ವಾರದ ಹಿಂದೆ ಖುಷ್ ಖುಷಿಯಾಗಿ ರೀಲ್ಸ್ ಪೋಸ್ಟ್ ಮಾಡಿದ್ದ ಪ್ರಖ್ಯಾತ ಆರ್ಜೆ ಶವವಾಗಿ ಪತ್ತೆ!
ಗುರುಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಮಾಜಿ ಆರ್ಜೆ ಮತ್ತು ಇನ್ಫ್ಲುಯೆನ್ಸರ್ ಸಿಮ್ರನ್ ಸಿಂಗ್ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ.

ಮಾಜಿ ಆರ್ಜೆ ಹಾಗೂ ಇನ್ಫ್ಲುಯೆನ್ಸರ್ ಸಿಮ್ರನ್ ಸಿಂಗ್ ಗುರುಗ್ರಾಮದ ಸೆಕ್ಟರ್ 47ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕಿ ಧಡ್ಕನ್ ಎಂದೇ ಫೇಮಸ್ ಆಗಿದ್ದ ಆರ್ಜೆ ಸಿಮ್ರನ್ ಸಿಂಗ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 6.82 ಲಕ್ಷ ಫಾಲೋವರ್ಸ್ಗಳಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಶಂಕಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಆಕೆಯ ಜೊತೆ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತೆಯೊಬ್ಬರು ಆತ್ಮಹತ್ಯೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, 25 ವರ್ಷದ ಆರ್ಜೆಯ ಅಕಾಲಿಕ ನಿಧನ ಅಭಿಮಾನಿಗಳು ಹಾಗೂ ಫಾಲೋವರ್ಸ್ಗೆ ಅಚ್ಚರಿ ತಂದಿದೆ.
ಇನ್ಸ್ಟಾಗ್ರಾಮ್ನಲ್ಲೂ ಭಾರೀ ಜನಪ್ರಿಯತೆ ಹೊಂದಿದ್ದ ಮಾಜಿ ರೇಡಿಯೋ ಜಾಕಿ ಸಿಮ್ರನ್ ಸಿಂಗ್ ಸಾವಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ.
ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎಎಸ್ಐ ಪ್ರದೀಪ್ ಕುಮಾರ್ ಹೇಳುವ ಪ್ರಕಾರ, ಸಿಮ್ರನ್ ಸಿಂಗ್ ಅವರ ಕುಟುಂಬ ಈವರೆಗೂ ಯಾರ ಮೇಲೂ ದೂರು ದಾಖಲು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸಿಮ್ರನ್ ಕೆಲವು ಸಮಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಅದರಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತು ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಿಲ್ಲ ಎಂದು ಕುಟುಂಬ ಹೇಳಿದೆ.
ಕುಟುಂಬಸ್ಥರು ನೀಡಿದ ಲಿಖಿತ ದೂರಿನ ಮೇರೆಗೆ ಕ್ರಮ ಕೈಗೊಂಡು ಗುರುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಮ್ರಾನ್ ಅವರ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಆಕೆಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಜಮ್ಮು ಪ್ರದೇಶದ ಮೂಲದವರಾದ ಸಿಮ್ರನ್ ಸಿಂಗ್ ಅವರು ತಮ್ಮ ಅಭಿಮಾನಿಗಳಿಗೆ 'ಜಮ್ಮು ಕಿ ಧಡ್ಕನ್' (ಜಮ್ಮುವಿನ ಹೃದಯ ಬಡಿತ) ಎಂದು ಪ್ರೀತಿಯಿಂದ ಹೇಳುತ್ತಿದ್ದರು.
Instagram ನಲ್ಲಿ ಸಿಮ್ರನ್ ಸಾಕಷ್ಟು ಸಕ್ರಿಯರಾಗಿದ್ದರು, ಅವರ ಕೊನೆಯ ಪೋಸ್ಟ್ ಡಿಸೆಂಬರ್ 13ರಂದು ಬಂದಿತ್ತು. ಇದರಲ್ಲಿ ಖುಷಿ ಖಷಿಯಾಗಿಯೇ ಅವರು ಡಾನ್ಸ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಪೀಚ್ ಇಂಡೋ-ವೆಸ್ಟರ್ನ್ ಡ್ರೆಸ್ ಅನ್ನು ಧರಿಸಿದ್ದ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. "ಅಂತ್ಯವಿಲ್ಲದ ನಗು ಮತ್ತು ಗೌನ್ ಹಾಕಿರುವ ಹುಡುಗಿ, ಬೀಚ್ ಎದುರಾಗಿದ್ದಾರೆ" ಎಂದು ಅವರು ತಮ್ಮ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಸಿಮ್ರಾನ್ ಅವರ ಅಕಾಲಿಕ ನಿಧನವು ಅಭಿಮಾನಿಗಳು ಮತ್ತು ಫಾಲೋವರ್ಗಳಿಗೆ ಆಘಾತವನ್ನುಂಟು ಮಾಡಿದೆ. ಅವರ ಸಾವಿಗೆ ಸಂತಾಪ ಸೂಚಿಸಲು ಅವರಲ್ಲಿ ಬಹಳಷ್ಟು ಮಂದಿ ಆಕೆಯ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ಗಳ ಕಾಮೆಂಟ್ ಸೆಕ್ಷನ್ನಲ್ಲಿ ಬರೆದಿದ್ದಾರೆ.
ಬಿಜೆಪಿಗೆ ಒಂದೇ ವರ್ಷದಲ್ಲಿ 2444 ಕೋಟಿ ರೂಪಾಯಿ ದೇಣಿಗೆ, ಕಳೆದ ವರ್ಷಕ್ಕಿಂತ 700 ಕೋಟಿ ಹೆಚ್ಚು!
ಆಗಸ್ಟ್ 2023 ರಲ್ಲಿ, ಸಿಮ್ರಾನ್ ಅವರು ನಟರಾದ ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಅನ್ನು ಒಳಗೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಅದು ಅವರ ಘೂಮರ್ ಚಿತ್ರದ ಪ್ರಚಾರದ ಸಮಯದಲ್ಲಿ ತೆಗೆದ ಚಿತ್ರವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ