MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Mahalaya Amavasya: ಸಾಯುವಾಗ ಈ ವಸ್ತುಗಳು ಜೊತೆಗಿದ್ದರೆ ಸೀದಾ ಸ್ವರ್ಗಕ್ಕೇ ಪ್ರಯಾಣ!

Mahalaya Amavasya: ಸಾಯುವಾಗ ಈ ವಸ್ತುಗಳು ಜೊತೆಗಿದ್ದರೆ ಸೀದಾ ಸ್ವರ್ಗಕ್ಕೇ ಪ್ರಯಾಣ!

ಸಾಯುವ ಸಮಯದಲ್ಲಿ ಈ ವಸ್ತುಗಳು ಮೃತ ಹೊಂದುತ್ತಿರುವ ವ್ಯಕ್ತಿಯ ಬಳಿಯಿದ್ದರೆ ಆತನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಂಥ ಅದ್ಭುತ ವಸ್ತುಗಳು ಯಾವುವು ನೋಡೋಣ..

2 Min read
Suvarna News
Published : Sep 22 2022, 02:50 PM IST
Share this Photo Gallery
  • FB
  • TW
  • Linkdin
  • Whatsapp
18

ನೀವು ಗರುಡ ಪುರಾಣವನ್ನು ಪರಿಗಣಿಸಿದರೆ, ಸಾಯುವ ಸಮಯದಲ್ಲಿ 6 ವಿಶೇಷ ವಸ್ತುಗಳನ್ನು ಬಳಿಯಲ್ಲಿ ಹೊಂದಿದ್ದರೆ, ಯಮರಾಜನು ಸಹ ಜೀವ ತ್ಯಜಿಸುತ್ತಿರುವ ವ್ಯಕ್ತಿಗೆ ನಮಸ್ಕರಿಸುತ್ತಾನೆ ಮತ್ತು ಅವರನ್ನು ಶಿಕ್ಷಿಸುವುದಿಲ್ಲ ಎಂದು ಹೇಳಲಾಗಿದೆ. 
ಹೌದು, ಸಾವಿನ ನಂತರ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ, ಆದರೆ ಶಾಸ್ತ್ರಗಳ ಪ್ರಕಾರ, ನೀವು ಈ ಜನ್ಮದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಫಲ ಪಡೆಯುತ್ತೀರಿ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃ ಪಕ್ಷದಂದು ಶ್ರಾದ್ಧ, ತರ್ಪಣ ಮಾಡುವುದು ಬಹಳ ಮುಖ್ಯ. ಇದು ಪೂರ್ವಜರಿಗೆ ಸ್ವರ್ಗವನ್ನು ನೀಡುತ್ತದೆ.

28

ಆದರೆ ಕೆಲವು ವಿಷಯಗಳನ್ನು ಎಷ್ಟು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದರೆ ಅವು ಸಾವಿನ ಸಮಯದಲ್ಲಿ ಹತ್ತಿರದಲ್ಲಿದ್ದರೂ ಸತ್ತವರು ಸ್ವರ್ಗವನ್ನು ಪಡೆಯುತ್ತಾರೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಸಾಯುತ್ತಿರುವಾಗ ವ್ಯಕ್ತಿಯು ತನ್ನ ಬಳಿ ಕೆಲವು ವಿಶೇಷ ವಸ್ತುಗಳನ್ನು ಹೊಂದಿದ್ದರೆ, ಯಮರಾಜನು ಆತನನ್ನು ಕ್ಷಮಿಸುತ್ತಾನೆ ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

38
tulsi

tulsi

ತುಳಸಿ(basil)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮರಣದ ಸಮಯದಲ್ಲಿ ವ್ಯಕ್ತಿಯ ಸುತ್ತಲೂ ತುಳಸಿ ಗಿಡವಿದ್ದರೆ ಅಥವಾ ತುಳಸಿ ಎಲೆಗಳನ್ನು ಅವನ ಬಾಯಿ ಮತ್ತು ಹಣೆಯ ಮೇಲೆ ಇರಿಸಿದರೆ, ಸತ್ತವನು ಯಮಲೋಕಕ್ಕೆ ಹೋಗುವುದಿಲ್ಲ. ಅವನಿಗಾಗಿ ಸ್ವರ್ಗದ ದ್ವಾರಗಳು ತೆರೆದಿರುತ್ತವೆ.

48

ಗಂಗಾಜಲ(Gangajal)
ಗಂಗಾಜಲವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವು ಹತ್ತಿರವಾದಾಗ, ಅವನ ಬಾಯಿಯಲ್ಲಿ ಗಂಗಾಜಲವನ್ನು ಸುರಿಯಬೇಕು. ಹೀಗೆ ಮಾಡುವುದರಿಂದ ಅವನ ಪಾಪಗಳು ನಾಶವಾಗುತ್ತವೆ ಮತ್ತು ಅವನು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ. ಚಿತಾಭಸ್ಮವನ್ನು ಗಂಗೆಯಲ್ಲಿ ಮುಳುಗಿಸಿದರೂ ಸತ್ತವರಿಗೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆ ಇದೆ. ಎಲ್ಲಿಯವರೆಗೆ ಚಿತಾಭಸ್ಮವು ಗಂಗೆಯಲ್ಲಿ ಉಳಿಯುತ್ತದೆಯೋ ಅಲ್ಲಿಯವರೆಗೆ ಒಬ್ಬ ವ್ಯಕ್ತಿಯು ಸ್ವರ್ಗದ ಆನಂದವನ್ನು ಅನುಭವಿಸುತ್ತಾನೆ.

58

ಶ್ರೀ ಭಗವದ್ಗೀತೆ (Srimad Bhagavad Gita)
ಸಾವಿನ ಕೊನೆಯ ಕ್ಷಣಗಳಲ್ಲಿ ಶ್ರೀ ಭಗವತ್ ಅಥವಾ ಭಗವದ್ಗೀತೆಯ ಗ್ರಂಥವನ್ನು ಪಠಿಸುವ ಮೂಲಕ, ವ್ಯಕ್ತಿಯು ಎಲ್ಲಾ ಲೌಕಿಕ ಬಾಂಧವ್ಯದಿಂದ ಮುಕ್ತನಾಗುತ್ತಾನೆ.
 

68

ಎಳ್ಳು(Sesame)
ತಿಲಕ್ಕೆ ವಿಶೇಷ ಮಹತ್ವವಿದೆ. ಪೂರ್ವಜರಿಗೆ ಕಪ್ಪು ಎಳ್ಳು ಮಿಶ್ರಿತ ನೀರಿನಿಂದ ತರ್ಪಣವನ್ನು ನೀಡಲಾಗುತ್ತದೆ. ಆದ್ದರಿಂದ ಸಾಯುತ್ತಿರುವ ವ್ಯಕ್ತಿಗೆ ಕಪ್ಪು ಎಳ್ಳನ್ನು ಬಾಯಿಗೆ ಹಾಕಿದರೆ ಆ ವ್ಯಕ್ತಿಯಿಂದ ಭೂತಗಳು ಸದಾ ದೂರ ಇರುತ್ತವೆ. ಹಾಗೆಯೇ ಸಾಯುತ್ತಿರುವವರ ತಲೆಯ ಮೇಲೆ ಕಪ್ಪು ಎಳ್ಳನ್ನು ಇಡಬೇಕು.

78

ಒಳ್ಳೆಯ ಆಲೋಚನೆ(Good thoughts)
ಧರ್ಮಗ್ರಂಥಗಳ ಪ್ರಕಾರ, ಶಾಸ್ತ್ರಗಳ ಪ್ರಕಾರ, ಸಾವಿನ ಸಮೀಪಕ್ಕೆ ಬಂದ ವ್ಯಕ್ತಿ ಮತ್ತು ಅವರ ಸಮೀಪ ವಾಸಿಸುವ ಸಂಬಂಧಿಕರು ಸಹ ಅವರ ಆತ್ಮದ ಬಗ್ಗೆ ಒಳ್ಳೆಯ ಆಲೋಚನೆಗಳನ್ನು ಹೊಂದಿರಬೇಕು. ಆಗ ವ್ಯಕ್ತಿಯು ಸೀದಾ ಸ್ವರ್ಗಕ್ಕೆ ಪ್ರಯಾಣ ಬೆಳೆಸುತ್ತಾನೆ. 
 

88

ಕುಶ(Kush)
ಕುಶ ಎಂದರೆ ದರ್ಬೆ. ಹಿಂದೂ ಧರ್ಮದಲ್ಲಿ ಇದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ದರ್ಬೆಯು ವಿಷ್ಣುವಿನ ರೋಮದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಸಾಯುತ್ತಿರುವ ವ್ಯಕ್ತಿಯನ್ನು ಕುಶದ ಆಸನದ ಮೇಲೆ ಮಲಗಿಸಿದರೆ, ಆತ ಶ್ರಾದ್ಧ ಮಾಡದೆಯೂ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಾನೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved