- Home
- Karnataka Districts
- Anjanadri Temple: ತಾಪಮಾನ ಏರಿದರೂ ಭಕ್ತಿ ಕಡಿಮೆ ಆಗಲಿಲ್ಲ; ಒಂದೇ ದಿನ ಅಂಜನಾದ್ರಿಗೆ 25 ಸಾವಿರ ಭಕ್ತರ ಭೇಟಿ!
Anjanadri Temple: ತಾಪಮಾನ ಏರಿದರೂ ಭಕ್ತಿ ಕಡಿಮೆ ಆಗಲಿಲ್ಲ; ಒಂದೇ ದಿನ ಅಂಜನಾದ್ರಿಗೆ 25 ಸಾವಿರ ಭಕ್ತರ ಭೇಟಿ!
ಕೊಪ್ಪಳ: ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನಿನ್ನೆ ಅಷ್ಟು ಭಕ್ತರು ಆಗಮಿಸಿ ದರ್ಷನ ಪಡೆಯಲು ಕಾರಣವೇನು ತಿಳಿಯಿರಿ
14

Image Credit : Asianet News
ಒಂದೇ ದಿನ ಅಂಜನಾದ್ರಿಗೆ 25000 ಭಕ್ತಾಧಿಗಳು ಭೇಟಿ
ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪೌರಾಣಿಕ ಪ್ರಸಿದ್ಧ ಕ್ಷೇತ್ರ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : Asianet News
ಭಯಂಕರ ಬಿಸಿಲಿನಲ್ಲೂ ಮೆಟ್ಟಿಲು ಹತ್ತಿ ಆಂಜನೇಯ ದರ್ಶನ ಪಡೆದ ಭಕ್ತರು
ಬೆಳಗ್ಗೆಯಿಂದಲೇ ಆಗಮಿಸಿದ್ದ ಭಕ್ತರು ಗುಡ್ಡ ಏರಿ ಹನುಮಂತನ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. 11 ಗಂಟೆಯ ಬಳಿಕವೂ ಭಕ್ತರ ಸಂಖ್ಯೆ ಕಡಿಮೆ ಆಗಲಿಲ್ಲ
34
Image Credit : Asianet News
ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಭಕ್ತಸಾಗರ
ವಿಪರೀತ ಬಿಸಿಲು ಇರುವುದರಿಂದ 11ರ ನಂತರ ಬೆಟ್ಟ ಏರುವುದಕ್ಕೆ ಅವಕಾಶ ಇಲ್ಲದ ಕಾರಣ ಮತ್ತೆ ಸಂಜೆ ಬೆಟ್ಟ ಹತ್ತಲು ಭಕ್ತರು ಕೆಳಗಡೆಯೇ ಕಾಯುತ್ತಾ ಕುಳಿತಿದ್ದರು.
44
Image Credit : Asianet News
ಕುಡಿಯುವ ನೀರಿಗಾಗಿ ಅಂಜನಾದ್ರಿ ಬೆಟ್ಟದಲ್ಲಿ ಕಾಯುವ ಸ್ಥಿತಿ
ದೇವಸ್ಥಾನ ಸಮಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೇವಲ 4 ನಲ್ಲಿಗಳು ಮಾತ್ರ ಇದ್ದು, ಹೆಚ್ಚಾಗಿ ಭಕ್ತರು ಆಗಮಿಸಿದ್ದರಿಂದ ಕುಡಿಯುವ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.
Latest Videos

