MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಪಂಚಮಸಾಲಿ ಮಠದ ಹರಿಹರ ಪೀಠ ವಿವಾದ ವಚನಾನಂದ ಶ್ರೀ ಮಾಜಿ ಸಚಿವ ನಿರಾಣಿಯಿಂದ 2 ಕೋಟಿ ಪಡೆದ ಆರೋಪ!

ಪಂಚಮಸಾಲಿ ಮಠದ ಹರಿಹರ ಪೀಠ ವಿವಾದ ವಚನಾನಂದ ಶ್ರೀ ಮಾಜಿ ಸಚಿವ ನಿರಾಣಿಯಿಂದ 2 ಕೋಟಿ ಪಡೆದ ಆರೋಪ!

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹೆಚ್.ಎಸ್. ನಾಗರಾಜ ಅವರು, ವಚನಾನಂದ ಶ್ರೀಗಳು ಮಾಜಿ ಸಚಿವ ಮುರುಗೇಶ ನಿರಾಣಿಯಿಂದ 2 ಕೋಟಿ ರೂ. ಪಡೆದು ದುರ್ಬಳಕೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಠದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವ ಆರೋಪ.

2 Min read
Author : Gowthami K
Published : Apr 16 2026, 01:31 PM IST
Share this Photo Gallery
  • FB
  • TW
  • Linkdin
  • Whatsapp
17
ಮುರುಗೇಶ ನಿರಾಣಿಯಿಂದ 2 ಕೋಟಿ ಪಡೆದ ಆರೋಪ
Image Credit : Asianet News

ಮುರುಗೇಶ ನಿರಾಣಿಯಿಂದ 2 ಕೋಟಿ ಪಡೆದ ಆರೋಪ

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಒಳಗಿನ ವಿವಾದ ತಾರಕಕ್ಕೇರಿದ್ದು, ಟ್ರಸ್ಟಿ ಹೆಚ್‌.ಎಸ್‌. ನಾಗರಾಜ ಅವರು ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿ ಸಂಚಲನ ಸೃಷ್ಟಿಸಿದ್ದಾರೆ. ದಾವಣಗೆರೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಶ್ರೀ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಂದ ಸುಮಾರು ಎರಡು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ನಾಗರಾಜ ಆರೋಪಿಸಿದರು. ಸಮಾಜದ ಉದ್ದೇಶಕ್ಕಾಗಿ ನೀಡಲಾದ ಆ ಹಣ ಎಲ್ಲಿಗೆ ಹೋಗಿದೆ? ಅದು ನಿಮ್ಮ ಐಷಾರಾಮಿ ಜೀವನಕ್ಕೆ ಬಳಸಲ್ಪಟ್ಟಿದೆಯೇ?” ಎಂದು ಪ್ರಶ್ನಿಸಿದರು. ಈ ಹಣವನ್ನು ಸುಮಾರು ಒಂದೂವರೆ-ಎರಡು ವರ್ಷಗಳ ಹಿಂದೆ ಪಡೆದಿದ್ದು, ಅದರ ಲೆಕ್ಕ ನೀಡಬೇಕೆಂದು ಒತ್ತಾಯಿಸಿದರು.

27
ಈಗ ಮಾತ್ರ ಭಕ್ತರ ಬಗ್ಗೆ ಮಾತನಾಡುತ್ತಿರುವುದು ಏಕೆ?
Image Credit : Asianet News

ಈಗ ಮಾತ್ರ ಭಕ್ತರ ಬಗ್ಗೆ ಮಾತನಾಡುತ್ತಿರುವುದು ಏಕೆ?

ವಚನಾನಂದ ಶ್ರೀಗಳು ಸಮಾಜದ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ನಾಗರಾಜ, “ಮಠದಲ್ಲಿ ನಿಷ್ಠೆಯಿಂದ ಇರುವ ಬದಲು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಲಾಗಿದೆ. ಈಗ ಮಾತ್ರ ಭಕ್ತರ ಬಗ್ಗೆ ಮಾತನಾಡುತ್ತಿರುವುದು ಏಕೆ?” ಎಂದು ಪ್ರಶ್ನಿಸಿದರು.

Related Articles

Related image1
ಪೀಠ ಬಿಡದಿದ್ದರೆ ಧರಧರನೆ ಎಳೆದು ಹೊರ ಹಾಕ್ತೀವಿ: ವಚನಾನಂದ ಶ್ರೀ ವಿರುದ್ಧ ಆಕ್ರೋಶ
Related image2
ಹರಿಹರ ಪೀಠದಲ್ಲಿ ಭುಗಿಲೆದ್ದ ಸಂಘರ್ಷ: ಪಂಚಮಸಾಲಿ ಪೀಠದ ವಚನಾನಂದ ಶ್ರೀ ಪದಚ್ಯುತಿ, ಟ್ರಸ್ಟ್ ನಿರ್ಣಯಕ್ಕೆ ಕಾರಣವೇನು?
37
ಅಪಾಯಕಾರಿ ಸ್ವಾಮೀಜಿ
Image Credit : Asianet News

ಅಪಾಯಕಾರಿ ಸ್ವಾಮೀಜಿ

ಇದಲ್ಲದೆ, ವಚನಾನಂದ ಶ್ರೀಗಳು ಹಿರಿಯ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ನಡೆದ ಮಾತುಕತೆಗಳನ್ನು ರಹಸ್ಯವಾಗಿ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡು ನಂತರ ಅವನ್ನು ಪ್ರದರ್ಶಿಸುತ್ತಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಯಾವ ನಾಯಕರು ಕೂಡ ವಚನಾನಂದ ಶ್ರೀಗಳೊಂದಿಗೆ ಫೋನ್‌ನಲ್ಲಿ ಮಾತನಾಡಬಾರದು. ಅವರು ಅಪಾಯಕಾರಿ ಸ್ವಾಮೀಜಿ ಎಂದು ಎಚ್ಚರಿಕೆ ನೀಡಿದರು.

47
ಹಣ ನೀಡಿ ಜನರನ್ನು ಕರೆತರಿಸುವುದು ಸರಿಯಲ್ಲ
Image Credit : Asianet News

ಹಣ ನೀಡಿ ಜನರನ್ನು ಕರೆತರಿಸುವುದು ಸರಿಯಲ್ಲ

ಇತ್ತೀಚೆಗೆ ವಚನಾನಂದ ಶ್ರೀಗಳು ಒಬ್ಬರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆದ ವಿಷಯಕ್ಕೂ ಪ್ರತಿಕ್ರಿಯಿಸಿದ ನಾಗರಾಜ, “ಟ್ರಸ್ಟ್‌ನವರು ತಮ್ಮನ್ನು ಮಠದಿಂದ ಹೊರಹಾಕುವ ಸಾಧ್ಯತೆ ಇದೆ ಎಂಬುದನ್ನು ಅರಿತ ನಂತರವೇ ಇಂತಹ ಕ್ರಿಮಿನಲ್ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಹಣ ನೀಡಿ ಜನರನ್ನು ಕರೆತರಿಸುವುದು ಸರಿಯಲ್ಲ,” ಎಂದು ಆರೋಪಿಸಿದರು. ಸಿರಿಗೆರೆ ಶ್ರೀಗಳ ಹೆಸರನ್ನು ಬಳಸುವ ಯೋಗ್ಯತೆ ವಚನಾನಂದ ಶ್ರೀಗಳಿಗೆ ಇಲ್ಲ ಎಂದು ಕಿಡಿಕಾರಿದ ಅವರು, “ಸಿರಿಗೆರೆ ಶ್ರೀಗಳು ನಮ್ಮ ಗುರುಗಳು. ಅವರ ಬಗ್ಗೆ ಮಾತನಾಡಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ,” ಎಂದು ಎಚ್ಚರಿಸಿದರು.

57
ಮಠ ತೊರೆಯಲು 1 ವಾರ ಗಡುವು
Image Credit : Asianet News

ಮಠ ತೊರೆಯಲು 1 ವಾರ ಗಡುವು

ವಚನಾನಂದ ಶ್ರೀಗಳು ಮಠವನ್ನು ತಕ್ಷಣ ತೊರೆಯಬೇಕು ಎಂದು ಒತ್ತಾಯಿಸಿದ ನಾಗರಾಜ, ಅವರಿಗೆ ಒಂದು ವಾರದ ಗಡುವು ನೀಡಿದರು. “ಒಂದು ವಾರದೊಳಗೆ ಮಠವನ್ನು ಗೌರವಯುತವಾಗಿ ಬಿಟ್ಟು ಹೋಗಬೇಕು. ಇಲ್ಲದಿದ್ದರೆ ಸಾವಿರಾರು ಜನರನ್ನು ಸೇರಿಸಿ ಮಠದಿಂದ ಹೊರಹಾಕುವ ಕ್ರಮ ಕೈಗೊಳ್ಳುತ್ತೇವೆ,” ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

67
 ತಮ್ಮ ಸಹೋದರ ವಿರುದ್ಧ ಆಕ್ರೋಶ
Image Credit : Asianet News

ತಮ್ಮ ಸಹೋದರ ವಿರುದ್ಧ ಆಕ್ರೋಶ

ಇದೇ ವೇಳೆ, ಹರಿಹರ ಪಂಚಮಸಾಲಿ ಪೀಠದ ವಿವಾದದಲ್ಲಿ ತಮ್ಮ ಸಹೋದರ ಹಾಗೂ ಹರಿಹರದ ಮಾಜಿ ಶಾಸಕ ಹೆಚ್‌.ಎಸ್‌. ಶಿವಶಂಕರ್ ವಿರುದ್ಧವೂ ನಾಗರಾಜ ತೀವ್ರ ವಾಗ್ದಾಳಿ ನಡೆಸಿದರು. “ಸಮಾಜವನ್ನು ಬಳಸಿಕೊಳ್ಳುವವರಾಗಿದ್ದು, ಅದರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ,” ಎಂದು ಆರೋಪಿಸಿದರು.

ಕೂಡಲಸಂಗಮ ಪೀಠ ಹಾಗೂ 2ಎ ಮೀಸಲಾತಿ ಹೋರಾಟದ ಹಣಕಾಸು ವ್ಯವಹಾರಗಳ ಕುರಿತು ಕೂಡ ಪ್ರಶ್ನೆ ಎತ್ತಿದ ನಾಗರಾಜ, “ಎಷ್ಟು ಹಣ ಸಂಗ್ರಹಿಸಲಾಗಿದೆ? ಅದರ ಲೆಕ್ಕ ಎಲ್ಲಿದೆ?” ಎಂದು ಪ್ರಶ್ನಿಸಿದರು. “ಅಕ್ಕಿ ಹಾಗೂ ಇತರ ಧಾನ್ಯಗಳನ್ನೂ ಸಂಗ್ರಹಿಸಿ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದರ ಸಂಪೂರ್ಣ ಲೆಕ್ಕ ನೀಡಬೇಕು,” ಎಂದು ಒತ್ತಾಯಿಸಿದರು.

77
ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ
Image Credit : Asianet News

ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ

ಉಮಾಪತಿ ಅವರು ಸಮಾಜದ ಆಸ್ತಿ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಎಲ್ಲರಿಗೂ ಇರಬೇಕು ಎಂದು ಹೇಳಿದ ನಾಗರಾಜ, ತಮ್ಮ ವಿರುದ್ಧ ಟೀಕೆ ಮಾಡಿದವರನ್ನೇ ಈಗ ತಮ್ಮ ಮೇಲೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಒಟ್ಟಾರೆ, ಹರಿಹರ ಪಂಚಮಸಾಲಿ ಪೀಠದ ಒಳಗಿನ ಈ ಸಂಘರ್ಷ ಈಗ ಬಹಿರಂಗವಾಗಿ ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಪಂಚಮಸಾಲಿ
ಲಿಂಗಾಯತ
ಕರ್ನಾಟಕ ಸುದ್ದಿ
ಸುದ್ದಿ
ದಾವಣಗೆರೆ

Latest Videos
Recommended Stories
Recommended image1
ಸರ್ಕಾರಿ ಟೆಂಡರ್ ಹೈಟೆಕ್ ವಂಚನೆ: ತಾನು IAS ಅಧಿಕಾರಿ ಎಂದು ನಂಬಿಸಿ ಉದ್ಯಮಿಗೆ ₹41 ಲಕ್ಷ ಪಂಗನಾಮ ಹಾಕಿದ ಕಿರಾತಕ!
Recommended image2
ಟ್ರ್ಯಾಕ್ಟರ್ ಸಬ್ಸಿಡಿ ಆಸೆ ತೋರಿಸಿ 80 ರೈತರಿಗೆ 1.35 ಕೋಟಿ ರೂ. ಪಂಗನಾಮ: ಕಾಫಿನಾಡಲ್ಲಿ ಬೃಹತ್ ವಂಚನೆ ಜಾಲ ಪತ್ತೆ!
Recommended image3
ಬಹಳ ಒಳ್ಳೇವ್ರು ಕುಂದಾಪುರದ ಈ ಮಿಸ್ಸು; ಹೊಡೆಯಲ್ಲ, ಶಿಕ್ಷೆ ಕೊಡಲ್ಲ, ರಜೆ ಹಾಕಲ್ಲ: ಎಲ್ಲದಕ್ಕೂ ಎಸ್ಸೆಸ್ಸು
Related Stories
Recommended image1
ಪೀಠ ಬಿಡದಿದ್ದರೆ ಧರಧರನೆ ಎಳೆದು ಹೊರ ಹಾಕ್ತೀವಿ: ವಚನಾನಂದ ಶ್ರೀ ವಿರುದ್ಧ ಆಕ್ರೋಶ
Recommended image2
ಹರಿಹರ ಪೀಠದಲ್ಲಿ ಭುಗಿಲೆದ್ದ ಸಂಘರ್ಷ: ಪಂಚಮಸಾಲಿ ಪೀಠದ ವಚನಾನಂದ ಶ್ರೀ ಪದಚ್ಯುತಿ, ಟ್ರಸ್ಟ್ ನಿರ್ಣಯಕ್ಕೆ ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved