MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಶೋಕಸಾಗರದಲ್ಲಿ ಮುಳುಗಿದ ಅಂಬಾನಿ ಕುಟುಂಬ, ಮುದ್ದಿನ ಸಾಕು ನಾಯಿ ಹ್ಯಾಪಿ ಇನ್ನಿಲ್ಲ

ಶೋಕಸಾಗರದಲ್ಲಿ ಮುಳುಗಿದ ಅಂಬಾನಿ ಕುಟುಂಬ, ಮುದ್ದಿನ ಸಾಕು ನಾಯಿ ಹ್ಯಾಪಿ ಇನ್ನಿಲ್ಲ

ಮುಕೇಶ್ ಅಂಬಾನಿ ಕುಟುಂಬದ ಮುದ್ದಿನ ನಾಯಿ ಹ್ಯಾಪಿ ಮೃತಪಟ್ಟಿದೆ. ಪ್ರಾಣಿಗಳನ್ನು ಅತೀಯಾಗಿ ಪ್ರೀತಿಸುವ ಅನಂತ್ ಅಂಬಾನಿ ಈ ಮುದ್ದಿನ ನಾಯಿ ಸಾಕಿದ್ದರು. ಇದೀಗ ಹ್ಯಾಪಿ ಅಗಲಿಕೆಯಿಂದ ಅಂಬಾನಿ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

2 Min read
Chethan Kumar
Published : May 01 2025, 11:38 AM IST| Updated : May 01 2025, 11:41 AM IST
Share this Photo Gallery
  • FB
  • TW
  • Linkdin
  • Whatsapp
14

ಅಂಬಾನಿ ಕುಟುಂಬದಲ್ಲಿ ದುಃಖ

ಅಂಬಾನಿ ಕುಟುಂಬದ ಮುದ್ದಿನ ನಾಯಿ ಹ್ಯಾಪಿ ಮಮೃತಪಟ್ಟಿದೆ. ಗೋಲ್ಡನ್ ರಿಟ್ರೈವರ್ ಜಾತಿಯ ಈ ನಾಯಿ ಅಂಬಾನಿ ಕುಟುಂಬದಲ್ಲಿ ಮುದ್ದಿನ ಮಗುವಿನಂತೆ ಬೆಳೆದಿತ್ತು. ಕಳೆದ ವರ್ಷ ನಡೆದ ಆನಂದ್ ಅಂಬಾನಿಯವರ ವಿವಾಹದಲ್ಲಿಯೂ ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪನ್ನು ಧರಿಸಿ ಓಡಾಡುತ್ತಿತ್ತು  ಅನಾರೋಗ್ಯದಿಂದ ಏಪ್ರಿಲ್ 30 ರಂದು ಹ್ಯಾಪಿ  ಮೃತಪಟ್ಟಿದೆ.. ಹ್ಯಾಪಿಯ ಸಾವಿನಿಂದ ಅಂಬಾನಿ ಕುಟುಂಬವೇ ದುಃಖದಲ್ಲಿದೆ. ನೀನು ಯಾವಾಗಲೂ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತೀಯ ಎಂದು ಅಂಬಾನಿ ಕುಟುಂಬ ಶ್ರದ್ಧಾಂಜಲಿ ಸಂದೇಶದಲ್ಲಿ ತಿಳಿಸಿದೆ. ಅಂಬಾನಿ ಕುಟುಂಬ ಎಲ್ಲ ಪ್ರೀತಿಗೆ ಪಾತ್ರವಾಗಿದ್ದ ಹ್ಯಾಪಿ ಅಗಲಿಕೆ ಕುಟುಂಬಕ್ಕೆ ತೀವ್ರ ನೋವು ತರಿಸಿದೆ. ಅದರಲ್ಲೂ ಪ್ರೀತಿಯಿಂದ ಸಾಕಿ, ಆರೈಕೆ ಮಾಡಿದ್ದ ಅನಂತ್ ಅಂಬಾನಿ ತೀವ್ರ ದಃಖತಪ್ತರಾಗಿದ್ದಾರೆ. 

24

ಮುಖೇಶ್-ನೀತಾ ಅಂಬಾನಿ ಅವರ ಕಿರಿಯ ಮಗ ಆನಂತ್ ಅಂಬಾನಿ,  ಕಳೆದ ವರ್ಷ  ರಾಧಿಕಾ ಮರ್ಚೆಂಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಆನಂತ್ ಅಂಬಾನಿ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಗುಜರಾತಿನ ಜಾಮ್‌ನಗರದಲ್ಲಿ 'ವನತಾರ' ಎಂಬ ಪ್ರಾಣಿಧಾಮವನ್ನು ಸ್ಥಾಪಿಸಿದ್ದಾರೆ. ಆನಂದ್ ಅಂಬಾನಿ 'ವನತಾರ'ಕ್ಕಾಗಿ ತಿಂಗಳಿಗೆ 5 ರಿಂದ 7 ಕೋಟಿ ರೂ. ಖರ್ಚು ಮಾಡುತ್ತಾರೆ. ಇದರ ವಾರ್ಷಿಕ ವೆಚ್ಚ 150 ರಿಂದ 200 ಕೋಟಿ ರೂ. ಈ ವಂತಾರದಲ್ಲಿ ಗಾಯಗೊಂಡ ಪ್ರಾಣಿಗಳ ಆರೈಕೆ, ಚಿಕಿತ್ಸೆ ನಡೆಯುತ್ತದೆ. 

ಆನಂತ್ ಅಂಬಾನಿಯವರ ವನತಾರ

ಇದರಲ್ಲಿ ಪ್ರಾಣಿಗಳಿಗೆ ವಿಶೇಷ ಆಹಾರ, ಅಂತರರಾಷ್ಟ್ರೀಯ ಪಶುವೈದ್ಯರ ತಂಡದ ವೆಚ್ಚ, ಹವಾನಿಯಂತ್ರಿತ ವೈದ್ಯಕೀಯ ವಿಭಾಗಗಳು ಮತ್ತು ಆಧುನಿಕ ಪುನರ್ವಸತಿ ಕೇಂದ್ರದ ವೆಚ್ಚವೂ ಸೇರಿದೆ. ಈ ಧಾಮವನ್ನು ಆನಂದ್ ಅಂಬಾನಿ ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಇದು ಅವರ ಕನಸಿನ ಯೋಜನೆ. ಜಾಮ್‌ನಗರದಲ್ಲಿ ರಿಲಯನ್ಸ್ ಗ್ರೀನ್ಸ್ ಪಕ್ಕದಲ್ಲಿ 3000 ಎಕರೆ ವಿಸ್ತಾರದಲ್ಲಿರುವ ವನತಾರ ಒಂದು ಐಷಾರಾಮಿ ರೆಸಾರ್ಟ್‌ನಂತಿದೆ.

Related Articles

Related image1
ಪಾದಯಾತ್ರೆ ನಡುವೆ ಮಹಿಳೆ ಕೊಟ್ಟ 101 ರೂ ಕಾಣಿಕೆ ಸ್ವೀಕರಿಸಿದ ಅನಂತ್ ಅಂಬಾನಿ
Related image2
ಕೇವಲ 82 ರೂ ಪ್ಲಾನ್, 11 ತಿಂಗಳ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಘೋಷಿಸಿದ ಜಿಯೋ
34
ವನತಾರ

ವನತಾರ

ಕಾಡನ್ನೇ ಸೃಷ್ಟಿಸಿದ ಆನಂದ್ ಅಂಬಾನಿ

ಆನೆ, ಸಿಂಹ, ಚಿರತೆ, ಜಿಂಕೆ, ಆಮೆ, ಕುದುರೆ ಮತ್ತು 100ಕ್ಕೂ ಹೆಚ್ಚು ಅಪರೂಪದ ಪ್ರಾಣಿಗಳಿಗೆ ಇಲ್ಲಿ ನೈಸರ್ಗಿಕ ವಾತಾವರಣ ಕಲ್ಪಿಸಲಾಗಿದೆ. ಈ ಪ್ರಾಣಿಗಳೆಲ್ಲವೂ ಆಫ್ರಿಕಾ, ಥೈಲ್ಯಾಂಡ್, ಅಮೆರಿಕ ಮತ್ತು ಭಾರತದಿಂದ ರಕ್ಷಿಸಲ್ಪಟ್ಟಿವೆ. ಆನಂದ್ ಅಂಬಾನಿಯವರ ವನತಾರ ಯೋಜನೆಯಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವು ಕಾಡಿನಲ್ಲಿರುವಂತೆ ಸ್ವಾತಂತ್ರ್ಯ ಅನುಭವಿಸುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

44
ನಾಯಿ ಸಾವು

ನಾಯಿ ಸಾವು

ಅದಕ್ಕಾಗಿಯೇ ವನತಾರವನ್ನು 'ಪ್ರಾಣಿಗಳ ತಾಜ್‌ಮಹಲ್' ಎಂದು ಕರೆಯಲಾಗುತ್ತದೆ. ಪ್ರಸ್ತುತ ವನತಾರದಲ್ಲಿ 200 ಆನೆಗಳು, 300 ಚಿರತೆಗಳು, 300 ಜಿಂಕೆಗಳು ಮತ್ತು 1200ಕ್ಕೂ ಹೆಚ್ಚು ಮೊಸಳೆಗಳು, ಹಾವುಗಳು ಮತ್ತು ಆಮೆಗಳನ್ನು ಪಾಲನೆ ಮಾಡಲಾಗುತ್ತಿದೆ. ಹೀಗೆ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಆನಂದ್ ಅಂಬಾನಿ, ತಮ್ಮ ಮನೆಯಲ್ಲೂ ಸಾಕುಪ್ರಾಣಿಗಳನ್ನು ಸಾಕಿದ್ದಾರೆ. ಅದರಲ್ಲಿ ಅವರ ಮುದ್ದಿನ ನಾಯಿಮರಿ ಹ್ಯಾಪಿಯೂ ಒಂದು.

 

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಮುಕೇಶ್ ಅಂಬಾನಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved