- Home
- Karnataka Districts
- ಭದ್ರಾ ನದಿ ಪ್ರವಾಹ: ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದ ಅಡಿಕೆ, ಕಾಫಿ ತೋಟ ಕ್ಷಣಾರ್ಧದಲ್ಲಿ ಕೊಚ್ಚಿಹೋಯ್ತು!
ಭದ್ರಾ ನದಿ ಪ್ರವಾಹ: ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದ ಅಡಿಕೆ, ಕಾಫಿ ತೋಟ ಕ್ಷಣಾರ್ಧದಲ್ಲಿ ಕೊಚ್ಚಿಹೋಯ್ತು!
ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿ ಭದ್ರಾ ನದಿ ಪ್ರವಾಹದಿಂದ ರೈತ ಅಶೋಕ್ ಅವರ ಸಂಪೂರ್ಣ ತೋಟ ನಾಶವಾಗಿದೆ. ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಬೆಳೆದಿದ್ದ ಕಾಫಿ, ಅಡಿಕೆ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮನೆಗೂ ನೀರು ನುಗ್ಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ರೈತನ ಗೋಳು ನೀವೂ ಕೇಳಿ.

ಚಿಕ್ಕಮಗಳೂರು (ಆ.02): ಧರ್ಮಸ್ಥಳ ಸಂಘದಲ್ಲಿ (Dharmasthala Sangha) ಲಕ್ಷಾಂತರ ರೂ. ಸಾಲವನ್ನು ಮಾಡಿ, ಹೊಟ್ಟೆಬಟ್ಟೆ ಕಟ್ಟಿ ಮನೆಯ ಮುಂದೆ ತೆಂಗು, ಅಡಿಕೆ, ಕಾಫಿ, ಬಾಳೆ, ಏಲಕ್ಕಿ ಬೆಳೆಯನ್ನು ಬೆಳೆದಿದ್ದೆವು. ಇಷ್ಟು ವರ್ಷಗಳ ಶ್ರಮ ಇನ್ನೇನು ಫಲ ಕೊಡುತ್ತಿದೆ ಎನ್ನುವ ಈ ವರ್ಷದಲ್ಲಿ ಭಾರೀ ಮಳೆಯಿಂದಾಗಿ ಭದ್ರಾ ನದಿ (Bhadra River flood) ಉಕ್ಕಿ ಹರಿದು ಕೇವಲ 2 ಗಂಟೆಗಳಲ್ಲಿ ಎಲ್ಲ ಬೆಳೆ ನಷ್ಟವಾಗಿದೆ. ಲಕ್ಷಾಂತರ ರೂ. ಸಾಲವನ್ನೂ ತೀರಿಸುವ ಒಂದೇ ಒಂದು ಆಸರೆಯೂ ದೂವರಾಗಿದ್ದು, ಬದುಕೇ ದುಸ್ತರವಾಗಿದೆ ಎಂದು ರೈತರು (Chikkamagaluru Farmer) ಗೋಳಾಡುವ ದೃಶ್ಯ ಮಾತ್ರ ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ (Kalasa) ತಾಲೂಕಿನ ಸಂಸೆ (Samse) ಸಮೀಪದ ಹೊಸಮಠ (Hosamatha) ಗ್ರಾಮದಲ್ಲಿ ಭಾರೀ ಮಳೆ (Heavy Rain) ಮತ್ತು ಭದ್ರಾ (Bhadra River) ನದಿಯ ಪ್ರವಾಹ (Flood) ರೈತ ಕುಟುಂಬದ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ಭದ್ರಾ ನದಿಯ ನೀರು ಏಕಾಏಕಿ ಕೃಷಿ ತೋಟಕ್ಕೆ ನುಗ್ಗಿದ ಪರಿಣಾಮ ಕಾಫಿ (Coffee), ಅಡಿಕೆ (Arecanut), ಬಾಳೆ (Banana) ಹಾಗೂ ಏಲಕ್ಕಿ (Cardamom) ಬೆಳೆಗಳು ಸಂಪೂರ್ಣ ನಾಶವಾಗಿವೆ. ಜೊತೆಗೆ ರೈತನ ಮನೆಗೂ ನೀರು ನುಗ್ಗಿದ್ದು, ದವಸ-ಧಾನ್ಯ ಹಾಗೂ ಮನೆಯೊಳಗಿನ ಸಾಮಗ್ರಿಗಳೂ ನಾಶವಾಗಿವೆ. ಈ ಮೂಲಕ ರೈತನ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಂದಿದೆ.
ಹೊಸಮಠ ಗ್ರಾಮದ ರೈತ ಅಶೋಕ್ (Ashok) ಅವರು ಹಲವು ವರ್ಷಗಳ ಶ್ರಮದಿಂದ ಬೆಳೆಸಿದ್ದ ತೋಟ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಬುಡ ಸಮೇತ ಕಾಫಿ (Coffee) ಮತ್ತು ಅಡಿಕೆ (Arecanut) ಸಸಿಗಳು ನೆಲಕ್ಕುರುಳಿದ್ದು, ಫಸಲಿಗೆ (Harvest) ಬಂದಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ (Agriculture) ಹಾನಿಯಾಗಿರುವುದಾಗಿ ಕುಟುಂಬ ಹೇಳಿಕೊಂಡಿದೆ.
ಧರ್ಮಸ್ಥಳ ಸಂಘದಿಂದ ಸಾಲ ಪಡೆದು ತೋಟ ಅಭಿವೃದ್ಧಿ
ಅಶೋಕ್ ಅವರು ಧರ್ಮಸ್ಥಳ ಸಂಘ (Dharmasthala Sangha)ದಿಂದ ಸಾಲ (Loan) ಪಡೆದು ತೋಟವನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಒಂದೇ ದಿನದ ಪ್ರವಾಹ (Flood) ಅವರ ಹಲವು ವರ್ಷಗಳ ಪರಿಶ್ರಮವನ್ನು ಮಣ್ಣಿನ ಪಾಲು ಮಾಡಿದೆ. ತೋಟದ ಈಗಿನ ಸ್ಥಿತಿಯನ್ನು ಕಂಡು ಅಶೋಕ್ ದಂಪತಿ ಕಣ್ಣೀರಿಟ್ಟಿದ್ದು, ಬದುಕು ಮತ್ತೆ ಹೇಗೆ ಕಟ್ಟಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ.
ಪ್ರವಾಹದ ನೀರು (Flood Water) ತೋಟಕ್ಕೆ ಮಾತ್ರ ಸೀಮಿತವಾಗದೆ ಮನೆಯೊಳಗೂ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು (Household Items), ಅಗತ್ಯ ಸಾಮಗ್ರಿಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳೂ ಹಾನಿಗೊಳಗಾಗಿವೆ. ಕುಟುಂಬ ಇದೀಗ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ.
ಸ್ಥಳೀಯ ಗ್ರಾಮಸ್ಥರು ಕೂಡ ಸರ್ಕಾರ (Government) ತಕ್ಷಣ ಹಾನಿಯ ಸಮೀಕ್ಷೆ (Survey) ನಡೆಸಿ ಸೂಕ್ತ ಪರಿಹಾರ (Compensation) ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳೆ (Rain) ಮತ್ತು ಪ್ರವಾಹದ (Flood) ಹೊಡೆತಕ್ಕೆ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರ ಆರ್ಥಿಕ ನೆರವು (Financial Assistance) ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಲೆನಾಡು (Malnad) ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ (Heavy Rain) ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ರೈತರು ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಸ್ಥಳೀಯ ಆಡಳಿತ (District Administration) ಕೂಡ ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದೆ.

