವೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು.

Related Articles

Related image1
Bigg Boss ಶೋಗೆ ಹೋಗಿದ್ದು ತಂಗಿ, ಲವ್‌ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS
Related image2
Secret Tips: ಮದುವೆ ಆದವರು, ಆಗದೇ ಇರುವವರು ಎಲ್ಲರೂ ಒಮ್ಮೆ ನೋಡಿ.. ಕಳೆದುಕೊಂಡಿದ್ದೇನು, ಪಡೆದುಕೊಂಡಿದ್ದೇನು?
36
Image Credit : Asianet News

ಕಿರಾತಕನ ಕಿರುಕುಳ:

ಆರೋಪಿ ಉಲ್ಲಾಸ್ ಗೌಡ ಮೃತ ಶಿವಣ್ಣ ಅವರ ಬಳಿ ಟ್ರ್ಯಾಕ್ಟರ್ ಓಡಿಸುತ್ತಿದ್ದು, ಕುಟುಂಬದವರೊಂದಿಗೆ ಒಡನಾಟ ಹೊಂದಿದ್ದ. ಆದರೆ ಕಳೆದ ಒಂದು ವಾರದಿಂದ ರಕ್ಷಿತಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದ. 'ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ಅವಳನ್ನು ನನಗೇ ಕೊಡಬೇಕು' ಎಂದು ನೇರವಾಗಿ ತಂದೆಯನ್ನೇ ಕೇಳಿದ್ದ. ಇದಕ್ಕೆ ಶಿವಣ್ಣ ಅವರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ಕೇಳದ ಉಲ್ಲಾಸ್, ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ರಕ್ಷಿತಾಳ ಫೋಟೋ ಮತ್ತು ಮೆಸೇಜ್‌ಗಳನ್ನು ಕಳುಹಿಸಿ ವಿಕೃತಿ ಮೆರೆದಿದ್ದಾನೆ.

46
Image Credit : Asianet News

ಪಂಚಾಯತಿ ಆದರೂ ಬಿಡದ ಹಠ:

ಈ ವಿಚಾರವಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಪಂಚಾಯತಿಯಲ್ಲಿ ಉಲ್ಲಾಸ್ ಬಳಿ ಇದ್ದ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ, ತನ್ನ ಹಠ ಬಿಡದ ಉಲ್ಲಾಸ್, ಮದುವೆ ಆಗಲಿರುವ ಹುಡುಗನಿಗೆ ನೇರವಾಗಿ ಮಾಹಿತಿ ನೀಡಿ ಮಾನಹಾನಿ ಮಾಡಿದ್ದನು. ಇದರಿಂದ ತೀವ್ರ ನೊಂದ ಕುಟುಂಬ, ಬಾಳೆಹಣ್ಣಿನಲ್ಲಿ ವಿಷದ ಟ್ಯೂಬ್ ಬೆರೆಸಿ ಸೇವಿಸಿ ಸಾವಿಗೆ ಶರಣಾಗಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಉಲ್ಲಾಸ್ ಹೆಸರನ್ನು ಉಲ್ಲೇಖಿಸಲಾಗಿದೆ.

56
Image Credit : Asianet News

ರೊಚ್ಚಿಗೆದ್ದ ಗ್ರಾಮಸ್ಥರು - ಪೊಲೀಸ್ ಜೊತೆ ಸಂಘರ್ಷ:

ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ. ಆರೋಪಿ ಉಲ್ಲಾಸ್ ಗೌಡನನ್ನು ಬಂಧಿಸುವವರೆಗೂ ಮೃತದೇಹಗಳನ್ನು ಸ್ಥಳದಿಂದ ಸರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಮೃತದೇಹಗಳನ್ನು ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಲು ಯತ್ನಿಸಿದಾಗ ಗ್ರಾಮಸ್ಥರು ಮುತ್ತಿಗೆ ಹಾಕಿ ತಡೆದರು. ರಾಜಕೀಯ ಮುಖಂಡ ಸಿ.ಟಿ. ಕುಮಾರ್ ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದರೂ ಗ್ರಾಮಸ್ಥರು ಕಿಂಚಿತ್ತೂ ಬಗ್ಗಲಿಲ್ಲ. ಆಕ್ರೋಶ ಹೆಚ್ಚಾದ ಕಾರಣ ಪೊಲೀಸರು ಕಳುಹಿಸಿದ್ದ ಆಂಬ್ಯುಲೆನ್ಸ್‌ಅನ್ನು ಅರ್ಧ ದಾರಿಯಿಂದಲೇ ವಾಪಸ್ ಕರೆಸಬೇಕಾಯಿತು.

66
Image Credit : Asianet News

ಅಜ್ಜಿಯ ಕಣ್ಣೀರು:

'ನನ್ನ ಮೊಮ್ಮಗಳು ಮದುವೆಗೆ ಸಿದ್ಧವಾಗಿದ್ದಳು. ಆದರೆ ಆ ಕಿರಾತಕ ಅವಳ ಮಾನ ತೆಗೆದಿದ್ದಾನೆ. ನನ್ನ ಅಳಿಯನ ಜೊತೆಯೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದಾನೆ. ಅವನಿಗಾದ ಕಿರುಕುಳಕ್ಕೆ ಈ ಮೂವರು ಬಲಿಯಾಗಿದ್ದಾರೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಮೃತಳ ಅಜ್ಜಿ ಚಿನ್ನಮ್ಮ ಕಣ್ಣೀರು ಹಾಕಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಮೈಸೂರು
ಮದುವೆ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಮಂಡ್ಯ: ಸತ್ತ ಭಿಕ್ಷುಕಿ ಗುಡಿಸಲಿನಲ್ಲಿ ಹಣದ ಮೂಟೆಗಳ ರಾಶಿ, ಮನೆಯವರು ಎಣಿಸಲಾಗದೇ ಮಸೀದಿಗೆ ತಂದರು!
Recommended image2
ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!
Recommended image3
Bengaluru: 'ಕರೆದಾಗ ಎಲ್ಲಾ ರೂಮಿಗೆ ಬರ್ಬೇಕು', ಕ್ಲಾಸ್‌ಮೆಟ್ ಕಿರುಕುಳಕ್ಕೆ ನೊಂದು ಕೆರೆಗೆ ಹಾರಿದ ಯುವತಿ
Related Stories
Recommended image1
Bigg Boss ಶೋಗೆ ಹೋಗಿದ್ದು ತಂಗಿ, ಲವ್‌ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS
Recommended image2
Secret Tips: ಮದುವೆ ಆದವರು, ಆಗದೇ ಇರುವವರು ಎಲ್ಲರೂ ಒಮ್ಮೆ ನೋಡಿ.. ಕಳೆದುಕೊಂಡಿದ್ದೇನು, ಪಡೆದುಕೊಂಡಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved