MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ನವರಾತ್ರಿ ವೈಭವ: ಕುದ್ರೋಳಿ ಕಣ್ತುಂಬಿಕೊಳ್ಳಿ

ನವರಾತ್ರಿ ವೈಭವ: ಕುದ್ರೋಳಿ ಕಣ್ತುಂಬಿಕೊಳ್ಳಿ

ಮಂಗಳೂರು ದಸರಾಕ್ಕೆ ಮೆರುಗು ನೀಡುವುದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ. ಇಲ್ಲಿ ವೈಭವಯುತವಾಗಿ ದಸರಾ ನಡೆಸಲಾಗುತ್ತಿದ್ದು, ಈ ಬಾರಿ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕುದ್ರೋಳಿ ನವರಾತ್ರಿ ವೈಭವವನ್ನು ಕಣ್ತುಂಬಿಕೊಳ್ಳೋಣ ಬನ್ನಿ

2 Min read
Suvarna News
Published : Sep 27 2022, 10:08 AM IST| Updated : Sep 27 2022, 10:10 AM IST
Share this Photo Gallery
  • FB
  • TW
  • Linkdin
  • Whatsapp
110

ಮಂಗಳೂರು ದಸರಾಕ್ಕೆ ಮೆರುಗು ನೀಡುವುದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ. ಇಲ್ಲಿ ವೈಭವಯುತವಾಗಿ ದಸರಾ ನಡೆಸಲಾಗುತ್ತಿದ್ದು, ಈ ಬಾರಿ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕುದ್ರೋಳಿ ನವರಾತ್ರಿ ವೈಭವವನ್ನು ಕಣ್ತುಂಬಿಕೊಳ್ಳೋಣ ಬನ್ನಿ

210

ಕುದ್ರೋಳಿಯನ್ನು ಮೊದಲು ಕುದುರೆ-ಹಳ್ಳಿ ಎಂದು ಕರೆಯಲಾಗುತ್ತಿತ್ತು. ಅಲ್ಲಿ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನ ಸೈನ್ಯವು ಕುದುರೆ ಲಾಯ ಮತ್ತು ಹುಲ್ಲುಗಾವಲುಗಳನ್ನು ಹೊಂದಿತ್ತು. ಇದು ಕರ್ನಾಟಕದ ಪಶ್ಚಿಮ ಕರಾವಳಿ ಬೆಲ್ಟ್‌ನಲ್ಲಿರುವ ಮಂಗಳೂರು ನಗರದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. 

310

ಕುದ್ರೋಳಿಯು ಗೋಕರ್ಣನಾಥೇಶ್ವರ ದೇವಸ್ಥಾನಕ್ಕೂ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು 1912ರಲ್ಲಿ ಹೆಚ್.ಕೊರಗಪ್ಪ ಎಂಬ ಮಹಾನ್  ಶಿವಭಕ್ತ ಮತ್ತು ಉದ್ಯಮಿ ಕುದುರೆಗಳು ಮೇಯುತ್ತಿದ್ದ ಹುಲ್ಲುಗಾವಲಿನಲ್ಲಿ ನಿರ್ಮಿಸಿದರು.

 

410

ಕುದ್ರೋಳಿ ದೇವಸ್ಥಾನ ಮಂಗಳೂರು ಪ್ರವಾಸಿಗರನ್ನು ತನ್ನ ಪರಿಶುದ್ಧವಾದ ಮತ್ತು ವಿಸ್ತಾರವಾದ ಪರಿಸರದಿಂದ ಆಕರ್ಷಿಸುತ್ತದೆ. ಮಧ್ಯಾಹ್ನದ ಸೂರ್ಯನ ಕಿರಣಗಳು ಬೀಳುತ್ತಿದ್ದಂತೆ ದೇವಾಲಯದ ಗೋಪುರವು ಅದರ ಚಿನ್ನದ ಲೇಪನದಿಂದ ಹೊಳೆಯುತ್ತದೆ.
 

510

ಕುದ್ರೋಳಿ ಗೋಕರ್ಣನಾಥ ದೇವಾಲಯವು ಮೂಲತಃ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿದ್ದ ನಾಥ ಸಂಪ್ರದಾಯಕ್ಕೆ ಅನುಗುಣವಾಗಿ ಶಿವನಿಗಾಗಿ ನಿರ್ಮಿಸಲ್ಪಟ್ಟಿದೆ. ನಾಥ ಸಂಪ್ರದಾಯವನ್ನು ಮತ್ಸ್ಯೇಂದ್ರನಾಥ್ ಸ್ಥಾಪಿಸಿದರು.

610

1989ರಿಂದ, ಮಂಗಳೂರಿನಲ್ಲಿ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವಲ್ಲಿ ದೇವಾಲಯವು ಪ್ರಮುಖ ಪಾತ್ರ ವಹಿಸಿದೆ. ಈ ಬಾರಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಮಹೋತ್ಸವ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 6ರವರೆಗೆ ನಡೆಯಲಿದೆ.

 

710

ರಾಜ್ಯದ ವಿವಿಧ ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಜನರು ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆ ನಡೆದಿದೆ.

810

ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶದ ಜನರು ತಮ್ಮ ಮನೆ ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. ಮಂಗಳೂರಿನ ಬಹುತೇಕ ರಸ್ತೆಗಳಾದ M.G ರಸ್ತೆ, K.S. ರಾವ್ ರಸ್ತೆ, GHS ರಸ್ತೆಗಳು ದೀಪಗಳು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲ್ಪಟ್ಟಿವೆ.

910

ನವರಾತ್ರಿಯ ಸಮಯದಲ್ಲಿ ಶಾರದಾ ದೇವಿಯ ಜೊತೆಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು ವೈದಿಕ ಆಚರಣೆಗಳ ನಡುವೆ ಸ್ಥಾಪಿಸುತ್ತಾರೆ. ಈ ಒಂಬತ್ತು ದಿನಗಳ ಆಚರಣೆಯಲ್ಲಿ ಮಹಾಗಣಪತಿ ಮತ್ತು ನವದುರ್ಗೆಯರ ಜೊತೆಗೆ ಶಾರದಾದೇವಿಯ ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ.

 

1010

ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರುಗಳ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ. ನವರಾತ್ರಿಯ ದಿನದಲ್ಲಿ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಹತ್ತನೇ ದಿನ ಅಂದ್ರೆ ಅಕ್ಟೋಬರ್ 5 ರಂದು ನಗರದ 7 ಕಿಲೋಮೀಟರ್ ರಾಜರಸ್ತೆಯಲ್ಲಿ ದಸರಾ ಮೆರವಣಿಗೆ ನಡೆಸಿ ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುತ್ತದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved