MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

ಪವಿತ್ರವಾದ ಶ್ರಾವಣ ಮಾಸದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಇದು ಧಾರ್ಮಿಕ ಅಂತ ಅನಿಸಿದರೂ, ಇದರ ಹಿಂದೆ ಇರುವ ವಿಜ್ಞಾನವನ್ನು ನೀವು ಅರ್ಥ ಮಾಡಿಕೊಳ್ಳಬೇಕು. 

2 Min read
Pavna Das
Published : Jul 01 2025, 04:54 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Freepik

ಬಹುತೇಕ ಎಲ್ಲಾ ಶಿವನ ಭಕ್ತರು ಶ್ರಾವಣ ಮಾಸಕ್ಕಾಗಿ (Shravana Mas)ಕಾಯುತ್ತಾರೆ. ಶೀಘ್ರದಲ್ಲೇ ಶ್ರಾವಣ ಮಾಸ ಬರಲಿದೆ. ಉತ್ತರ ಭಾರತೀಯರ ಪ್ರಕಾರ ಈ ವರ್ಷ ಜುಲೈ 11 ರಿಂದ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಕರ್ನಾಟಕದಲ್ಲಿ ಜುಲೈ 25 ರಿಂದ ಶ್ರಾವಣ ಮಾಸ ಆರಂಭ. ಈ ತಿಂಗಳಲ್ಲಿ ಕೆಲವು ವಿಷಯಗಳು ನಿಷಿದ್ಧ ಎಂದು ಹಿರಿಯರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬೇಕು. ಅದಕ್ಕೆ ಧಾರ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ.

27
Image Credit : Getty

ಕೆಲವು ವಿಷಯಗಳನ್ನು ತಪ್ಪಿಸಬೇಕು

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಜನ ತಮ್ಮ ಜೀವನಶೈಲಿಯನ್ನು (lifestyle) ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ನಮ್ಮಲ್ಲಿ ತಡವಾಗಿ ಶ್ರಾವಣ ಶುರುವಾದರೂ, ಎರಡೂ ಉತ್ತರ-ದಕ್ಷಿಣ ಭಾರತದ ಆಚರಣೆಗಳು ವಿಭಿನ್ನವಾದರೂ, ಅದರ ಹಿಂದಿರುವ ಶಾಸ್ತ್ರಗಳ ಸಂಪ್ರದಾಯಗಳ ಮೂಲ ಒಂದೇ ಆಗಿದೆ. ಹಾಗಾಗಿ ಈ ಸಮಯದಲ್ಲಿ ನಾವು ಏನನ್ನು ತಿನ್ನಬಾರದು ಅನ್ನೊದನ್ನು ನೋಡೋಣ.

Related Articles

Related image1
Fat Burning Vegetables: ಹೊಟ್ಟೆಯ ಕೊಬ್ಬು ಇಳಿಸೋ ತಲೆ ಬಿಸಿ ಬೇಡ… ಈ ತರಕಾರಿ ತಿನ್ನಿ ಸಾಕು
Related image2
Non Veg; ನೀವು ತಿನ್ನೋ ಆಹಾರವನ್ನೇ ಹೊಲಸು ಅಂತೀರಲ್ರೀ, ಮತ್ತ್ಯಾಕೆ ತಿಂತೀರಿ: ಕವಿರಾಜ್
37
Image Credit : Google

ಡೈರಿ ಉತ್ಪನ್ನ ತಪ್ಪಿಸಿ

ಶ್ರಾವಣ ಮಾಸದಲ್ಲಿ ಹಾಲಿನ ಉತ್ಪನ್ನಗಳನ್ನು (dairy products) ಸೇವಿಸಬಾರದು ಏಕೆಂದರೆ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಹೆಚ್ಚಾಗಿ ಮಣ್ಣಿನಡಿಯಿಂದ ಮೇಲೆ ಬಂದು ಹುಲ್ಲು ಅಥವಾ ಹಸಿರು ವಸ್ತುಗಳನ್ನು ತಿಂದು ಅವುಗಳಿಗೆ ಸೋಂಕು ತರುತ್ತವೆ. ಹಸು ಅಥವಾ ಎಮ್ಮೆ ಅದೇ ಹುಲ್ಲನ್ನು ತಿನ್ನುತ್ತದೆ, ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

47
Image Credit : stockPhoto

ಮೊಸರು ಸೇವಿಸುವುದನ್ನು ತಪ್ಪಿಸಿ

ಮೊಸರನ್ನು ತಿನ್ನಬಾರದು ಏಕೆಂದರೆ ಈ ದಿನಗಳಲ್ಲಿ ಪರಿಸರದಲ್ಲಿ ತೇವಾಂಶ ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಿರುತ್ತವೆ, ಇದರಿಂದಾಗಿ ಹಾನಿಕಾರಕ ಬ್ಯಾಕ್ಟೀರಿಯಾಗಳು(bacteria) ಬೆಳೆಯುತ್ತವೆ. ಇದಲ್ಲದೆ, ಮೊಸರಿನ ಪರಿಣಾಮವು ಶೀತವಾಗಿರುತ್ತದೆ, ಹಾಗಾಗಿ ಶೀತ ಮತ್ತು ಕೆಮ್ಮು ಉಂಟಾಗುವ ಸಾಧ್ಯತೆ ಇರುತ್ತದೆ

57
Image Credit : Getty

ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಿ

ಆಯುರ್ವೇದದ ಪ್ರಕಾರ ಮಳೆಯಿಂದಾಗಿ ಜನರ ಜೀರ್ಣಶಕ್ತಿ ದುರ್ಬಲಗೊಳ್ಳುತ್ತದೆ. ಈ ಸಮಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ (garlic and ginger) ಬಿಸಿ ಸ್ವಭಾವವನ್ನು ಹೊಂದಿರುತ್ತವೆ, ಅವುಗಳನ್ನು ತಿನ್ನುವುದರಿಂದ ವಾಯು, ಗ್ಯಾಸ್ ಮತ್ತು ಅಜೀರ್ಣ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

67
Image Credit : Getty

ಬದನೆಕಾಯಿಯಿಂದ ದೂರವಿರಿ

ಚರಕ ಸಂಹಿತವು ಶ್ರಾವಣ ಮಾಸದಲ್ಲಿ ಬದನೆಕಾಯಿ ತಿನ್ನಬಾರದೆಂದು ಸಲಹೆ ನೀಡುತ್ತದೆ, ಇದಕ್ಕೆ ಮುಖ್ಯ ಕಾರಣ ಅದರ ಸ್ವಭಾವ. ಬದನೆಕಾಯಿ (brinjal) ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬದನೆಕಾಯಿ ಗಿಡದಲ್ಲಿ ಬೆಳೆಯುವ ತರಕಾರಿ' . ಶ್ರಾವಣ ಮಾಸದಲ್ಲಿ ಆರ್ದ್ರತೆಯಿಂದಾಗಿ, ಅದರಲ್ಲಿ ಕೀಟಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

77
Image Credit : others

ಹಸಿರು ಎಲೆ ತರಕಾರಿಗಳು

ಸುಶ್ರುತ ಸಂಹಿತದಲ್ಲಿ, ಶ್ರಾವಣ ಮಾಸದಲ್ಲಿ ಹಸಿರು ಎಲೆ ತರಕಾರಿಗಳನ್ನು(green vegetables) ತಿನ್ನುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಈ ಋತುವಿನಲ್ಲಿ ನೆಲದಲ್ಲಿರುವ ಹೆಚ್ಚಿನ ಕೀಟಗಳು ಹೊರಬಂದು ಹಸಿರು ಎಲೆ ತರಕಾರಿಗಳಿಗೆ ಸೋಂಕು ತರುತ್ತವೆ, ಇದರಿಂದಾಗಿ ವೈರಲ್ ಸೋಂಕಿನ ಅಪಾಯ ಹೆಚ್ಚಾಗುವ ಭಯವಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆಹಾರ

Latest Videos
Recommended Stories
Recommended image1
ಭಾರತದಲ್ಲಿ ಲಭ್ಯವಿರುವ ತೂಕ ಇಳಿಸುವ ಔಷಧಿಗಳು ಯಾವುವು? ಇದರ ಬೆಲೆ ಎಷ್ಟು, ಯಾರೆಲ್ಲಾ ಬಳಸಬಹುದು?
Recommended image2
Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips
Recommended image3
ಊಟ ಮಾಡುವಾಗ ಮೊಬೈಲ್ ನೋಡುತ್ತೀರಾ? ಅದರಿಂದ ಯಾವ ಸಮಸ್ಯೆ ಬರುತ್ತೆ ಗೊತ್ತಾ? ತಜ್ಞರ ಎಚ್ಚರಿಕೆ ಏನು?
Related Stories
Recommended image1
Fat Burning Vegetables: ಹೊಟ್ಟೆಯ ಕೊಬ್ಬು ಇಳಿಸೋ ತಲೆ ಬಿಸಿ ಬೇಡ… ಈ ತರಕಾರಿ ತಿನ್ನಿ ಸಾಕು
Recommended image2
Non Veg; ನೀವು ತಿನ್ನೋ ಆಹಾರವನ್ನೇ ಹೊಲಸು ಅಂತೀರಲ್ರೀ, ಮತ್ತ್ಯಾಕೆ ತಿಂತೀರಿ: ಕವಿರಾಜ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved