MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!

ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!

ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ   ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ  ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.

3 Min read
Author : Gowthami K
Published : Jun 20 2026, 12:27 PM IST
Share this Photo Gallery
  • FB
  • TW
  • Linkdin
  • Whatsapp
16
ಶಿರಾಡಿ ಘಾಟ್ ಸುರಂಗ ಮಾರ್ಗ
Image Credit : Asianet News

ಶಿರಾಡಿ ಘಾಟ್ ಸುರಂಗ ಮಾರ್ಗ

ಮಂಗಳೂರು: ಬೆಂಗಳೂರು ಮತ್ತು ಕರಾವಳಿಯ ಪ್ರಮುಖ ನಗರವಾದ ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ "ಶಿರಾಡಿ ಘಾಟ್ ಸುರಂಗ ಮಾರ್ಗ" ಯೋಜನೆಗೆ ಈಗ ದೊಡ್ಡ ತಾಂತ್ರಿಕ ಅಡೆತಡೆ ಎದುರಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡನ್ನೂ ಒಂದೇ ಸುರಂಗದಲ್ಲಿ ನಿರ್ಮಿಸುವ ಬೃಹತ್ ಪ್ರಸ್ತಾವನೆಗೆ ಭೌಗೋಳಿಕ ಏರಿಳಿತಗಳು ಸವಾಲಾಗಿ ಪರಿಣಮಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜಂಟಿ ಸಮೀಕ್ಷೆಯಲ್ಲಿ ಎದುರಾದ ತಾಂತ್ರಿಕ ಅಡ್ಡಿ ಏನು?
Image Credit : X

ಜಂಟಿ ಸಮೀಕ್ಷೆಯಲ್ಲಿ ಎದುರಾದ ತಾಂತ್ರಿಕ ಅಡ್ಡಿ ಏನು?

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಉದ್ದದ ಅಪಾಯಕಾರಿ ಹಾಗೂ ತಿರುವುಗಳಿಂದ ಕೂಡಿದ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸಲು ಇತ್ತೀಚೆಗೆ ಜಂಟಿ ಸರ್ವೆ ನಡೆಸಲಾಗಿತ್ತು. ಆದರೆ, ರಸ್ತೆ ಸಾರಿಗೆ ಮತ್ತು ರೈಲ್ವೆ ಇಲಾಖೆಗಳ ಸುರಕ್ಷತಾ ಮಾನದಂಡ ಹಾಗೂ ಇಳಿಜಾರು (Gradient) ನಿಯಮಗಳಲ್ಲಿ ಭಾರಿ ವ್ಯತ್ಯಾಸವಿರುವುದು ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

Related Articles

Related image1
ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ! ಕೊಂಕಣ ಮಾರ್ಗದಲ್ಲಿ 4 ತಿಂಗಳು ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ
Related image2
KSR Bengaluru ಕಾಮಗಾರಿ: 2 ತಿಂಗಳು ರೈಲು ಸಂಚಾರದಲ್ಲಿ ಭಾರಿ ಏರುಪೇರು, 58 ರೈಲು ರದ್ದು! ವಂದೇ ಭಾರತ್ ಕೂಡ ವ್ಯತ್ಯಯ!
36
ಗ್ರೇಡಿಯಂಟ್ ಸಮಸ್ಯೆ
Image Credit : our own

ಗ್ರೇಡಿಯಂಟ್ ಸಮಸ್ಯೆ

ರಸ್ತೆ ಸಾರಿಗೆ ನಿಯಮ: ಹೆದ್ದಾರಿ ಇಲಾಖೆಯ ಮಾನದಂಡಗಳ ಪ್ರಕಾರ ಸುರಂಗ ರಸ್ತೆಗೆ 1:50 ಗ್ರೇಡಿಯಂಟ್ ಸಾಕಾಗುತ್ತದೆ. ಇದರ ಆಧಾರದ ಮೇಲೆ ಕೇವಲ 38 ಕಿಲೋಮೀಟರ್ ವ್ಯಾಪ್ತಿಯಲ್ಲೇ ಅತ್ಯಂತ ಯಶಸ್ವಿಯಾಗಿ ರಸ್ತೆ ಸುರಂಗವನ್ನು ನಿರ್ಮಿಸಬಹುದಾಗಿದೆ. ರಸ್ತೆ ಜೋಡಣೆಗೆ ಯಾವುದೇ ಪ್ರಮುಖ ತಾಂತ್ರಿಕ ಸಮಸ್ಯೆಗಳಿಲ್ಲ.

ರೈಲ್ವೆ ಇಲಾಖೆ ನಿಯಮ: ರೈಲ್ವೆಯ ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳ ಪ್ರಕಾರ ಘಾಟ್ ವಿಭಾಗದಲ್ಲಿ ಭವಿಷ್ಯದ ದೃಷ್ಟಿಯಿಂದ 1:150 ಗ್ರೇಡಿಯಂಟ್ ಕಡ್ಡಾಯವಾಗಿದೆ (ಪ್ರಸ್ತುತ ಇದು 1:50 ರಷ್ಟಿದೆ). ಈ ಅಪೇಕ್ಷಿತ ಇಳಿಜಾರನ್ನು ಸಾಧಿಸಲು ರೈಲ್ವೆ ಇಲಾಖೆಗೆ ಬರೋಬ್ಬರಿ 88 ಕಿಲೋಮೀಟರ್ ಉದ್ದದ ಸುರಂಗ ಮಾರ್ಗದ ಅಗತ್ಯವಿದೆ.

ಒಂದೇ ಯೋಜನೆಯಡಿ 38 ಕಿ.ಮೀ ರಸ್ತೆ ಸುರಂಗ ಮತ್ತು 88 ಕಿ.ಮೀ ರೈಲು ಸುರಂಗವನ್ನು ಪರಸ್ಪರ ಜೋಡಿಸುವುದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಅಸಾಧ್ಯ ಎಂಬ ತೀರ್ಮಾನಕ್ಕೆ ರೈಲ್ವೆ ಅಧಿಕಾರಿಗಳು ಬಂದಿದ್ದಾರೆ. ಹೀಗಾಗಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸುತ್ತಿವೆ ಎನ್ನಲಾಗಿದೆ

46
ರಸ್ತೆ ಯೋಜನೆ ಶೀಘ್ರ ಆರಂಭ; ರೈಲು ಯೋಜನೆ ವಿಳಂಬ ಸಾಧ್ಯತೆ
Image Credit : our own

ರಸ್ತೆ ಯೋಜನೆ ಶೀಘ್ರ ಆರಂಭ; ರೈಲು ಯೋಜನೆ ವಿಳಂಬ ಸಾಧ್ಯತೆ

ಹೆದ್ದಾರಿ ಇಲಾಖೆಗೆ ಯಾವುದೇ ದೊಡ್ಡ ತಾಂತ್ರಿಕ ಅಡೆತಡೆಗಳಿಲ್ಲದ ಕಾರಣ, ರಸ್ತೆ ಸುರಂಗ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ನಡೆದಿವೆ. ಪ್ರಸ್ತುತ ಜೋಡಣೆ (Alignment) ಕಾರ್ಯಗಳು ನಡೆಯುತ್ತಿದ್ದು, ಏರಿಳಿತದ ಅಂತಿಮ ನಕ್ಷೆ ಸಿದ್ಧವಾದ ತಕ್ಷಣವೇ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಆದರೆ, ರೈಲ್ವೆ ಇಲಾಖೆಯು ಸುರಕ್ಷತೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದರಿಂದ ಕರಾವಳಿ ಭಾಗದ ರೈಲು ಸುರಂಗ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕಗ್ಗಂಟನ್ನು ಬಗೆಹರಿಸಲು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ರೈಲ್ವೆ ಹಾಗೂ ರಸ್ತೆ ಸಾರಿಗೆ ಸಚಿವರನ್ನು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.

56
ಬೆಂಗಳೂರು-ಮಂಗಳೂರು ಡಬ್ಲಿಂಗ್ ಹಾಗೂ ರೈಲ್ವೆ ನಿಗಮ ವಿಲೀನಕ್ಕೆ ಬೇಡಿಕೆ
Image Credit : Asianet News

ಬೆಂಗಳೂರು-ಮಂಗಳೂರು ಡಬ್ಲಿಂಗ್ ಹಾಗೂ ರೈಲ್ವೆ ನಿಗಮ ವಿಲೀನಕ್ಕೆ ಬೇಡಿಕೆ

ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರಸ್ತುತ ಕೇವಲ ಒಂದೇ ರೈಲು ಮಾರ್ಗ (Single Line) ಇರುವುದನ್ನು ಸಂಸದರು ಗಮನ ಸೆಳೆದಿದ್ದಾರೆ. "ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸದೆ, ಕೇವಲ ಹೊಸ ರೈಲುಗಳನ್ನು ಓಡಿಸಬೇಕೆಂಬ ಸಾರ್ವಜನಿಕರ ಬೇಡಿಕೆಗಳು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಘಾಟ್ ವಿಭಾಗದಲ್ಲಿನ ಇಳಿಜಾರು ಸಂಬಂಧಿತ ಸವಾಲುಗಳನ್ನು ಶಾಶ್ವತವಾಗಿ ಪರಿಹರಿಸಬೇಕಾದರೆ ದೀರ್ಘಾವಧಿಯ ಯೋಜನೆಯ ಅಗತ್ಯವಿದೆ," ಎಂದು ಅವರು ಪ್ರತಿಪಾದಿಸಿದರು.

ಈ ನಿಟ್ಟಿನಲ್ಲಿ ಪ್ರಮುಖವಾಗಿ ಎರಡು ಸುಧಾರಣೆಗಳಾಗಬೇಕಿದೆ ಎಂದು ಒತ್ತಿಹೇಳಿದ್ದಾರೆ. ಅವೆಂದರೆ ರಸ್ತುತ ಇರುವ ಹಾಸನ-ಮಂಗಳೂರು ರೈಲ್ವೆ ನಿಗಮವನ್ನು (HMRDC) ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಗಳೂರು ಮತ್ತು ಮಂಗಳೂರು ನಡುವೆ ತುರ್ತಾಗಿ ದ್ವಿಪಥ ರೈಲು ಮಾರ್ಗವನ್ನು (Double Line) ಅಭಿವೃದ್ಧಿಪಡಿಸಬೇಕು.

66
ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸ
Image Credit : Asianet News

ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸ

ಕರಾವಳಿ ಜನತೆಯ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಸ್ತುತ ಹಲವು ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸುತ್ತಿದ್ದಾರೆ. ಈ ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಚೌಟ ಆಶಾವಾದ ವ್ಯಕ್ತಪಡಿಸಿದರು. ಒಮ್ಮೆ ವಂದೇ ಭಾರತ್ ರೈಲಿನ ವೇಳಾಪಟ್ಟಿ ಅಂತಿಮಗೊಂಡ ನಂತರ, ಪುತ್ತೂರು ರೈಲು ನಿಲ್ದಾಣದಲ್ಲಿ ಅದಕ್ಕೆ ಕಡ್ಡಾಯ ನಿಲುಗಡೆ (Stoppage) ನೀಡಬೇಕೆಂಬ ಸಾರ್ವಜನಿಕರ ಪ್ರಬಲ ಬೇಡಿಕೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗುವುದು ಎಂದರು. ಇದೇ ವೇಳೆ, ಪುತ್ತೂರು ಎಪಿಎಂಸಿ ರೈಲ್ವೆ ಮೇಲ್ಸೇತುವೆ ಬಳಿ ಪ್ರಸ್ತಾವಿತ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಂಸದರು ಪತ್ರಕರ್ತರಿಗೆ ತಿಳಿಸಿದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತೀಯ ರೈಲ್ವೆ
ಸಾರಿಗೆ
ರಸ್ತೆ ಸಾರಿಗೆ
ದಕ್ಷಿಣ ಕನ್ನಡ
ಮಂಗಳೂರು

Latest Videos
Recommended Stories
Recommended image1
NEET-UG Re-Exam 2026: ನಾಳೆ ರಾಜ್ಯಾದ್ಯಂತ ನೀಟ್ ಮರು ಪರೀಕ್ಷೆ, ಈ ನಿಯಮ ಉಲ್ಲಂಘಿಸಿದರೆ ಪ್ರವೇಶವಿಲ್ಲ!
Recommended image2
ಕೇರಳದ ವ್ಯಾಪಾರಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌, ಪೋಲಿಸಪ್ಪನ ರಾಬರಿ ಇದೇ ಮೊದಲೇನಲ್ಲ!
Recommended image3
ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ! ಚಿತಾಗಾರಕ್ಕೆ ಬರುವ ಮುನ್ನ ಯಾವೆಲ್ಲ ದಾಖಲೆ ತರಬೇಕು?
Related Stories
Recommended image1
ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ! ಕೊಂಕಣ ಮಾರ್ಗದಲ್ಲಿ 4 ತಿಂಗಳು ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ
Recommended image2
KSR Bengaluru ಕಾಮಗಾರಿ: 2 ತಿಂಗಳು ರೈಲು ಸಂಚಾರದಲ್ಲಿ ಭಾರಿ ಏರುಪೇರು, 58 ರೈಲು ರದ್ದು! ವಂದೇ ಭಾರತ್ ಕೂಡ ವ್ಯತ್ಯಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved