2000ರ ನಂತರ ನಡೆದ ದಾಳಿಗಳು: ಉಗ್ರರ ಅಟ್ಟಹಾಸದ ರಕ್ತಸಿಕ್ತ ಹೆಜ್ಜೆಗಳು
2000 ರಿಂದ 2025 ರವರೆಗೆ, ಕಾಶ್ಮೀರವು ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದೆ, ಇದು ಗಮನಾರ್ಹ ಸಾವುನೋವುಗಳಿಗೆ ಕಾರಣವಾಗಿದೆ. ಈ ಲೇಖನವು ಈ ಅವಧಿಯಲ್ಲಿ ನಡೆದ 10 ಪ್ರಮುಖ ದಾಳಿಗಳನ್ನು ಪಟ್ಟಿ ಮಾಡುತ್ತದೆ, ಇದರಲ್ಲಿ ಚಟ್ಟಿಸಿಂಗ್ಪೋರಾ ಹತ್ಯಾಕಾಂಡ ಮತ್ತು ಅಮರನಾಥ ಯಾತ್ರಾ ದಾಳಿಗಳು ಸೇರಿವೆ.

ಬೇಸಿಗೆ ಪ್ರವಾಸಕ್ಕೆಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಮಂಗಳವಾರ ಭೀಕರ ನರಮೇಧ ನಡೆಸಿದ್ದಾರೆ.2000-2025ರ ತನಕ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ 10 ಪ್ರಮುಖ ಭಯೋತ್ಪಾದಕ ದಾಳಿಗಳು ಇಂತಿವೆ
ಮಾರ್ಚ್ 21, 2000: ಅನಂತ್ನಾಗ್ ಜಿಲ್ಲೆಯ ಚಟ್ಟಿಸಿಂಗ್ಪೋರಾ ಗ್ರಾಮದಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿ ಉಗ್ರರ ದಾಳಿ: 36 ಮಂದಿ ಸಾವು
ಆಗಸ್ಟ್ 2020: ನುನ್ವಾನ್ ಬೇಸ್ ಕ್ಯಾಂಪ್ನಲ್ಲಿ ದಾಳಿ: 24 ಅಮರನಾಥ ಯಾತ್ರಿಕರು ಸೇರಿ 32 ಮಂದಿ ಸಾವು
ಜುಲೈ 2001: ಶೇಷನಾಗ್ ಬೇಸ್ ಕ್ಯಾಂಪ್ನಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ದಾಳಿ: 13 ಮಂದಿ ಬಲಿ
ಅಕ್ಟೋಬರ್ 1, 2001: ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಶಾಸಕಾಂಗ ಸಂಕೀರ್ಣದ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 36 ಮಂದಿ ಸಾವು
2002: ಚಂದನ್ವಾರಿ ಬೇಸ್ ಕ್ಯಾಂಪ್ ಮೇಲೆ ದಾಳಿ: 11 ಅಮರನಾಥ ಯಾತ್ರಿಕರು ಸಾವನ್ನಪ್ಪಿದ್ದರು.
ನವೆಂಬರ್ 23, 2002: ಜಮ್ಮು - ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಇಡಿ ಸ್ಫೋಟ: 9 ಭದ್ರತಾ ಪಡೆ ಸಿಬ್ಬಂದಿ, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿ 19 ಮಂದಿ ಸಾವು
ಮಾರ್ಚ್ 23, 2003: ಪುಲ್ವಾಮ ಜಿಲ್ಲೆಯ ನಂದಿಮಾರ್ಗ್ ಗ್ರಾಮದಲ್ಲಿ ದಾಳಿ: 11 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 24 ಕಾಶ್ಮೀರಿ ಪಂಡಿತರ ಸಾವು
Pahalgam terror attack
ಜೂನ್ 13, 2005: ಪುಲ್ವಾಮಾದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಸ್ಫೋಟಕಗಳು ತುಂಬಿದ್ದ ಕಾರು ಸ್ಫೋಟ: 13 ಮಂದಿ ಸಾವು, 100ಕ್ಕೂ ಹೆಚ್ಚು ನಾಗರಿಕರಿಗೆ ಗಾಯ
ಜೂನ್ 12, 2006: ಕುಲ್ಟಾಮ್ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ: 9 ನೇಪಾಳಿ ಮತ್ತು ಬಿಹಾರಿ ಕಾರ್ಮಿಕರು ಸಾವು
ಜೂನ್ 10, 2017: ಕುಲಾಮ್ನಲ್ಲಿ ಅಮರನಾಥ ಯಾತ್ರೆಯ ಯಾತ್ರಿಕರಿದ್ದ ಬಸ್ ಮೇಲೆ ಅಟ್ಟಹಾಸ: 8 ಮಂದಿ ಬಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ