ಮನಸ್ಸಿದ್ದರೆ ಮಾರ್ಗ: ಇತರರಿಗೆ ಮಾದರಿಯಾದ ಹಾವೇರಿಯ ರೈತ..!
ಹಾವೇರಿ(ಏ.30): ಲಾಕ್ಡೌನ್ ಮಧ್ಯೆಯೂ ಸ್ಥಳೀಯವಾಗಿಯೇ ತರಕಾರಿಗಳ ಮಾರಾಟಕ್ಕೆ ಮಾರುಕಟ್ಟೆ ಕಂಡುಕೊಂಡ ರೈತನೊಬ್ಬ ಇತರ ರೈತರಿಗೆ ಮಾದರಿಯಾಗಿದ್ದಾರೆ. ಹೌದು, ಜಿಲ್ಲೆಯ ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಈರಪ್ಪ ಶಿವಪ್ಪ ಕಲ್ಲಪ್ಪನವರ ಎಂದ ರೈತ ಲಾಕ್ಡೌನ್ ನಡುವೆಯೂ ದೃತಿಗೆಡದೆ ತಾವು ಬೆಳೆದ ತರಕಾರಿಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಲಾಭಗಳಿಸಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರ ಮಾರ್ಗದರ್ಶನದಿಂದ ಸುರಕ್ಷಿತ ಕ್ರಮ ಅನುಸರಿಸಿ ತರಕಾರಿ ಮಾರಾಟಕ್ಕೆ ಮಾರುಕಟ್ಟೆ ಕಂಡುಕೊಂಡ ರೈತ
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆದ ರೈತ
ತೋಟಗಾರಿಕೆ ಇಲಾಖೆಯಿಂದ ಪಾಸ್ ಪಡೆದು ತಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಗೆ ಖುದ್ದಾಗಿ ತೆರಳಿ ತರಕಾರಿ ಮಾರಾಟ ಮಾಡುತ್ತಿರುವ ರೈತ ಈರಪ್ಪ ಶಿವಪ್ಪ ಕಲ್ಲಪ್ಪನವರ
ಲಾಕ್ಡೌನ್ ಮಧ್ಯೆಯೂ ವಿವಿಧ ತರಕಾರಿ ಮಾರಾಟ ಮಾಡಿ ಒಟ್ಟು 46,500 ರು. ಲಾಭ ಗಳಿಸಿದ ರೈತ