MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, ಮಂದಿರದ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಉರುಳಿದೆ. ಸತತ ದಾಳಿಗೆ ಎದೆಯೊಡ್ಡಿ ನಿಂತ ಸೋಮನಾಥ ಮಂದಿರ ಭಾರತದ ಇತಿಹಾಸ ಹೇಳುತ್ತಿದೆ. ಈ ಸ್ವಾಭಿಮಾನ ಪರ್ವದಲ್ಲಿ ಮೋದಿ ಪಾಲ್ಗೊಂಡಿದ್ದಾರೆ. 

2 Min read
Author : Chethan Kumar
Published : Jan 11 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
18
ಮೊದಲ ದಾಳಿಯಾಗಿ 1000 ವರ್ಷ
Image Credit : Asianet News

ಮೊದಲ ದಾಳಿಯಾಗಿ 1000 ವರ್ಷ

ಗುಜರಾತ್‌ನಲ್ಲಿರುವ ಸೋಮನಾಥ ಮಂದಿರದ ಮೇಲಿನ ದಾಳಿ ಬಗ್ಗೆ ಹಲವರಿಗೆ ತಿಳಿದಿದೆ. ಆದರೆ ಕ್ರೂರತೆ ಬಗ್ಗೆ ಸ್ಪಷ್ಟ ಅರಿವಿಲ್ಲ. ಸೋಮನಾಥ ಮಂದಿರದ ಮೇಲೆ ಮೊದಲ ದಾಳಿಯಾಗಿ 2026ನೇ ಇಸವಿಗೆ ಬರೋಬ್ಬರಿ 1000 ವರ್ಷಗಳು ಸಂದಿದೆ. ಮೊಹಮ್ಮದ್ ಘಜ್ನಿ, ಘೋರಿ ಸತತ ದಾಳಿಯಲ್ಲಿ ಸೋಮನಾಥ ಮಂದಿರ ಧ್ವಂಸಗೊಂಡಿದೆ. ಆದರೆ ಪ್ರತಿ ಬಾರಿ ಹಿಂದೂ ರಾಜ ಮಹಾರಾಜರು, ಜನಸಾಮಾನ್ಯರು ಹೋರಾಟ ಮಾಡಿ ಮತ್ತೆ ಮಂದಿ ಕಟ್ಟಿದ್ದಾರೆ. ಇದೀಗ ಸೋಮನಾಥ ಮಂದಿರ ಸ್ವಾಭಿಮಾನ ಪರ್ವ ಆಚರಿಸುತ್ತಿದೆ. ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ.

28
ಶೌರ್ಯ ಯಾತ್ರೆ ನಡೆಸಿದ ಮೋದಿ
Image Credit : Asianet News

ಶೌರ್ಯ ಯಾತ್ರೆ ನಡೆಸಿದ ಮೋದಿ

ಸೋಮನಾಥ ಮಂದಿರದ ಮೇಲೆ ಆಕ್ರಮಣಕಾರರು ದಾಳಿ ನಡೆಸಿದಾಗ, ದೇವಸ್ಥಾನ ಉಳಿಸಲು ಹಲವರು ಹೋರಾಡಿ ವೀರ ಮರಣ ಅಪ್ಪಿದ್ದಾರೆ. ಹೀಗೆ ತ್ಯಾಗ ಬಲಿದಾನ ಮಾಡಿದ ವೀರರ ಪುತ್ಥಳಿಗೆ ಪ್ರಧಾನಿ ಮೋದಿಹೂವು ಅರ್ಪಿಸಿ ಶೌರ್ಯ ನೆನೆದಿದ್ದಾರೆ. ಈ ಶೌರ್ಯ ಯಾತ್ರೆಯಲ್ಲಿ ಸೋಮನಾಥ ಮಂದಿರಕ್ಕೆ ಹೋರಾಡಿದ ಪ್ರತಿಯೊಬ್ಬರ ನೆನೆದಿದ್ದಾರೆ.

Related Articles

Related image1
ವಿಕಸಿತ ಭಾರತ ಕಟ್ಟಲು ಸೋಮನಾಥ ಮಾದರಿ- ಮೊದಲ ದಾಳಿಗೆ 1000 ವರ್ಷ
Related image2
ಮೈಸೂರಿಗರಿಗೆ 1000 ವರ್ಷಗಳ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗ ಕಣ್ತುಂಬಿಕೊಳ್ಳಲು ಸುವರ್ಣಾವಕಾಶ
38
108 ಕುದುರೆಗಳ ಶೌರ್ಯ ಯಾತ್ರೆ
Image Credit : Asianet News

108 ಕುದುರೆಗಳ ಶೌರ್ಯ ಯಾತ್ರೆ

ಸೋಮನಾಥ ಮಂದಿರದ ಮೇಲೆ ಮೊಹಮ್ಮದ್ ಘಜ್ನಿ 1026 AD ಮೊದಲು ದಾಳಿ ಮಾಡಿದ್ದ. ಈ ವೇಳೆ ವೀರ್ ಹಮೀರ್ಜಿ ಗೋಹಿಲ್ ಹಾಗೂ ವೇಗದಾಜಿ ಬಿಲ್ ಕುದರೆ ಮೇಲೆ ಭಾರಿ ಹೋರಾಟ ನಡೆಸಿದ್ದರು. ದೇವಸ್ಥಾನ ಉಳಿಸಲು ಉಗ್ರ ಯುದ್ಧವೇ ನಡೆದಿತ್ತು. ಇದರ ನೆನಪಿಗಾಗಿ ಪ್ರಧಾನಿ ಮೋದಿ ಶೌರ್ಯ ಯಾತ್ರೆಯಲ್ಲಿ 108 ಕುದುರೆಯ ಯಾತ್ರೆ ನಡೆಸಲಾಗಿದೆ.

48
ಸೋಮನಾಥನಿಗೆ ವಿಶೇಷ ಪೂಜೆ
Image Credit : Asianet News

ಸೋಮನಾಥನಿಗೆ ವಿಶೇಷ ಪೂಜೆ

ಸೋಮನಾಥ ಮಂದಿರದಲ್ಲಿ ಪ್ರಧಾನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಿ ಮೋದಿ ಮಹತ್ವದ ಸಂದೇಶ ಸಾರಿದ್ದಾರೆ.ಭಾರತದ ಬಹುತೇಕ ಮಂದಿರಗಳ ಮೇಲೆ ಸತತ ದಾಳಿಯಾಗಿದೆ. ಹಲವು ಮಸೀದಿಗಳಾಗಿ ಪರಿವರ್ತನೆಯಾಗಿದೆ. ಆದರೆ ಕೆಲ ಮಂದಿಗಳು ಎದೆಯೊಡ್ಡಿ ನಿಂತು ಹೋರಾಟ ಎದುರಿಸಿದೆ. ಈ ಪೈಕಿ ಸೋಮನಾಥ ಮಂದಿರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

58
ಕಿಕ್ಕಿರಿದು ಸೇರಿದ ಭಕ್ತರು
Image Credit : Asianet News

ಕಿಕ್ಕಿರಿದು ಸೇರಿದ ಭಕ್ತರು

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೋಮನಾಥ ಮಂದಿರಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ನಾಯಕರು ಭಕ್ತರತ್ತ ಕೈಬೀಸಿ ಶುಭಕೋರಿದ್ದಾರೆ.

68
ಓಂಕಾರ ಮಂತ್ರ ಪಠಿಸಿದ ಮೋದಿ
Image Credit : Asianet News

ಓಂಕಾರ ಮಂತ್ರ ಪಠಿಸಿದ ಮೋದಿ

ಜನವರಿ 10 ರಂದು ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಓಂಕಾರ ಮಂತ್ರ ಫಟಿಸಿದ್ದಾರೆ. ಸೋಮನಾಥನ ದರ್ಶನ ಪಡೆದ ಮೋದಿ, ರಾತ್ರಿ ವೇಳೆ ಡ್ರೋನ್ ಶೋ ಕಾರ್ಯಕ್ರಮ ವೀಕ್ಷಿಸಿದರು.

78
ದೇಶದ ಮೂಲೆ ಮೂಲೆಗಳಿಂದ ಭಕ್ತರ ಆಗಮನ
Image Credit : Asianet News

ದೇಶದ ಮೂಲೆ ಮೂಲೆಗಳಿಂದ ಭಕ್ತರ ಆಗಮನ

ಸೋಮನಾಥ ಮಂದಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಸೋಮನಾಥನ ದರ್ಶನ ಪಡೆದಿದ್ದರೆ. ಇದೇ ವೇಳೆ ಪ್ರಧಾನಿ ಮೋದಿ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ದೇಶದ ಮೂಲೆ ಮೂಲೆಗಳಿಂದ ಭಕ್ತರ ಆಗಮನ

88
ಡಮರುಗ ಹಿಡಿದ ಮೋದಿ
Image Credit : Asianet News

ಡಮರುಗ ಹಿಡಿದ ಮೋದಿ

ಶೌರ್ಯ ಯಾತ್ರೆಯಲ್ಲಿ ಮೋದಿ ಡಮರುಗ, ತ್ರಿಶೂಲ ಹಿಡಿದು ಗಮನಸೆಳೆದಿದ್ದರು. ಭಕ್ತರು ಸೋಮನಾಥನಿಗೆ ಜೈಕಾರ ಹಾಕುವ ಜೊತೆಗೆ ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದ್ದಾರೆ.

ಡಮರುಗ ಹಿಡಿದ ಮೋದಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನರೇಂದ್ರ ಮೋದಿ
ದೇವಸ್ಥಾನ
ಭಾರತ ಸುದ್ದಿ

Latest Videos
Recommended Stories
Recommended image1
ರಿಷಬ್ ಶೆಟ್ಟಿ 'ಕಾಂತಾರ-1' ಆ ಕಪ್ಪು ಸುಂದರಿಯನ್ನು ಕನ್ನಡ ಮಣ್ಣಿಗೆ ತರುತ್ತಾ? ನನಸಾಗುತ್ತಾ ಹೊಂಬಾಳೆ ಕಸನು..?
Recommended image2
ವರ್ಷದ ಆರಂಭದಲ್ಲೇ ಜಿಯೋ ಗ್ರಾಹಕರಿಗೆ ಲಾಟರಿ! 450 ರೂ.ಗೆ ಹಬ್ಬದ ಭರ್ಜರಿ ಆಫರ್​ ಕೊಟ್ಟ ಕಂಪೆನಿ
Recommended image3
ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ
Related Stories
Recommended image1
ವಿಕಸಿತ ಭಾರತ ಕಟ್ಟಲು ಸೋಮನಾಥ ಮಾದರಿ- ಮೊದಲ ದಾಳಿಗೆ 1000 ವರ್ಷ
Recommended image2
ಮೈಸೂರಿಗರಿಗೆ 1000 ವರ್ಷಗಳ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗ ಕಣ್ತುಂಬಿಕೊಳ್ಳಲು ಸುವರ್ಣಾವಕಾಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved