MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ: ವಧುವಿನ ಅಚ್ಚರಿಯ ದೃಢ ನಡೆ!

ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ: ವಧುವಿನ ಅಚ್ಚರಿಯ ದೃಢ ನಡೆ!

ಕೊಳ್ಳೇಗಾಲದಲ್ಲಿ ಮದುವೆಯ ದಿನದಂದೇ ಪರೀಕ್ಷೆ ಬರೆದ ವಧು. ತಾಳಿ ಕಟ್ಟಿದ ಕೂಡಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮತ್ತೆ ಮದುವೆ ಮಂಟಪಕ್ಕೆ ಬಂದ ಸಂಗೀತಾ. ವಿದ್ಯಾಭ್ಯಾಸ ಮತ್ತು ಮದುವೆ ಎರಡನ್ನೂ ನಿಭಾಯಿಸಿದ ವಧುವಿನ ಕಥೆ.

2 Min read
Gowthami K
Published : May 22 2025, 05:42 PM IST| Updated : May 22 2025, 05:45 PM IST
Share this Photo Gallery
  • FB
  • TW
  • Linkdin
  • Whatsapp
14

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್  ಸುವರ್ಣ  ನ್ಯೂಸ್ ,  ಚಾಮರಾಜನಗರ.

ಚಾಮರಾಜನಗರ: ಆ ಕಲ್ಯಾಣ ಮಂಟಪದಲ್ಲಿ ಜೋಡಿಯೊಂದರ ಮದುವೆ ನಡೀತಾ ಇತ್ತು. ನಿಗಧಿತ ಶುಭ ಮುಹೂರ್ತದಲ್ಲಿ ವರ ತಾಳಿ ಕಟ್ಟುತ್ತಿದ್ದಂತೆ ನವ ವಧು ಎದ್ದೆನೋ ಬಿದ್ದೆನೋ  ಎಂಬಂತೆ ಹಸೆಮಣೆ ಹೊರಗೆ ಹೋದವಳೆ ಮೂರು ಗಂಟೆ ಕಾಲ ಬರಲೆ ಇಲ್ಲ. ಇಡೀ ಕಲ್ಯಾಣಮಂಟಪದಲ್ಲಿ ಜನ ವಧುವಿಗೋಸ್ಕರ ಕಾಯ್ತಾ ಇದ್ದರು. ಹಸೆಮಣೆಯಿಂದ ಆಕೆ ಹೋದದ್ದಾರು ಎಲ್ಲಿಗೆ? ಕೊನೆಗೆ ಏನಾಯ್ತು ಈ ಸ್ಟೋರಿ ನೋಡಿ?

24

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಮಂಟೇಶ್-ಅನುಸೂಯ ದಂಪತಿ ಪುತ್ರಿ ಆರ್ ಸಂಗೀತಾಳಿಗೆ ಉನ್ನತ ಶಿಕ್ಷಣ ಪಡೆಯಬೇಕು, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬೇಕು ಹಂಬಲ.  ಅದಕ್ಕಾಗಿ ಭರ್ಜರಿ ತಯಾರಿಯನ್ನೇ ನಡೆಸಿದ್ದಳು.  ಕೊಳ್ಳೇಗಾಲದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ಬಿ ಕಾಂ ವ್ಯಾಸಂಗ ಮಾಡುತ್ತಿದ್ದ ಸಂಗೀತಾಳಿಗೆ 20 ವರ್ಷ ತುಂಬಿದ್ದರಿಂದ  ಮದುವೆ ಮಾಡಿ ಜವಬ್ದಾರಿ ಮುಗಿಸಬೇಕು ಎಂಬುದು ತಂದೆ ತಾಯಿಯ ಆಸೆ.  ಕೊನೆಗೆ ನಂಜನಗೂಡು ತಾಲೋಕು ಸಿಂಧುವಳ್ಳಿ ಗ್ರಾಮದ  ಯೋಗೀಶ್ ಎಂಬ ಯುವಕನ ಜೊತೆ ಸಂಗೀತಾಳ ಮದುವೆ ಫಿಕ್ಸ್ ಆಗಿಯೇ ಹೋಯ್ತು.   ಮೇ 22 ರಂದು  ಅಂದರೆ ಇಂದು ವಿವಾಹ   ಮಹೋತ್ಸವ ನೆರವೇರಿಸಲು ಆರು ತಿಂಗಳ ಹಿಂದೆಯೇ ಎರಡು ಕಡೆಯವರು ನಿರ್ಧರಿಸಿದ್ದರು. ಈ ನಡುವೆ  ಅಂತಿಮ ಬಿ.ಕಾಂ ನ ಇನ್ಕಂ ಟ್ಯಾಕ್ಸ್ ವಿಷಯದ ಪರೀಕ್ಷೆಯು ಸಹ ಇದೇ ದಿನ ನಿಗಧಿಯಾಗಿತ್ತು.

Related Articles

Related image1
ಮಂಡ್ಯದ ಹೊಟೆಲ್ ಮ್ಯಾನೇಜರ್ ಮದುವೆಯಾದ್ರು ಪಂಡರಿಬಾಯಿ; ಸಾಯವವರೆಗೂ ಕಣ್ಣೀರಿನಲ್ಲೇ ಕೈ ತೊಳೆದ್ರು..!
Related image2
Now Playing
Chamarajanagar: ತಾಳಿ ಕಟ್ಟಿಸಿಕೊಂಡು ಪರೀಕ್ಷೆ ಬರೆದ ಬಿ.ಕಾಂ ವಧು!
34

ಒಂದು ಕಡೆ ಮದುವೆ ಇನ್ನೊಂದು ಕಡೆ ಪರೀಕ್ಷೆ ಎರಡನ್ನೂ ನಿಭಾಯಿಸಲು ಸಜ್ಜಾದ ಸಂಗೀತ ಇಂದು ತಮ್ಮ ಕುತ್ತಿಗೆಗೆ ತಾಳಿ ಬೀಳುತ್ತಿದ್ದಂತೆ ಪತಿ ಹಾಗೂ ತಂದೆ ತಾಯಿಯ ಪರ್ಮಿಷನ್ ಪಡೆದು ಹಸೆಮಣೆಯಿಂದ ನೇರವಾಗಿ ಹೋಗಿದ್ದು ಪರೀಕ್ಷಾ ಕೇಂದ್ರಕ್ಕೆ. ಮದುವೆ ಮಂಟಪದಿಂದ ವಧು  ಹೊರ ಹೋಗುತ್ತಿದ್ದಂತೆ ಮದುವೆಗೆ ಬಂದಿದ್ದ ನೆಂಟರಿಷ್ಟರಿಗೆ ಬಂದು ಬಳಗದವರಿಗೆ   ಆಕೆ ಎಲ್ಲಿಗೆ ಹೋದಳು ಎಂಬುದು ಗೊತ್ತಾಗದೆ   ಕೆಲ ಕಾಲ ಗಾಬರಿಯಾಗಿದ್ದರು.   ಪರೀಕ್ಷೆ ಬರೆದ ಸಂಗೀತಾ ಮತ್ತೆ ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಅಸಲಿ ವಿಚಾರ ಗೊತ್ತಾಗಿ ನಿಟ್ಟುಸಿರು ಬಿಟ್ಟರು.  ಇವತ್ತು ಪರೀಕ್ಷೆ ಬರೆಯದಿದ್ದರೆ ಒಂದು ವರ್ಷ  ವ್ಯರ್ಥ ಆಗುತ್ತೆ, ಮದುವೆಯಷ್ಟೇ  ನನ್ನ ಕೆರಿಯರ್ ಕೂಡ ಹಾಗಾಗಿ ಇವತ್ತೇ ಪರೀಕ್ಷೆ ಬರೆದೆ ಎನ್ನುತ್ತಾರೆ ಸಂಗೀತಾ. 

44

ಇವತ್ತು ಬರೆಯಲೇ ಬೇಕೆಂಬ  ಸಂಗೀತಾ ಅವರ ಹಂಬಲಕ್ಕೆ ಪತಿ ಹಾಗೂ ಅವರ ತಂದೆ ತಾಯಿ ಸಾಥ್ ನೀಡಿದ್ದಾರೆ. ಮದುವೆ ಸಂಭ್ರಮದ ನಡುವೆಯು ಪರೀಕ್ಷೆ ಬರೆದ ಸಂಗೀತಾಳ  ನಡೆಯಿಂದ ಸಂತಸಗೊಂಡಿದ್ದಾರೆ. ಕೆಲವರು ಮದುವೆ ಮಂಟಪದಿಂದ ಬಂದು ಓಟ್ ಮಾಡಿರೋದನ್ನ ನೋಡಿದ್ದೇವೆ, ತಂದೆ ಅಥವಾ ತಾಯಿ ನಿಧನರಾದ ದುಃಖದ ನಡುವೆಯು ಕೆಲವು ಮಕ್ಕಳ ಪರೀಕ್ಷೆ ಬರೆದಿರೋದನ್ನೂ ನೋಡಿದ್ದವೆ. ಇದೀಗ  ತಾಳಿ ಮದುವೆ ಸಂಭ್ರಮದ ನಡುವೆಯು  ಪರೀಕ್ಷೆ  ಬರೆಯುವ ಮೂಲಕ ಸಂಗೀತಾ  ಎಲ್ಲರ ಗಮನ ಸೆಳೆದಿದ್ದಾರೆ. 

  

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಚಾಮರಾಜನಗರ
ಪರೀಕ್ಷೆ
ಮದುವೆ

Latest Videos
Recommended Stories
Recommended image1
ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಶೀಘ್ರ ಸಂಚಾರಕ್ಕೆ ಮುಕ್ತ: 30 ಕೇಬಲ್‌ ಅಳವಡಿಕೆ ಮಾತ್ರ ಬಾಕಿ
Recommended image2
‘ಶಿಕ್ಷಣ ಹಬ್‌’ ಮಂಗಳೂರು ಈಗ ಡ್ರಗ್ಸ್‌ಗೂ ಕುಖ್ಯಾತ: ವಿದ್ಯಾರ್ಥಿಗಳೇ ಬಲಿಪಶು!
Recommended image3
ಐಟಿಎಫ್‌ ಮೇಳಕ್ಕೆ ಬ್ರೇಕ್‌: ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ರಾಜ್ಯ ಸರ್ಕಾರದ ಹೊಸ ಯೋಜನೆ
Related Stories
Recommended image1
ಮಂಡ್ಯದ ಹೊಟೆಲ್ ಮ್ಯಾನೇಜರ್ ಮದುವೆಯಾದ್ರು ಪಂಡರಿಬಾಯಿ; ಸಾಯವವರೆಗೂ ಕಣ್ಣೀರಿನಲ್ಲೇ ಕೈ ತೊಳೆದ್ರು..!
Recommended image2
Now Playing
Chamarajanagar: ತಾಳಿ ಕಟ್ಟಿಸಿಕೊಂಡು ಪರೀಕ್ಷೆ ಬರೆದ ಬಿ.ಕಾಂ ವಧು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved