ಗೋಧಿ ಬೆಳೆಯುವ ನಮಗೆ ಫಿಜ್ಜಾ ಬೇಡವೇ? ತಯಾರಿಸಿಕೊಂಡು ತಿಂದ ರೈತರು!
ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಐಷಾರಾಮಿ ವಾಹನದಲ್ಲಿ ಬಂದು ಇಳಿದಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈಗ ರೈತರು ಫಿಜ್ಜಾ ತಯಾರಿಸಿಕೊಂಡು ತಿಂದಿದ್ದಾರೆ.
#GroundReport | Protesting farmers at #SinghuBorder are running their own pizza langar. When BOOM asked them, "Why pizza?" they told us, "Why not pizza? Farmers grow this wheat, bajra, corn, rice. Why will we sleep hungry?"@BoomFactsHindi #FarmersProtest #KisanAndolan pic.twitter.com/TqUZLDytRp
— BOOM Live (@boomlive_in) January 8, 2021
ಜೋಳ, ಮೆಕ್ಕೆಜೋಳ, ಗೋಧಿ, ಅಕ್ಕಿ ಬೆಳೆಯುವ ನಾವು ಯಾವ ಕಾರಣಕ್ಕೆ ಫಿಜ್ಜಾ ತಿನ್ನಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
ನಾವೇಕೆ ಉಪವಾಸ ಮಲುಗಬೇಕು ಎನ್ನುವುದು ಅವರ ಇನ್ನೊಂದು ಪ್ರಶ್ನೆ.
ರೈತರು ಪ್ರತಿಭಟನೆ ನಡೆಸಲು ಹಿಡಿದು ತಿಂಗಳುಗಳೆ ಕಳೆದಿವೆ. ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಒಮ್ಮತಕ್ಕೆ ಬಂದಿಲ್ಲ.
ನಾವೇವೆ ಉಪವಾಸ ಇರಬೇಕು.. ರುಚಿಯಾದ ಫಿಜ್ಜಾ ತಯಾರಿಸಿಕೊಂಡು ತಿಂದರೆ ತಪ್ಪೇನು? ಎಂದು ಕೇಳಿದ್ದಾರೆ.
ಪ್ರತಿಭಟನಾ ನಿರತ ರೈತರು ಮಸಾಜ್ ಯಂತ್ರವನ್ನು ಅಳವಡಿಸಿಕೊಂಡು ಪ್ರಯೋಜನ ಪಡೆದುಕೊಂಡಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.