MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • IPL
  • IPL 2025: ಅಂದು ನಕ್ಕವರು ಈಗ ಕ್ಷಮೆ ಕೇಳಿದ್ರು! ಕೊಟ್ಟ ಮಾತು ಉಳಿಸಿಕೊಂಡ ಜಿತೇಶ್‌ ಶರ್ಮಾ!

IPL 2025: ಅಂದು ನಕ್ಕವರು ಈಗ ಕ್ಷಮೆ ಕೇಳಿದ್ರು! ಕೊಟ್ಟ ಮಾತು ಉಳಿಸಿಕೊಂಡ ಜಿತೇಶ್‌ ಶರ್ಮಾ!

RCB ಆಟಗಾರ ಜಿತೇಶ್‌ ಶರ್ಮಾ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದು ಭಾರೀ ವೈರಲ್‌ ಆಗಿ, ಸಾಕಷ್ಟು ಜನರು ಅವರನ್ನು ನೋಡಿ ನಕ್ಕಿದ್ದರು. ಈಗ ಅವರನ್ನು ನೋಡಿದವರು ಕ್ಷಮೆ ಕೇಳುವ ಸಮಯ ಬಂದಿದೆ. ಹಾಗಾದರೆ ಏನಾಯ್ತು?

2 Min read
Author : Padmashree Bhat
Published : May 29 2025, 11:27 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : ANI

ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಆಟದಲ್ಲಿ ಕೇವಲ 33 ಎಸೆತಗಳಲ್ಲಿ ಜಿತೇಶ್‌ ಶರ್ಮಾ ಅವರು ಅಜೇಯ 85 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ವಿರಾಟ್‌ ಕೊಹ್ಲಿ ಔಟ್‌ ಆದಬಳಿಕ ಮಯಾಂಕ್‌ ಅಗರ್‌ವಾಲ್‌ ಜೊತೆ ಸೇರಿ ಜೊತೆಯಾಟ ಆಡಿದರು. ಇದರಿಂದಲೇ ಆರ್‌ಸಿಬಿ ಗೆಲ್ಲಲು ಸಾಧ್ಯವಾಯ್ತು.

26
Image Credit : X

ಪಂದ್ಯದ ಬಳಿಕ, ಈ ಸೀಸನ್ ಆರಂಭದಲ್ಲಿ ಜಿತೇಶ್ ಶರ್ಮಾ ಅವರು ನೀಡಿದ್ದ ಹಳೆಯ ಸಂದರ್ಶನವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರಿಕ್‌ಎಕ್ಸ್‌ಟಾಸಿಗೆ ನೀಡಿದ ಸಂದರ್ಶನದಲ್ಲಿ, ಜಿತೇಶ್ ಶರ್ಮಾ ಅವರು ಆರ್‌ಸಿಬಿ ಅಭಿಮಾನಿಗಳಿಗೆ ಸಂದೇಶ ಕೊಡಿ ಎಂದು ಹೇಳಲಾಗಿತ್ತು, ಆಗ ಅವರು “ಎಲ್ಲರಿಗೂ ಹಾಯ್. ಚಿಂತೆ ಬೇಡ. ಜಿತೇಶ್ ಶರ್ಮಾ ಇಲ್ಲಿದ್ದಾನೆ. ಅವನು ಎಲ್ಲವನ್ನೂ ನೋಡಿಕೊಳ್ಳುತ್ತಾನೆ” ಎಂದು ಹೇಳಿದ್ದರು. ಈ ಮಾತು ಜಿತೇಶ್‌ ಹೇಳಿದ್ದಾಗ ನಕ್ಕಿದ್ದ ಜನರು ಈಗ ಕ್ಷಮೆ ಕೇಳುತ್ತಿದ್ದಾರೆ, ಅಷ್ಟೇ ಅಲ್ಲದೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Related Articles

Related image1
ಫೈನಲ್‌ಗೆ ಎದುರಾಳಿ ಯಾರೇ ಬರಲಿ RCB ಗೆಲುವು ಖಚಿತ : ಕಾರಣ ಬಿಚ್ಚಿಟ್ಟ ಲೆಜೆಂಡರಿ ಕ್ರಿಕೆಟರ್
Related image2
RCB vs ಪಂಜಾಬ್ ಕ್ವಾಲಿಫೈಯರ್-1 ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹವಾಮಾನ ವರದಿ ಏನು?
36
Image Credit : ANI

ಏಕಾನಾ ಕ್ರೀಡಾಂಗಣದಲ್ಲಿ ಆಡುತ್ತಿದ್ದ ಜಿತೇಶ್ ಅವರು, ಆರ್‌ಸಿಬಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್‌ ಹಿಡಿದು ಬಂದರು. ಅಸಾಧಾರಣ ಸಂಯಮ ಇಟ್ಟುಕೊಂಡ ಅವರು ಒಂದಾದ ಮೇಲೆ ಒಂದರಂತೆ ಫೋರ್‌ ಬಾರಿಸಿದರು. ಆಕರ್ಷಕ ಶಾಟ್‌ಗಳೊಂದಿಗೆ ಸ್ಫೋಟಕ ಇನಿಂಗ್ಸ್ ಆಡಿದರು, ಆರು ಸಿಕ್ಸರ್‌ಗಳು, ಎಂಟು ಬೌಂಡರಿಗಳನ್ನು ಬಾರಿಸಿದರು.

46
Image Credit : Twitter/RCB

ಜಿತೇಶ್‌ ಅವರ ಈ ಆಟದಿಂದ ಆರ್‌ಸಿಬಿ ಕೇವಲ 18.4 ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸಿತು, ಏಕಾನಾ ಕ್ರೀಡಾಂಗಣದಲ್ಲಿ ಇದುವರೆಗಿನ ( 228 ರನ್‌ ) ಅತ್ಯಂತ ಯಶಸ್ವಿ ರನ್ ಚೇಸ್ ಆಗಿದೆ.

56
Image Credit : Twitter/RCB

ಈ ಗೆಲುವಿನೊಂದಿಗೆ, RCB ಕ್ವಾಲಿಫೈಯರ್ 1ಕ್ಕೆ ಅರ್ಹತೆ ಪಡೆಯಿತು, ಅಲ್ಲಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಆಟ ಆಡಿದ್ದಾರೆ. ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಚಂಡೀಗಢದಲ್ಲಿ ಪಂಜಾಬ್‌ನ 15ನೇ ಓವರ್‌ನ ಆರಂಭಿಕ ಹಂತದಲ್ಲಿ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದು ಅವರನ್ನು ಮಕಾಡೆ ಮಲಗಿಸಿದರು.

66
Image Credit : ANI

ಇದು ಜಿತೇಶ್‌ರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್ ಆಗಿದ್ದು, ಇದು ಅವರ ಮೊದಲ ಅರ್ಧಶತಕವಾಗಿತ್ತು 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು ರಿಲೀಸ್‌ ಮಾಡಿದ ಬಳಿಕ, ಆರ್‌ಸಿಬಿ ಅವರನ್ನು 11 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಜಿತೇಶ್ ಈ ಸೀಸನ್‌ನಲ್ಲಿ ಬ್ಯಾಟ್‌ನಿಂದ ಮಾತ್ರವಲ್ಲ, ರಜತ್ ಪಟಿದಾರ್ ಇಲ್ಲದಿದ್ದಾಗಲೂ ಕೂಡ ಹಂಗಾಮಿ ಕ್ಯಾಪ್ಟನ್‌ ಆಗಿ ತಂಡ ಮುನ್ನಡೆಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಆರ್‌ಸಿಬಿ
ಐಪಿಎಲ್
ಕ್ರಿಕೆಟ್
ಕ್ರಿಕೆಟ್ ಕ್ರೀಡಾಂಗಣ

Latest Videos
Recommended Stories
Recommended image1
IPL 2026: ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ
Recommended image2
ಮೈ ಸುಡುವ ಜ್ವರದ ನಡುವೆಯೂ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಸ್ಮೃತಿ ಮಂಧನಾ! ಬ್ರೇಕ್‌ಅಪ್ ನೋವು ಮರೆಸಿದ ಫೈನಲ್ ಗೆಲುವು
Recommended image3
WPL 2026: ಎರಡನೇ ಸಲ ಕಪ್ ಗೆಲ್ಲಿಸಿ ಮತ್ತೆ ಗುಡುಗಿದ ಸ್ಮೃತಿ ಮಂಧನಾ! ಆರ್‌ಸಿಬಿ ಫ್ಯಾನ್ಸ್ ದಿಲ್ ಖುಷ್!
Related Stories
Recommended image1
ಫೈನಲ್‌ಗೆ ಎದುರಾಳಿ ಯಾರೇ ಬರಲಿ RCB ಗೆಲುವು ಖಚಿತ : ಕಾರಣ ಬಿಚ್ಚಿಟ್ಟ ಲೆಜೆಂಡರಿ ಕ್ರಿಕೆಟರ್
Recommended image2
RCB vs ಪಂಜಾಬ್ ಕ್ವಾಲಿಫೈಯರ್-1 ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹವಾಮಾನ ವರದಿ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved