ಪುರುಷರ ಸಾಮಾರ್ಥ್ಯವನ್ನು ಹೆಚ್ಚಿಸುವ ಹಸಿರು ತರಕಾರಿಗಳು
ಇಂದಿನ ಜೀವನಶೈಲಿಯಲ್ಲಿ ಸಮಸ್ಯೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಕೆಲಸದ ಒತ್ತಡ, ನಿದ್ರಾಹೀನತೆ, ಅನಿಯಮಿತ ಆಹಾರ ಸೇವನೆ, ಮಾನಸಿಕ ಒತ್ತಡ, ವ್ಯಾಯಾಮದ ಕೊರತೆ ಇತ್ಯಾದಿ ಸಮಸ್ಯೆಗಳು ಪುರುಷರಲ್ಲಿ ಕಾಮಾಸಕ್ತಿಯನ್ನು ಕುಗ್ಗಿಸುತ್ತವೆ. ಇದರಿಂದ ದಾಂಪತ್ಯ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಸಿದ್ಧರ ಪದ್ಯದಲ್ಲಿ ಉಲ್ಲೇಖವಾಗಿರುವ ತುದುವೆಲೆ, ಪಸಲೆ, ಬಸಳೆ ಎಲ್ಲವೂ ಪುರುಷರ ಸಾಮರ್ಥ್ಯವನ್ನು ಹೆಚ್ಚಳ ಮಾಡುತ್ತವೆ. ಈ ಹಸಿರು ತರಕಾರಿಯನ್ನು ಅಡುಗೆಯಲ್ಲಿ ನಿಯಮಿತವಾಗಿ ಬಳಕೆ ಮಾಡಬೇಕೆಂದು ಆರೋಗ್ಯತಜ್ಞರು ಸಲಹೆ ನೀಡುತ್ತಾರೆ.
ತಾಳಿ ಕೀರೆ ಸೊಪ್ಪು ಬೇಲಿಗಳಲ್ಲಿ ಮತ್ತು ಕಾಡುಗಳಲ್ಲಿ ಕಂಡುಬರುವ ಒಂದು ಬಳ್ಳಿ. ಇದು ದೇಹದ ಉಷ್ಣತೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಈ ಸೊಪ್ಪು ಪುರುಷರ ಆರೋಗ್ಯಕ್ಕೆ ಉತ್ತಮವಾಗಿದೆ.
ತಾಳಿ ಕೀರೆಯ ಎಲೆಗಳನ್ನು ರುಬ್ಬಿ ದೇಹಕ್ಕೆ ಹಚ್ಚಿ ಸ್ನಾನ ಮಾಡಿದರೆ ಚರ್ಮವು ಹೊಳೆಯುತ್ತದೆ. ತುರಿಕೆ ಮತ್ತು ಚರ್ಮ ರೋಗಗಳು ಗುಣವಾಗುತ್ತವೆ. ತಾಳಿ ಕೀರೆಯ ಎಲೆಗಳು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈ ಸೊಪ್ಪು ಸಿಗೋದು ವಿರಳವಾಗಿದೆ.
ನನ್ ಮುರುಂಗೈ ಎಂದರೆ ಮುರುಂಗೈ ಕೀರೆ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಈ ಸೊಪ್ಪು ಸಹ ಪುರುಷರ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿಈ ಸೊಪ್ಪು ಅಧಿಕವಾಗಿ ಬಳಕೆಯಾಗುತ್ತದೆ.
ಈ ಸೊಪ್ಪು ಸಹ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದನ್ನು ಅರಿವೆ ಅಂತಾನೂ ಕರೆಯಲಾಗುತ್ತದೆ. ಇದನ್ನು ಕಾಳು ಪಲ್ಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ನುಗ್ಗೆಕಾಯಿ ಜೊತೆಗೆ ಇದರ ಸೊಪ್ಪು ಮತ್ತು ಹೂ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ನುಗ್ಗೆಕಾಯಿ ಹೂವಿನಿಂದ ಚಟ್ನಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಸೊಪ್ಪು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ.
ಈ ಸೊಪ್ಪುಗಳ ಸೇವನೆಯಿಂದಾಗಿ ಪುರುಷರಲ್ಲಿ ವೀರ್ಯಾಣು ಕೊರತೆ ನಿವಾರಣೆಯಾಗಿ ಕಾಮಾಸಕ್ತಿ ಹೆಚ್ಚುತ್ತದೆ. ಇದರಿಂದ ಪುರುಷ ಬಂಜೆತನ ನಿವಾರಣೆಯಾಗುತ್ತದೆ.
Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.