MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಹೆಚ್ಚು ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?

ಹೆಚ್ಚು ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?

ಇಂದಿನ ಯುಗದಲ್ಲಿ, ಮಧುಮೇಹ ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲಾ ವಯಸ್ಸಿನ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ ಅನ್ನೋದೆ ಶಾಕಿಂಗ್ ವಿಷಯವಾಗಿದೆ. ಮಧುಮೇಹದಲ್ಲಿ, ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಾಗುತ್ತೆ , ಇದರಿಂದಾಗಿ ದೇಹದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತೆ. ಇಲ್ಲಿಯವರೆಗೆ ನೀವು ಅನೇಕ ಬಾರಿ ಕೇಳಿರಬಹುದು, ಹೆಚ್ಚು ಸಕ್ಕರೆ ತಿನ್ನೋದು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಎಲ್ಲರೂ ಹೇಳೋದು. ಸಿಹಿ ತಿನ್ನುವುದು ನಿಜವಾಗಿಯೂ ಈ ಕಾಯಿಲೆಗೆ ಕಾರಣವಾಗುತ್ತಾ? ಸ್ವೀಟ್  ನಮ್ಮ ದೇಹಕ್ಕೆ ಹೇಗೆ ಹಾನಿಕಾರಕವಾಗಬಹುದು?

2 Min read
Author : Suvarna News
Published : Sep 03 2022, 03:08 PM IST
Share this Photo Gallery
  • FB
  • TW
  • Linkdin
  • Whatsapp
17
ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?

ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?

ತಜ್ಞರ ಪ್ರಕಾರ, ಹೆಚ್ಚು ಸಕ್ಕರೆ ತಿನ್ನೋದರಿಂದ ಮಧುಮೇಹದ (diabetes) ಅಪಾಯ ಹೆಚ್ಚಾಗುತ್ತೆ, ಆದರೆ ಇದು ಮಧುಮೇಹದೊಂದಿಗೆ ನೇರ ಸಂಬಂಧ ಹೊಂದಿಲ್ಲ. ನೀವು ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ, ತೂಕವು ಹೆಚ್ಚಾಗುತ್ತೆ, ಇದು ಮಧುಮೇಹ ಬರುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ ಎಂದು ತಜ್ಞರು ಹೇಳುತ್ತಾರೆ.

27

ಸ್ವೀಟ್ನೆಸ್ ಕಾರಣದಿಂದಾಗಿ, ಹೆಚ್ಚಿನ ಜನರು ಸೆಂಟ್ರಿಪೇಟಲ್ ಒಬೆಸಿಟಿ ಹೊಂದುತ್ತಿದ್ದಾರೆ, ಅಂದರೆ ಹೊಟ್ಟೆಯ ಸುತ್ತಲೂ ಕೊಬ್ಬು (fat) ಶೇಖರಣೆಯಾಗುತ್ತೆ. ಇದನ್ನು ಮಧುಮೇಹಕ್ಕೆ ಕಾರಣವಾಗುವ ಒಂದು ಅಂಶವೆಂದು ಪರಿಗಣಿಸಲಾಗುತ್ತೆ. ಹಾಗಾಗಿ ಸಿಹಿ ಆಹಾರ ಸೇವಿಸೋದರಿಂದ ಮಾತ್ರ ಮಧುಮೇಹ ಬರುತ್ತೆ ಎಂದು ಹೇಳಲಾಗದು. 

37
ದ್ರವ ರೂಪದ ಸಕ್ಕರೆ ಹೆಚ್ಚು ಅಪಾಯಕಾರಿ

ದ್ರವ ರೂಪದ ಸಕ್ಕರೆ ಹೆಚ್ಚು ಅಪಾಯಕಾರಿ

ಮಧುಮೇಹ ತಜ್ಞರು ಹೇಳುವಂತೆ, ಸಿಹಿಯನ್ನು ಘನರೂಪದಲ್ಲಿ ಸೇವಿಸಿದರೆ, ಅದು ದೇಹಕ್ಕೆ ಕಡಿಮೆ ಹಾನಿಯನ್ನುಂಟು ಮಾಡುತ್ತೆ. ಸಕ್ಕರೆಯನ್ನು ದ್ರವರೂಪದಲ್ಲಿ (liquid sugar) ಸೇವಿಸೋದು ಹೆಚ್ಚು ಅಪಾಯಕಾರಿ. ಆದುದರಿಂದ ಯಾವುದೇ ಕಾರಣಕ್ಕೂ, ನೀವು ಸೇವಿಸುವ ಆಹಾರದಲ್ಲಿ, ಪಾನೀಯಗಳಲ್ಲಿ ಹೆಚ್ಚು ಸಕ್ಕರೆ ಸೇರಿಸಬೇಡಿ.

47

ಸಾಮಾನ್ಯವಾಗಿ, ತಂಪು ಪಾನೀಯಗಳು, ಸ್ಪೋರ್ಟ್ಸ್ ಡ್ರಿಂಕ್ಸ್ ಮತ್ತು ಎನರ್ಜಿ ಡ್ರಿಂಕ್ಸ್ ಸೇರಿದಂತೆ ಹೆಚ್ಚಿನ ತಂಪು ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ, ಇದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ತಂಪು ಪಾನೀಯಗಳನ್ನು ಸೇವಿಸೋದು ಅತ್ಯಂತ ಅಪಾಯಕಾರಿ. ಅಧಿಕ ಫ್ರಕ್ಟೋಸ್ ಸಿರಪ್ ಮತ್ತು ಕೃತಕ ಸಿಹಿಕಾರಕದ ಅತಿಯಾದ ಸೇವನೆಯು ಮಧುಮೇಹ ಉಂಟು ಮಾಡುವ ಸಾಧ್ಯತೆ ಇದೆ.

57
ಮಧುಮೇಹ ರೋಗಿಗಳು ಸಿಹಿತಿಂಡಿಗಳಿಂದ ದೂರವಿರಬೇಕು

ಮಧುಮೇಹ ರೋಗಿಗಳು ಸಿಹಿತಿಂಡಿಗಳಿಂದ ದೂರವಿರಬೇಕು

ವೈದ್ಯರ ಪ್ರಕಾರ, ಮಧುಮೇಹ ರೋಗಿಗಳು ಯಾವುದೇ ರೂಪದಲ್ಲಿ ಸಿಹಿ ತಿನ್ನಬಾರದು. ಇದನ್ನು ಮಾಡೋದರಿಂದ, ಅವರ ಸಕ್ಕರೆ ಮಟ್ಟವು ಹೆಚ್ಚಾಗಬಹುದು ಮತ್ತು ಅಪಾಯ ಸಂಭವಿಸಬಹುದು. ಅವರು ಸಿಹಿ ಚಹಾ ಕುಡಿಯೋದನ್ನು ಸಹ ತಪ್ಪಿಸಬೇಕು.

67

ತಜ್ಞರು ಹೆಚ್ಚಿನ ಪ್ರಮಾಣದ ಸಕ್ಕರೆ ಸೇವಿಸೋದರಿಂದ ಹೃದ್ರೋಗ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ (blood pressure) ಸಮಸ್ಯೆಗಳು ಉಂಟಾಗಬಹುದು ಎಂದು ಹೇಳುತ್ತಾರೆ. ಆದ್ದರಿಂದ, ಪ್ರತಿಯೊಬ್ಬರೂ ಒಂದು ಮಿತಿಯಲ್ಲಿ ಸಿಹಿಯನ್ನು ಸೇವಿಸಬೇಕು. ಸಿಹಿ ತಿಂದ ನಂತರ ನೀರನ್ನು ಕುಡಿಯದಿದ್ದರೆ, ಅದು ರಕ್ತದಲ್ಲಿನ ಸಕ್ಕರೆಯ ಮಟ್ಟದ (Sugar Level) ಮೇಲೆ ಪರಿಣಾಮ ಬೀರೋದಿಲ್ಲ ಎಂದು ಅನೇಕ ಜನರು ನಂಬುತ್ತಾರೆ. ತಜ್ಞರು ಇದನ್ನು ಸಂಪೂರ್ಣ ಸುಳ್ಳು ಎಂದು ಹೇಳುತ್ತಾರೆ.

77
ಬೆಲ್ಲ ಬೆಸ್ಟ್

ಬೆಲ್ಲ ಬೆಸ್ಟ್

ನೀವು ಸಿಹಿ ತಿನ್ನಬಹುದು, ಆದರೆ ಸಕ್ಕರೆ ಬದಲಾಗಿ ನೀವು ಬೆಲ್ಲವನ್ನು ಸೇವಿಸೋದು ಉತ್ತಮ. ಬೆಲ್ಲ ಹೆಚ್ಚು ಪರಿಣಾಮ ಬೀರೋದಿಲ್ಲ, ಆದುದರಿಂದ ಸಾಧ್ಯವಾದಷ್ಟು ಸಕ್ಕರೆ ಬದಲು ಬೆಲ್ಲ ಸೇವಿಸಿ. ಉತ್ತಮ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಸಿಹಿಯನ್ನು ಕಂಟ್ರೋಲ್ ಮಾಡೋದು ಉತ್ತಮ. ಎಲ್ಲಾದಕ್ಕೂ ತಜ್ಞರ ಸಲಹೆ ಪಡೆಯೋದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಸಕ್ಕರೆ
ಮಧುಮೇಹ
Latest Videos
Recommended Stories
Recommended image1
ನನ್ನ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾಳೆ, ನಂಗೆ ಅದು ಬರೋ ಚಾನ್ಸ್‌ ಎಷ್ಟು?
Recommended image2
'ಹಿತ್ತಲ ಗಿಡ ಮದ್ದಲ್ಲ' ಅನ್ನೋ ಗಾದೆಯನ್ನೇ ಸುಳ್ಳು ಮಾಡಿರೋ ಬಜೆ; ಎಷ್ಟೋ ದೈಹಿಕ ಸಮಸ್ಯೆಗೆ ಇದು ರಾಮಬಾಣ!
Recommended image3
ನಿಮ್ಮ ಹೃದಯದಲ್ಲಿ ಬ್ಲಾಕ್ ಇದ್ರೆ ಕಾಣಿಸಿಕೊಳ್ಳೋ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved