Photo : ಯಾವ ದೇಗುಲಗಳಲ್ಲಿ ಹೇಗಿತ್ತು ವೈಕುಂಠ ಏಕಾದಶಿ ಸಂಭ್ರಮ, ನೀವು ಕಣ್ತುಂಬಿಕೊಳ್ಳಿ
ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಡಗರ ಮನೆ ಮಾಡಿದೆ. ಭಕ್ತಾದಿಗಳು ಮುಂಜಾನೆಯಿಂದಲೂ ದೇಗುಲಗಳಿಗೆ ತೆರಳಿ ದರ್ಶನ ಪಡೆದು ಪುನೀತರಾಗಿದ್ದಾರೆ. ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರಗಳು ಮನಸೆಳೆಯುತ್ತಿವೆ. ಹಲವು ರಾಜಕೀಯ ಮುಖಂಡರು ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ರಾಜಾಜಿನಗರದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಅಲಂಕಾರಗೊಂಡ ಶ್ರೀ ಮಹಾವಿಷ್ಣು
ಅಲಂಕಾರಗೊಂಡ ಶಯನಮೂರ್ತಿ ಮಹಾವಿಷ್ಣು
ದೇವಾಲಯದಲ್ಲಿ ಗಮನ ಸೆಳೆದ ಸುಂದರ ಅಲಂಕಾರ
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಅಲಂಕಾರಗೊಂಡ ಇಸ್ಕಾನ್ ದೇಗುಲ
ಆಪ್ತರೊಂದಿಗೆ ದೇವರ ದರ್ಶನ ಪಡೆದ ಮಾಜಿ ಪ್ರಧಾನಿ ದೇವೇಗೌಡರು
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇಗುಲದಲ್ಲಿ ಕಂಡು ಬಂದ ಭಕ್ತ ಸಾಗರ
ವೈಕುಂಠ ಏಕಾದಶಿಯಂದು ಮಲ್ಲೇಶ್ವರಂನಲ್ಲಿ ವೆಂಕಟರಮಣನ ದರ್ಶನ ಪಡೆದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ
ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣನ ಸನ್ನಿಧಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ
ವೈಕುಂಠ ಏಕಾದಶಿ ಹಿನ್ನೆಲೆ ಅಲಂಕಾರಗೊಂಡ ಮಹಾ ವಿಷ್ಣುಮೂರ್ತಿ
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆದ ಸಾವಿರಾರು ಮಂದಿ ಭಕ್ತ ವೃಂದ