MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ರಂಜಾನ್ ಎಂದರೇನು? ಈ ಸಮಯದಲ್ಲಿ ಮುಸ್ಲಿಮರು ಏಕೆ ಉಪವಾಸ ಮಾಡ್ತಾರೆ?

ರಂಜಾನ್ ಎಂದರೇನು? ಈ ಸಮಯದಲ್ಲಿ ಮುಸ್ಲಿಮರು ಏಕೆ ಉಪವಾಸ ಮಾಡ್ತಾರೆ?

ಪವಿತ್ರ ರಂಜಾನ್ ಅಥವಾ ರಂಜಾನ್ ತಿಂಗಳು ಈ ವರ್ಷ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ ನ ಒಂಬತ್ತನೇ ತಿಂಗಳು, ಮತ್ತು ಇದನ್ನು ವಿಶ್ವದಾದ್ಯಂತದ ಮುಸ್ಲಿಮರಿಗೆ ಅತ್ಯಂತ ಪ್ರಮುಖ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ, ಜನರು ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ, ಆಹಾರ, ಪಾನೀಯ ಮತ್ತು ಇತರ ದೈಹಿಕ ಅಗತ್ಯಗಳಿಂದ ದೂರವಿರುತ್ತಾರೆ. ರಂಜಾನ್ ಎಂದರೇನು ಮತ್ತು ಈ ಪವಿತ್ರ ತಿಂಗಳಲ್ಲಿ ಉಪವಾಸ ಏಕೆ ಮುಖ್ಯ ಎಂಬುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೆಳಗೆ ಓದಿ.

2 Min read
Author : Suvarna News
Published : Mar 23 2023, 03:46 PM IST
Share this Photo Gallery
  • FB
  • TW
  • Linkdin
  • Whatsapp
110

ರಂಜಾನ್ - ಪವಿತ್ರ ತಿಂಗಳು (Ramadan - Holy Month)
ರಂಜಾನ್ ಆಧ್ಯಾತ್ಮಿಕ ಪ್ರತಿಬಿಂಬ, ಸ್ವಯಂ ಸುಧಾರಣೆ ಮತ್ತು ಅಲ್ಲಾಹನ ಮೇಲಿನ ಭಕ್ತಿಯ ತಿಂಗಳು. ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಏಕೆಂದರೆ ಖುರಾನ್‌ನ ಮೊದಲ ಶ್ಲೋಕಗಳು ಈ ತಿಂಗಳಲ್ಲಿ ಪ್ರವಾದಿ ಮುಹಮ್ಮದ್ ತಿಳಿಸಿದರು ಎಂದೇ ನಂಬಲಾಗಿದೆ. ಪ್ರಪಂಚದಾದ್ಯಂತದ ಮುಸ್ಲಿಮರು ರಂಜಾನ್ ಅನ್ನು ಉಪವಾಸ (Fasting), ಪ್ರಾರ್ಥನೆ (Prayers) ಮತ್ತು ದಾನ (Donation) ಮತ್ತು ದಯೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆಚರಿಸುತ್ತಾರೆ.
 

210

ರಂಜಾನ್ ಸಮಯದಲ್ಲಿ ಉಪವಾಸದ ಮಹತ್ವ
ರಂಜಾನ್ ಸಮಯದಲ್ಲಿ ಉಪವಾಸವು (fasting) ಇಸ್ಲಾಂನ ಐದು ಆಧಾರಸ್ತಂಭಗಳಲ್ಲಿ ಒಂದಾಗಿದೆ, ಇದು ಎಲ್ಲಾ ಮುಸ್ಲಿಮರಿಗೆ ಕಡ್ಡಾಯ ಪೂಜಾ ಮೂಲಭೂತ ಕಾರ್ಯಗಳಾಗಿವೆ. ಉಪವಾಸ ಕೇವಲ ಶಾರೀರಿಕ ಕ್ರಿಯೆಯಲ್ಲ (Physical Act), ಇದು ಜನರನ್ನು ಅಲ್ಲಾಹನಿಗೆ ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಆಧ್ಯಾತ್ಮಿಕ ಕ್ರಿಯೆಯಾಗಿದೆ (Spiritual Act).

310

ರಂಜಾನ್ ಸಮಯದಲ್ಲಿ (Ramadan month) ಅಲ್ಲಾಹನಿಗೆ ಭಕ್ತಿಯನ್ನು ತೋರಿಸಲಾಗುತ್ತದೆ. ಇದು ಅಲ್ಲಾಹನು ಅವರಿಗೆ ನೀಡಿದ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಹಾಗಾಗಿ ಈ ತಿಂಗಳಲ್ಲಿ ಮುಸಲ್ಮಾನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಉಪವಾಸ ಮೊದಲಾದ ಕ್ರಿಯೆ ಮಾಡುತ್ತಾರೆ.

410

ಸ್ವಯಂ ಶಿಸ್ತನ್ನು ಅಭ್ಯಾಸ ಮಾಡಲು
ರಂಜಾನ್ ಸಮಯದಲ್ಲಿ ಉಪವಾಸವು ಸ್ವಯಂ ಶಿಸ್ತು ಮತ್ತು ಸ್ವಯಂ ನಿಯಂತ್ರಣ ಹೊಂದಿರಬೇಕು. ಇದು ಅವರ ಶಾರೀರಿಕ ಬಯಕೆಗಳನ್ನು ಪ್ರತಿರೋಧಿಸಲು ಮತ್ತು ಅವರ ಆಧ್ಯಾತ್ಮಿಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಲು ಅವರಿಗೆ ಕಲಿಸುತ್ತದೆ.

510

ಬಡವರ ದುಃಖವನ್ನು ಅರ್ಥ ಮಾಡುವ ದಿನ
ರಂಜಾನ್ ಸಮಯದಲ್ಲಿ ಉಪವಾಸವು ಕಡಿಮೆ ಅದೃಷ್ಟವಂತರೊಂದಿಗೆ ಸಹಾನುಭೂತಿ ಹೊಂದುವ ಒಂದು ಮಾರ್ಗ. ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸುವ ಮೂಲಕ, ತಿನ್ನಲು ಅಥವಾ ಕುಡಿಯಲು ಸಾಕಷ್ಟು ಇಲ್ಲದವರ ಹೋರಾಟಗಳನ್ನು ನೀವು ಅರ್ಥಮಾಡಿಕೊಳ್ಳಬಹುದು.

610

ಆತ್ಮವನ್ನು ಶುದ್ಧೀಕರಿಸುವುದು (Soul Purification)
ಆತ್ಮವನ್ನು ಶುದ್ಧೀಕರಿಸಲು ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಹೆಚ್ಚಿಸಲು ರಂಜಾನ್ ತಿಂಗಳು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ಕಾರ್ಯಗಳ ಬಗ್ಗೆ ಯೋಚಿಸುವ ಮತ್ತು ನಿಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಕೋರುವ ಸಮಯ.

710

ಕುಟುಂಬ ಮತ್ತು ಸಮುದಾಯ ಸಂಬಂಧ ಸುಧಾರಿಸಲು
ರಂಜಾನ್ ಸಮಯದಲ್ಲಿ ಜನರು ಉಪವಾಸ ಮುರಿಯಲು ಮತ್ತು ಊಟ ಹಂಚಿಕೊಳ್ಳಲು (sharing food with family) ಕುಟುಂಬ ಮತ್ತು ಸಮುದಾಯಗಳು ಒಗ್ಗೂಡುವ ಸಮಯ. ಇದು ಸಂಬಂಧಗಳನ್ನು ಬಲಪಡಿಸುವ ಮತ್ತು ಪ್ರೀತಿಪಾತ್ರರೊಂದಿಗೆ ಬಂಧಗಳನ್ನು ಬೆಳೆಸುವ ಸಮಯ.
 

810

ರಂಜಾನ್ ಸಮಯದಲ್ಲಿ, ಜನರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಅವರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸುಹೂರ್ (suhoor) ಎಂಬ ಊಟವನ್ನು ತಿನ್ನುತ್ತಾರೆ, ಇದು ದಿನಕ್ಕೆ ಶಕ್ತಿ ಒದಗಿಸುವ ಉದ್ದೇಶ ಹೊಂದಿದೆ. ನಂತರ ಅವರು ದಿನವಿಡೀ ಉಪವಾಸ ಮಾಡುತ್ತಾರೆ, ಸೂರ್ಯಾಸ್ತದವರೆಗೆ ಆಹಾರ, ಪಾನೀಯ ಮತ್ತು ಇತರ ದೈಹಿಕ ಅಗತ್ಯಗಳಿಂದ ದೂರವಿರುತ್ತಾರೆ.

910

ಸೂರ್ಯಾಸ್ತದ ಸಮಯದಲ್ಲಿ, ಜನರು ಇಫ್ತಾರ್ (Iftar) ಎಂಬ ಊಟದೊಂದಿಗೆ ತಮ್ಮ ಉಪವಾಸ ಮುರಿಯುತ್ತಾರೆ. ಈ ಊಟವು ಖರ್ಜೂರವನ್ನು ತಿನ್ನುವ ಮೂಲಕ ಆರಂಭವಾಗುತ್ತದೆ, ಇದು ಪ್ರವಾದಿ ಮುಹಮ್ಮದ್ ಅವರ ಉಪವಾಸವನ್ನು ಮುರಿಯಲು ಆದ್ಯತೆಯ ಆಹಾರವಾಗಿತ್ತು. ಇಫ್ತಾರ್ ನಂತರ, ಜನರು ಪ್ರಾರ್ಥನೆ ಮತ್ತು ಇತರ ಪೂಜಾ ಕಾರ್ಯಗಳಲ್ಲಿ ತೊಡಗುತ್ತಾರೆ.
 

1010

ಉಪವಾಸದ ಜೊತೆಗೆ, ರಂಜಾನ್ ಸಮಯದಲ್ಲಿ ದಾನ ಮತ್ತು ದಯೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಇದು ಬಡವರಿಗೆ ಕೊಡುವುದು, ಸ್ವಯಂಸೇವಕರಾಗುವುದು ಅಥವಾ ಇತರರಿಗೆ ದಯೆ ತೋರಿಸುವುದನ್ನು ಒಳಗೊಂಡಿರಬಹುದು.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ರಂಜಾನ್
ಮುಸ್ಲಿಂ

Latest Videos
Recommended Stories
Recommended image1
ವಾರಕ್ಕೊಮ್ಮೆ ವಿಸ್ಕಿ-ಬಿಯರ್ ಕುಡಿದರೆ ಏನಾಗೋಲ್ಲ ಅನ್ನೋರು ಈ ಸುದ್ದಿ ಓದಲೇಬೇಕು!
Recommended image2
ಮನೆಮುಂದೆ ಕಾಡಿನಂತೆ 'ತುಳಸಿ ಗಿಡ' ಬೆಳೆಸಲು ಉಪ್ಪು ಹಾಕಿ ತಪ್ಪು ಮಾಡಬೇಡಿ!
Recommended image3
ಮರೆವಿಗೆ ರಾಮಬಾಣ, ತಿಮರೆ ಚಟ್ನಿಯ ಆರೋಗ್ಯದ ಗುಟ್ಟು 100 ವರ್ಷ ಆಯಸ್ಸು! ಮಾಡೋದೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved