ನಟ ವಿಜಯ್ ಸರ್ಕಾರ ರಚನೆ ಡೀಲ್ ಫೈನಲ್? ಸುಳಿವು ನೀಡಿದ ಪಳನಿಸ್ವಾಮಿ ಪೋಸ್ಟ್
ತಮಿಳುನಾಡು ರಾಜಕೀಯಲ್ಲಿ ಮೇಲಿಂದ ಮೇಲೆ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾಡಿದ ಪೋಸ್ಟ್ ನಟ ವಿಜಯ್ ಸಿಎಂ ಆಗೋದು ಖಚಿತಪಡಿಸುತ್ತಿದೆಯಾ? ಇಪಿಎಸ್ ಪೋಸ್ಟ್ನಲ್ಲಿ ಏನಿದೆ?

ತಮಿಳುನಾಡು ರಾಜಕೀಯದ ಕ್ಲೈಮ್ಯಾಕ್ಸ್
ತಮಿಳುನಾಡು ರಾಜಕೀಯ ಇದೀಗ ದೇಶದ ಗಮನ ಸೆಳೆದಿದೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ನಟ ವಿಜಯ್ ಟಿವಿಕೆ ಪಕ್ಷ ಹೆಣಗಾಡುತ್ತಿದೆ. ಕಾಂಗ್ರೆಸ್, ಸಿಪಿಎಂ, ಸಿಪಿಐ ಬೆಂಬಲ ನೀಡಿದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಇದರ ನಡುವೆ ವಿಸಿಕೆ ಪಕ್ಷ ನಾಲ್ಕು ಗಂಟೆ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದೆ. ಇದರ ನಡುವೆ ನಟ ವಿಜಯ್ ಮುಖ್ಯಮಂತ್ರಿಯಾಗುವುದು, ಟಿವಿಕೆ ಸರ್ಕಾರ ರಚಿಸುವ ಡೀಲ್ ಫೈನಲ್ ಆಗಿದೆ ಅನ್ನೋ ಸುಳಿವನ್ನು ಎಐಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ನೀಡಿದ್ದಾರೆ.

ಇಪಿಎಸ್ ಪೋಸ್ಟ್ನಲ್ಲಿ ಕೊಟ್ಟ ಸುಳಿವೇನು?
ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ನಡುವೆ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಎಕ್ಸ್ ಮೂಲಕ ಪೋಸ್ಟ್ ಮಾಡಿ ಮಹತ್ವದ ಸುಳಿವು ನೀಡಿದ್ದಾರೆ. 17ನೇ ತಮಿಳುನಾಡು ವಿಧಾನಸಭೆ ಚುನಾವಣೆ ಯಶಸ್ವಿಯಾಗಿದೆ. ವಿವಿಧ ಪಕ್ಷಗಳಿಂದ ನಾಯಕರು ಸ್ಪರ್ಧಿಸಿ ಗೆದ್ದಿದ್ದಾರೆ. ಈ ವೇಳೆ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ನನ್ನ ಹೃದಯತುಂಬಿದ ಅಭಿನಂದನೆಗಳು ಎಂದು ಇಪಿಎಸ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಇಪಿಎಸ್ ಪೋಸ್ಟ್ ಹಿಂದಿನ ಸತ್ಯ
ಇಪಿಎಸ್ ಮಾಡಿದ ಪೋಸ್ಟ್ ಟೈಮಿಂಗ್ ಹಾಗೂ ಶುಭಾಶಯ ಇದೀಗ ಮಹತ್ವದ ಸುಳಿವು ನೀಡಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಸದ್ಯ 107 ಶಾಸಕರನ್ನು ಹೊಂದಿರುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ ಬೆಂಬಲ ನೀಡಿದೆ. ಆದರೂ ಇನ್ನೆರಡು ಶಾಸಕರ ಬೆಂಬಲ ಬೇಕಿದೆ. ಇದಕ್ಕೆ ವಿಸಿಕೆ ಜೊತೆ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಎಡಪ್ಪಾಡಿ ಪೋಸ್ಟ್ ನಟ ವಿಜಯ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸುವ ಡೀಲ್ ಫೈನಲ್ ಮಾಡಿದ ಸುಳಿವು ನೀಡಿದೆ.
ಎಐಡಿಎಂಕೆ ನಡೆ ಕುತೂಹಲ
ತಮಿಳುನಾಡು ಫಲಿತಾಂಶ ಬಳಿಕ ಎಐಡಿಎಂಕೆ ನಡೆ ತೀವ್ರ ಕುತೂಹಲ ಕೆರಳಿಸಿದೆ. ಒಂದು ಹಂತದಲ್ಲಿ ಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲಿದೆ ಅನ್ನೋ ಮಾತು ಕೇಳಿಬಂದಿತ್ತು. ಈ ಮಾತು ಇನ್ನೂ ತಳ್ಳಿಹಾಕುವಂತಿಲ್ಲ. ಇಷ್ಟೇ ಅಲ್ಲ ಎಐಎಡಿಂಕೆ ಸಂಸದರು, ನಮ್ಮ ಪಕ್ಷದ ನಾಯಕರು ಮುಖ್ಯಮಂತ್ರಿಯಾಗುತ್ತಾರೆ ಅನ್ನೋ ಹೇಳಿಕೆಯನ್ನು ನೀಡಿದ್ದರು.
ಒಂದಾಗುತ್ತಾ ಡಿಎಂಕೆ, ಎಐಎಡಿಎಂಕೆ
ಈ ಮಾತುಗಳು, ನಡೆಗಳನ್ನು ಗಮನಿಸಿದರೆ ಎಡಪ್ಪಾಡಿ ಕೆ ಪಳನಿಸ್ವಾಮಿ ಪೋಸ್ಟ್ ಹಲವು ಅರ್ಥ ನೀಡುತ್ತಿದೆ. ನಟ ವಿಜಯ್ ಅವರ ಟಿವಿಕೆಗೆ ಸೆಡ್ಡು ಹೊಡೆದು ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಒಂದಾದರು ಅಚ್ಚರಿ ಪಡಬೇಕಿಲ್ಲ.
ಒಂದಾಗುತ್ತಾ ಡಿಎಂಕೆ, ಎಐಎಡಿಎಂಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

