MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪತನದ ಬಳಿಕ ವಿಮಾನಯಾನ ಕಂಪನಿಗೆ ಸಿಗುವ ವಿಮೆ ಹಣ ಎಷ್ಟು?

ಪತನದ ಬಳಿಕ ವಿಮಾನಯಾನ ಕಂಪನಿಗೆ ಸಿಗುವ ವಿಮೆ ಹಣ ಎಷ್ಟು?

ಜೂನ್ 12ರ ಅಹಮದಾಬಾದ್ ವಿಮಾನ ದುರಂತದಲ್ಲಿ 270 ಜನರು ಸಾವನ್ನಪ್ಪಿದ್ದರು. ಟಾಟಾ ಗ್ರೂಪ್ ಮೃತರಿಗೆ ಪರಿಹಾರ ಘೋಷಿಸಿತ್ತು. ವಿಮಾನಯಾನ ಕಂಪನಿಗಳು ವಿಮಾ ಕ್ಲೈಮ್‌ಗಳನ್ನು ಹೇಗೆ ಮಾಡಿಕೊಳ್ಳುತ್ತವೆ ಮತ್ತು ಅಹಮದಾಬಾದ್ ದುರಂತದಲ್ಲಿ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

2 Min read
Author : Mahmad Rafik
Published : Jul 04 2025, 09:16 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : x

ಜೂನ್ 12ರಂದು ಗುಜರಾತಿನ ಅಹಮಾದಾಬಾದ್ ಏರ್‌ಪೋರ್ಟ್‌ನಲ್ಲಿ ನಡೆದ ದುರಂತಕ್ಕೆ ಇಡೀ ಜಗತ್ತು ಕಣ್ಣೀರು ಹಾಕಿತ್ತು. ಟೇಕಾಫ್ ಆಗುತ್ತಿದ್ದಂತೆ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಪತನವಾಗಿತ್ತು. ಓರ್ವ ಪ್ರಯಾಣಿಕನನ್ನು ಹೊರತಪಡಿಸಿ ಇನ್ನುಳಿದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದರು.

27
Image Credit : Getty

ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 270 ಜನರು ಈ ದುರಂತದಲ್ಲಿ ಮೃತರಾಗಿದ್ದರು. ಪತನದ ಬಳಿಕ ವಿಮಾನಯಾನ ಕಂಪನಿ ಮೃತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದೆ. ಟಾಟಾ ಗ್ರೂಪ್ ಕುಟುಂಬ ಮೃತ ಪ್ರಯಾಣಿಕರಿಗೆ ತಲಾ 1 ಕೋಟಿ ರೂ. ಪರಿಹಾರವನ್ನು ಘೋಷಿಸಿತ್ತು. ಇಂತಹ ದುರಂತದ ಬಳಿಕ ವಿಮಾನಯಾನ ಕಂಪನಿಗಳು ವಿಮೆ ಹಣಕ್ಕೆ ಅರ್ಜಿ ಸಲ್ಲಿಸುತ್ತವೆ. ಹಾಗಾದ್ರೆ ಅಹಮದಾಬಾದ್ ದುರಂತದ ಬಳಿಕ ವಿಮಾನಯಾನ ಕಂಪನಿಗೆ ಎಷ್ಟು ಹಣ ಸಿಗುತ್ತೆ ಎಂಬುದನ್ನು ನೋಡೋಣ ಬ

Related Articles

Related image1
ಅಹಮದಾಬಾದ್ ವಿಮಾನ ದುರಂತ: ಡಿಸ್ಚಾರ್ಜ್ ಆಗ್ತಿದ್ದಂತೆ ಏರ್ ಇಂಡಿಯಾಗೆ ಶಾಕ್ ನೀಡಿದ ರಮೇಶ್
Related image2
ಅಹಮದಾಬಾದ್ ವಿಮಾನ ಪತನಕ್ಕೆ RAT ಕಾರಣ! ಅಮೆರಿಕ ನೌಕಾಪಡೆಯ ಮಾಜಿ ಪೈಲಟ್ ಬಿಚ್ಚಿಟ್ಟ ಮಾಹಿತಿ
37
Image Credit : Getty

ವಿಮಾನ ಪತನದ ಬಳಿಕ ವಿಮಾನಯಾನ ಕಂಪನಿಗಳು ಹಲವು ರೀತಿಯಲ್ಲಿ ವಿಮಾ ಕ್ಲೈಮ್‌ಗಳನ್ನು ಮಾಡಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಇವುಗಳಲ್ಲಿ ಹಲ್ ವಿಮೆ, ಬಿಡಿ ಭಾಗಗಳ ವಿಮೆ ಮತ್ತು ಕಾನೂನು ಹೊಣೆಗಾರಿಕೆಯ ವಿಮೆ ಸೇರಿರುತ್ತದೆ.

47
Image Credit : ANI

ಪತನಕ್ಕೆ ಸಂಬಂಧಿಸಿದಂತೆ ವಿಮಾನಯಾನ ಕಂಪನಿ ತೆಗೆದುಕೊಂಡ ಕ್ಲೈಮ್‌ಗೆ ವಿಮಾನಕ್ಕಾದ ಹಾನಿ ಮತ್ತು ಪ್ರಯಾಣಿಕರ ಸಾವಿಗೂ ಪರಿಹಾರವನ್ನು ಪಡೆದುಕೊಳ್ಳುತ್ತದೆ. ಅಂದ್ರೆ ವಿಮಾನಕ್ಕಾದ ಸಂಪೂರ್ಣ ಹಾನಿಯು ಕಂಪನಿಗೆ ಲಭ್ಯವಾಗುತ್ತದೆ. ಪ್ರತಿಯೊಂದು ವಿಮಾನಯಾನ ಕಂಪನಿಗಳು ವಿಮೆ ಪಾಲಿಸಿ ಮಾಡಿಕೊಂಡಿರುತ್ತದೆ. ಹಾಗಾಗಿ ವಿಮಾನಕ್ಕಾದ ಸಂಪೂರ್ಣ ಹಾನಿ ಮತ್ತು ಪ್ರಯಾಣಿಕರ ಸಾವಿಗೂ ಕಂಪನಿ ಪರಿಹಾರ ಪಡೆದುಕೊಳ್ಳುತ್ತದೆ.

57
Image Credit : Getty

ಅಪಘಾತಕ್ಕೊಳಗಾದ ನಂತರ ವಿಮೆ ಕಂಪನಿಗೆ ವಿಮಾನಯಾನ ಸಂಸ್ಥೆ ವಿಮಾನದ ಮೌಲ್ಯವನ್ನು ದಾಖಲೆಸಹಿತ ತಿಳಿಸುತ್ತದೆ. ಈ ದಾಖಲೆಗಳಾಧರದ ಮೇಲೆ ವಿಮೆ ಕಂಪನಿ ನಷ್ಟವನ್ನು ನಿರ್ಧರಿಸುತ್ತದೆ. ಜೂನ್ 12ರಂದು ಬೋಯಿಂಗ್ 787 ಡ್ರೀಮ್‌ಲೈನರ್ ಪತನವಾಗಿತ್ತು. ಸದ್ಯದ ವರದಿಗಳ ಪ್ರಕಾರ, ಬೋಯಿಂಗ್ 787 ಡ್ರೀಮ್‌ಲೈನರ್ ಮಾರುಕಟ್ಟೆ ಮೌಲ್ಯ 211 ರಿಂದ 280 ಮಿಲಿಯನ್ ಡಾಲರ್ ಇರಬಹಹುದು ಎಂದು ಅಂದಾಜಿಸಲಾಗುತ್ತಿದೆ.

67
Image Credit : x

ವಿಮೆ ಮೊತ್ತ ಅಪಘಾತದಿಂದ ಮೂರನೇ ವ್ಯಕ್ತಿಗಾದ ಹಾನಿಯನ್ನು ಒಳಗೊಂಡಿರುತ್ತದೆ. ಹಾಸ್ಟೆಲ್ ಮೇಲೆ ವಿಮಾನ ಪತನವಾಗಿದ್ದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಈ ಪತನದಲ್ಲಿ ಮೂರನೇ ವ್ಯಕ್ತಿಗೂ ಹಾನಿಯಾಗಿದೆ. ಹಾಗಾಗಿ ಈ ನಷ್ಟವನ್ನು ವಿಮಾ ಕಂಪನಿಯು ಸಹ ಸರಿದೂಗಿಸಬಹುದು.

77
Image Credit : x

2400 ಕೋಟಿ  ರೂಪಾಯಿ

ಈ ರೀತಿಯ ಎಲ್ಲಾ ಕ್ಲೈಮ್‌ಳನ್ನು ವಿಮಾನಯಾನ ಸಂಸ್ಥೆ ಪಡೆದುಕೊಳ್ಳುತ್ತದೆ. ವಿಮಾನಯಾನ ಕಂಪನಿ ನೂರಾರು ಕೋಟಿ ವಿಮೆಯನ್ನು ಪಡೆದುಕೊಳ್ಳಲಿದೆ. ಏರ್‌ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಸಂಸ್ಥೆ ಒಟ್ಟು 211 ರಿಂದ 280 ಮಿಲಿಯನ್ ಡಾಲರ್ ವಿಮೆ ಕ್ಲೈಮ್ ಪಡೆಯಬಹುದು. ಈ ಮೊತ್ತ ಭಾರತೀಯ ರೂಪಾಯಿಗಳಲ್ಲಿ ಸುಮಾರು 2400 ಕೋಟಿ ರೂ.ಗಳವರೆಗೆ ಆಗಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಏರ್ ಇಂಡಿಯಾ
ವಿಮಾನ ಅಪಘಾತ
ಅಹಮದಾಬಾದ್
ಹಣ (Hana)

Latest Videos
Recommended Stories
Recommended image1
ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ: ಕರ್ನಾಟಕ, ಆಂಧ್ರದಲ್ಲಿ ಚಳಿ ಚಳಿ, ಭಾರೀ ಮಳೆ ಎಚ್ಚರಿಕೆ
Recommended image2
World War 3: ಮೂರನೇ ಮಹಾಯುದ್ಧ ನಡೆದರೆ, ಯಾರು ಯಾರ ಪರವಾಗಿರುತ್ತಾರೆ, ಭಾರತದ ನಿಲುವೇನು?
Recommended image3
Shobhaa De: ಸೈಫ್ ಅಲಿ ಖಾನ್ ಚಾಕು ಇರಿತದ ಪ್ರಕರಣ; ಹಲವು ಸಂಶಯ ಹೇಳಿ ಪ್ರಶ್ನೆಗಳನ್ನು ಕೇಳಿದ ಶೋಭಾ ಡೇ!
Related Stories
Recommended image1
ಅಹಮದಾಬಾದ್ ವಿಮಾನ ದುರಂತ: ಡಿಸ್ಚಾರ್ಜ್ ಆಗ್ತಿದ್ದಂತೆ ಏರ್ ಇಂಡಿಯಾಗೆ ಶಾಕ್ ನೀಡಿದ ರಮೇಶ್
Recommended image2
ಅಹಮದಾಬಾದ್ ವಿಮಾನ ಪತನಕ್ಕೆ RAT ಕಾರಣ! ಅಮೆರಿಕ ನೌಕಾಪಡೆಯ ಮಾಜಿ ಪೈಲಟ್ ಬಿಚ್ಚಿಟ್ಟ ಮಾಹಿತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved