MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಮುಕ್ಕೋಟಿ ದೇವರು ಸಾಲದು ಅಂತಾ ಏಲಿಯನ್ ದೇವರು ಹೆಸರಲ್ಲಿ ದೇವಸ್ಥಾನ ಕಟ್ಟಿದ ಭೂಪ!

ಮುಕ್ಕೋಟಿ ದೇವರು ಸಾಲದು ಅಂತಾ ಏಲಿಯನ್ ದೇವರು ಹೆಸರಲ್ಲಿ ದೇವಸ್ಥಾನ ಕಟ್ಟಿದ ಭೂಪ!

ನಿಮಗಿದು ಅಚ್ಚರಿ ಅನಿಸಬಹುದು ಆದರೆ ನಿಜ ತಮಿಳನಾಡಿನಲ್ಲಿ ಏಲಿಯನ್‌ಗೆ ದೇವಾಲಯವಿದೆ.  ದಿನನಿತ್ಯ ನಿತ್ಯ ಇಲ್ಲಿ ಏಲಿಯನ್‌ ಪೂಜೆ ನಡೆಯುತ್ತದೆ. ಹಾಗಾದರೆ ಈ ಈ ದೇವಾಲಯ ಎಲ್ಲಿದೆ? ಯಾರು ಕಟ್ಟಿಸಿದ್ದು, ಯಾಕಾಗಿ ಕಟ್ಟಿಸಿದ್ದು ತಿಳಿಯೋಣ

1 Min read
Suvarna News
Published : Sep 10 2024, 06:48 PM IST
Share this Photo Gallery
  • FB
  • TW
  • Linkdin
  • Whatsapp
15

ತಮಿಳನಾಡಿನ ಸೇಲಂನ ಮಲ್ಲಮೂಪಂಬಟ್ಟಿಯ ರಾಮಗೌಂಡನೂರಿನ ನಿವಾಸಿ ಲೋಕನಾಥನ್  ಲೋಗನಾಥನ್  ಎಂಬುವವರು ಸುಮಾರು ಮುಕ್ಕಾಲು ಎಕರೆ ಭೂಮಿಯಲ್ಲಿ ಏಲಿಯನ್ ದೇವರ ಹೆಸರಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಏಲಿಯನ್ ದೇವಸ್ಥಾನ ನಿರ್ಮಾಣ ಮಾಡುವ ಮುನ್ನ ಅನ್ಯಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅನುಮತಿ ಪಡೆದಿದ್ದೇನೆ ಎಂದು ಹೇಳುತ್ತಾನೆ ಲೋಗನಾಥನ್

25

"ವಿಶ್ವದಲ್ಲಿ ಶಿವನು ಸೃಷ್ಟಿಸಿದ ಮೊದಲ ಕಾಸ್ಮಿಕ್ ದೇವತೆಗಳು ಏಲಿಯನ್ಸ್. ಅವರನ್ನು ಆರಾಧಿಸುವುದರಿಂದ ಒಬ್ಬರ ಜೀವನ, ರೂಪ ಮತ್ತು ವೃತ್ತಿಜೀವನವನ್ನು ಉನ್ನತೀಕರಿಸಬಹುದು. ನಾನು ವೈಯಕ್ತಿಕವಾಗಿ ಅತೀಂದ್ರಿಯ ರೂಪದಲ್ಲಿ ಏಲಿಯನ್ ಜೊತೆಗೆ ಮಾತನಾಡಿದ್ದೇನೆ. ಅವರು ನನ್ನೊಂದಿಗೆ ಎರಡು ಬಾರಿ ಬಂದು ಮಾತನಾಡಿದ್ದಾರೆ. ಇದು ನಿಜ, ಮತ್ತು ಜಗತ್ತು ಅದನ್ನು ನಂಬುವ ಅಗತ್ಯವಿದೆ," ಎಂದು ಹೇಳ್ತಾನೆ ಆಸಾಮಿ. ಜೊತೆಗೆ ನನ್ನ ಅನುಭವಗಳನ್ನು ಕೇವಲ ಫ್ಯಾಂಟಸಿ ಎಂದು ತಳ್ಳಿಹಾಕದಂತೆ ಜನರನ್ನು ಒತ್ತಾಯಿಸಿದ್ದಾನೆ.

ಏಲಿಯನ್ ದೇವರು ಜೊತೆಗೆ ನೆಲಮಾಳಿಗೆಯಲ್ಲಿ ಶಿವ, ಪಾರ್ವತಿ, ಮುರುಗನ್, ಕಾಳಿ ಮುಂತಾದ ದೇವ-ದೇವತೆಗಳ ವಿಗ್ರಹಗಳನ್ನು ಸಹ ಸ್ಥಾಪಿಸಲಾಗಿದೆ. ದಿನನಿತ್ಯ ಏಲಿಯನ್ ದೇವರಿಗೆ ಆರತಿ ಬೆಳಗಿ ಪೂಜೆ ಮಾಡುವ ಲೋಗನಾಥನ್, ಪ್ರಕೃತಿ ವಿಕೋಪಗಳಿಂದ ಭಕ್ತರನ್ನು ರಕ್ಷಿಸುವ ಶಕ್ತಿ ಅನ್ಯದೇವತೆಗಳಿಗೆ ಇದೆ ಎಂದು ಪ್ರತಿಪಾದಿಸುತ್ತಾನೆ.

35

ತಮಿಳನಾಡಿನಲ್ಲಿ ದೇವಸ್ಥಾನ, ದೇವರುಗಳಿಗೆ ಕೊರತೆಯಿಲ್ಲ.  ಇಲ್ಲಿ ಪ್ರತಿ ಊರಿನಲ್ಲೂ ಹಲವಾರು ದೇವಸ್ಥಾನಗಳು ಸಿಗುತ್ತವೆ. ಆದರೆ ಅವೆಲ್ಲವುಗಳಿಗಿಂತ ಏಲಿಯನ್ ದೇವಾಲಯ ಸಾಕಷ್ಟು ವೈರಲ್ ಆಗುತ್ತಿದೆ. ವಿಚಿತ್ರ ದೇವಾಲಯ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ.. 

45

ಏಲಿಯನ್ ಸಿನಿಮಾಗಳಲ್ಲಿ ತೋರಿಸಿದ್ದಂತೆ ಇಲ್ಲ. ಬೇರೆಯದೇ ರೀತಿಯಲ್ಲಿದ್ದಾರೆ. ನಾನು ಅನ್ಯಗ್ರಹದ ಜೀವಿಗಳೊಂದಿಗೆ ಮಾತಾನಾಡಿದ್ದೇನೆ ಎನ್ನುತ್ತಿರುವ ಆಸಾಮಿ. ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು ಎಂಬ ಅವೈಜ್ಞಾನಿಕ ಹೇಳಿಕೆಯನ್ನೂ ನೀಡಿರುವ ಏಲಿಯನ್ ಪೂಜಾರಿ!

55

ಕೆಲವರು ಮೆಮೆ ಮಾಡಿದ್ರೆ ಕೆಲವರು ಏಲಿಯನ್ ದೇವರು ಇದ್ದರೂ ಇರಬಹುದು ಎಂದು ನಂಬುವವರಿದ್ದಾರೆ. ತಮಿಳನಾಡು ಹೇಳಿ ಕೇಳಿ ಸಿನಿಮಾ ನಟ-ನಟಿಯರ ಹೆಸರಲ್ಲಿ ದೇವಸ್ಥಾನ ಕಟ್ಟಿದವರು. ಇನ್ನು ಅನ್ಯಗ್ರಹದ ದೇವರು ಬಿಟ್ಟಾರೆಯೇ 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved