- Home
- Karnataka Districts
- ಜೂನ್ 1ರಿಂದ ಯಶವಂತಪುರ-ವಿಜಯಪುರ ನಡುವೆ ಹೊಸ ಎಕ್ಸ್ಪ್ರೆಸ್; ಗದಗ ಬೈಪಾಸ್ ಮೂಲಕ ನೇರ ಪ್ರಯಾಣ
ಜೂನ್ 1ರಿಂದ ಯಶವಂತಪುರ-ವಿಜಯಪುರ ನಡುವೆ ಹೊಸ ಎಕ್ಸ್ಪ್ರೆಸ್; ಗದಗ ಬೈಪಾಸ್ ಮೂಲಕ ನೇರ ಪ್ರಯಾಣ
ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು ಸಂಚಾರ ಜೂನ್ 1 ರಿಂದ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮೂಲಕ ಸಂಚರಿಸುವ ಈ ರೈಲಿನ ಸಮಯ ಬದಲಾವಣೆಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು
ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು ಪ್ರಾರಂಭಕ್ಕೆ ರೈಲ್ವೆ ಇಲಾಖೆ ನನ್ನ ಪ್ರಸ್ತಾವನೆ ಮೇರೆಗೆ ಅನುಮೋದಿಸಿ ಜೂ. 1ರಿಂದ ಆರಂಭಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಬೈಪಾಸ್ ರೈಲು
ಈ ಕುರಿತು ಪ್ರಕಟಣೆ ನೀಡಿರುವ, ವಿಜಯಪುರ ನಾಗರಿಕರ ಅತಿ ಬೇಡಿಕೆಯಾಗಿದ್ದ ಈ ವಿಶೇಷ ರೈಲು ಯಶವಂತಪುರ ಹಾಗೂ ವಿಜಯಪುರದ ಮಧ್ಯೆ ನೇರವಾಗಿ ಸಂಪರ್ಕಿಸಲಿದೆ. ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಬೈಪಾಸ್ ಮುಖಾಂತರ ಈ ರೈಲು ಸಂಚರಿಸಲಿದೆ. ಇದು ವಿಜಯಪುರ - ಬಾಗಲಕೋಟೆ ಜಿಲ್ಲೆಯ ಭಾಗದ ಜನರಿಗೆ ಸೂಪರ್ ಫಾಸ್ಟ್ ರೈಲಿನ ರೀತಿ ಕೆಲಸ ಮಾಡಲಿದೆ.
ಇದನ್ನೂ ಓದಿ: ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?
ವಾರದಲ್ಲಿ ಎರಡು ದಿನ ಸಂಚಾರ
ಪ್ರತಿ ಶನಿವಾರ ಮತ್ತು ಸೋಮವಾರ ರೈಲು ಸಂಖ್ಯೆ 06577 ಯಶವಂತಪುರ-ವಿಜಯಪುರ ಹಾಗೂ ಪ್ರತಿ ಭಾನುವಾರ ಹಾಗೂ ಮಂಗಳವಾರ ರೈಲು ಸಂಖ್ಯೆ 06578 ವಿಜಯಪುರ-ಯಶವಂತಪುರ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ
ಸಮಯ ಬದಲಾವಣೆಗೆ ಮನವಿ
ಈ ರೈಲಿನ ಸ್ವಲ್ಪ ಸಮಯದ ಬದಲಾವಣೆ ಮಾಡಿ ಯಶವಂತಪುರಕ್ಕೆ ಬೆಳಗ್ಗೆ 5.30-6.30 ಗಂಟೆಯ ಮಧ್ಯೆ ತಲುಪುವ ರೀತಿ ಆದರೆ ಹಾಗೂ ಬಾಗಲಕೋಟೆಗೆ 5.00-5.30 ಗಂಟೆಗೆ ತಲುಪುವ ರೀತಿ ಆದರೆ ಈ ರೈಲಿಗೆ ಅತ್ಯಂತ ದೊಡ್ಡ ಯಶಸ್ಸು ದೊರೆಯುತ್ತದೆ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ರೈಲು ಪ್ರಯಾಣ ಆರಂಭಿಸಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಬೆಳಗಾವಿಗೆ ಟಿಕೆಟ್ ಸಿಗ್ತಿಲ್ಲವಾ? ಇಲ್ಲಿವೆ ಸ್ಪೆಷಲ್ ರೈಲುಗಳ ಡಿಟೈಲ್ಸ್

