MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಹಾ ಶಿವರಾತ್ರಿ ಉತ್ಸವ, 1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗ ಅನಾವರಣ

ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಹಾ ಶಿವರಾತ್ರಿ ಉತ್ಸವ, 1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗ ಅನಾವರಣ

 1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್  ಅನಾವರಣಗೊಳಿಸಿದರು.          

3 Min read
Sushma Hegde
Published : Feb 27 2025, 02:48 PM IST
Share this Photo Gallery
  • FB
  • TW
  • Linkdin
  • Whatsapp
16

26, ಫೆಬ್ರವರಿ 2025, ಬೆಂಗಳೂರು: ಭವ್ಯವಾದ ವಿಶಾಲಾಕ್ಷಿ ಮಂಟಪದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಮಹಾಶಿವರಾತ್ರಿಯ ಸಂಭ್ರಮದಲ್ಲಿ ಆಧ್ಯಾತ್ಮಿಕತೆಯ ಮೆರುಗು ಮುಗಿಲು ಮುಟ್ಟಿತು. ಕಾಲದ ಘಟ್ಟದಲ್ಲಿ ಕಳೆದೇ ಹೋಯಿತು ಎಂದು ಭಾವಿಸಿದ್ದ ಭಾರತದ ವೈಭವಯುತವಾದ ಇತಿಹಾಸ ಅನಾವರಣಗೊಂಡಿತು. 180 ದೇಶಗಳ ಲಕ್ಷಾಂತರ ಜನರನ್ನು ಆಳವಾದ ಭಕ್ತಿ ಭಾವದ ಕ್ಷಣಕ್ಕೆ ಕರೆದೊಯ್ಯಿತು. ಈ ಸಂದರ್ಭದಲ್ಲಿ ಕೇಂದ್ರದ ರಾಜ್ಯ ನ್ಯಾಯ ಮತ್ತು ಕಾನೂನು ಮಂತ್ರಿ, ಸಂಸತ್ತಿನ ವ್ಯವಹಾರಗಳ ಮಂತ್ರಿಗಳಾದ ಸನ್ಮಾನ್ಯ ಅರ್ಜುನ್ ರಾಮ್ ಮೇಘ್ ವಾಲ್ ರವರೂ ಉಪಸ್ಥಿತರಾಗಿದ್ದರು. 
 

26

ಈ ಸಂದರ್ಭದಲ್ಲಿ ಮಾತನಾಡುತ್ತಾ ಗುರುದೇವರು, "ಈಗ ಇರುವುದೆಲ್ಲದರ, ಹಿಂದೆ ಇದ್ದ ಮತ್ತು ಮುಂದೆ ಇರಲಿರುವ ಎಲ್ಲದರ ಸಾರವೇ ಶಿವನು. ಶಿವರಾತ್ರಿಯಂದು ಶರಣಾಗಿ ಇಡೀ ಅಸ್ತಿತ್ವದೊಡನೆ ಒಂದಾಗಿರುವಂತೆ ಭಾವಿಸಿ. ನೀವು ಹೇಗೇ ಇರಲಿ ಶಿವನು ನಿಮ್ಮನ್ನು ಆಲಂಗಿಸುತ್ತಾನೆ. ನೀವು ಶಿವನೊಳಗೆ ಕುಳಿತಿರುವಂತೆ ಭಾವಿಸಿ. ಶಿವನಿಗೆ ಐದು ಗುಣಲಕ್ಷಣಗಳಿವೆ - ಸೃಷ್ಟಿ, ಪಾಲನೆ, ಪರಿವರ್ತನೆ, ಅನುಗ್ರಹ ಮತ್ತು ತಿರೋಭಾವ, ಎಂದರೆ ಮರೆಯಾಗಿರುವುದು. ಶಿವರಾತ್ರಿಯು, ನಮ್ಮ ಮೇಲೆ ಆಶೀರ್ವಾದವಿದೆಯೆಂಬ ಭಾವದೊಂದಿಗೆ, ದೈವೀ ಶಕ್ತಿಯ ತರಂಗಗಳನ್ನು ಅನುಭವಿಸಿ ನಮ್ಮ ಆಂತರ್ಯದೊಳಗೆ ಹೊಕ್ಕುವ ಸಮಯ" ಎಂದರು. 

ಈ ಶಿವರಾತ್ರಿಯ ಅತೀ ವಿಶೇಷವಾದ ಸಂಗತಿಯೆಂದರೆ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅವಶೇಷಗಳ ವಿರಳವಾದ ದರ್ಶನ. 12 ಜ್ಯೋತಿರ್ಲಿಂಗಗಳಲ್ಲಿ ಪ್ರಥಮನಾದ ಸೋಮನಾಥನು ತನ್ನ ದಿವ್ಯತೆಯಿಂದ ಸದಾ ಎಲ್ಲರಲ್ಲೂ ಭಕ್ತಿಭಾವವನ್ನು ಮೂಡಿಸಿದ್ದಾನೆ. ಪ್ರಾಚೀನ ಗ್ರಂಥಗಳು, ಈ ಲಿಂಗಕ್ಕೆ ಗುರುತ್ವಾಕರ್ಷಣವನ್ನು ಭೇದಿಸಿ, ಭೂಮಿಯಿಂದ ಎರಡು ಅಡಿಗಳಷ್ಟು ಎತ್ತರದಲ್ಲಿ  ತೇಲುವ ಸಾಮರ್ಥ್ಯವಿತ್ತೆಂದು ಹೇಳುತ್ತವೆ!!    
 

36

ಸೋಮನಾಥನ ದೇವಸ್ಥಾನ ಮತ್ತು ಅದರ ಜ್ಯೋತಿರ್ಲಿಂಗವನ್ನು ಮಹ್ಮದ್ ಘಜ್ನಿಯು ನಾಶ ಮಾಡಿದಾಗ, ಕೆಲವು ಅಗ್ನಿಹೋತ್ರಿ ಬ್ರಾಹ್ಮಣರು ಮುರಿದ ಅವಶೇಷಗಳನ್ನು ತಮ್ಮೊಂದಿಗೆ ತಮಿಳುನಾಡಿಗೆ ತಂದು, ಅವುಗಳಿಗೆ  ಸಣ್ಣ ಶಿವಲಿಂಗಗಳ ಆಕಾರವನ್ನು ನೀಡಿ, ರಹಸ್ಯವಾಗಿ ಅವುಗಳನ್ನು ಪೂಜಿಸುತ್ತಾ, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅದನ್ನು ವರ್ಗಾಯಿಸುತ್ತಾ ಬಂದರು. ಒಂದು ಶತಕದ ಹಿಂದೆ ಸಂತ ಶ್ರೀ ಪ್ರಣವೇಂದ್ರ ಸರಸ್ವತಿಯವರು ಅವುಗಳನ್ನು ಕಂಚಿಯ ಶಂಕರಾಚಾರ್ಯರಾಗಿದ್ದ ಸ್ವಾಮಿ ಶ್ರೀ ಚಂದ್ರಶೇಖರ ಸರಸ್ವತಿಯವರ ಬಳಿಗೆ ಕೊಂಡೊಯ್ದಾಗ ಅವರು, ಇವುಗಳನ್ನು ಇನ್ನೂ ನೂರು ವರ್ಷಗಳವರೆಗೆ ಮುಚ್ಚಿಡಬೇಕೆಂದರು. ಆ ಕ್ಷಣವೂ ಈಗ ಬಂದು, ಅದರ ಈಗಿನ ಸಂರಕ್ಷಕರಾದ ಪಂಡಿತ್ ಸೀತಾರಾಮ್ ಶಾಸ್ತ್ರಿಗಳು ಈಗಿನ ಕಂಚಿ ಶಂಕರಾಚಾರ್ಯರ ಸಲಹೆಯನ್ನು ಕೇಳಿದರು. ಅವರು, ಪರಮಾಚಾರ್ಯರು ಹೇಳಿದಂತೆಯೇ, "ಬೆಂಗಳೂರಿನ ಸಂತರಾದ ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರ ಬಳಿಗೆ ತೆಗೆದುಕೊಂಡು ಹೋಗು" ಎಂದರು.  ಜನವರಿ 2025 ರಲ್ಲಿ ಈ ಪವಿತ್ರವಾದ ಅವಶೇಷಗಳನ್ನು ಗುರುದೇವರ ಕೈಗೆ ಒಪ್ಪಿಸಲಾಯಿತು. ಇದರ ಪಾವಿತ್ರ್ಯತೆಯನ್ನು ಅರಿತ ಗುರುದೇವರು, ಅದರ ದರ್ಶನದ ಅವಕಾಶವನ್ನು ಸರ್ವರಿಗೂ ನೀಡಿ, ಸನಾತನ ಧರ್ಮದೊಂದಿಗೆ ಪುನಃ ಸಂಬಂಧವನ್ನು ಕಲ್ಪಿಸಿಕೊಳ್ಳುವ ಅವಕಾಶವನ್ನು ನೀಡಿದ್ದಾರೆ. 

46

ಗುರುದೇವರು, "ಈ ಪವಿತ್ರವಾದ ಅವಶೇಷಗಳನ್ನು ಪುನಃ ಪಡೆದಿರುವುದು, ಕೇವಲ ನಮ್ಮ ಇತಿಹಾಸವನ್ನು ಮರಳಿ ಪಡೆದಂತಲ್ಲ; ನಮ್ಮ ನಾಗರಿಕತೆಯ ಸ್ಫೂರ್ತಿಯನ್ನು ಮರಳಿ ಪಡೆದಂತೆಯೇ ಇದು. ನಮ್ಮ ಸನಾತನ ಧರ್ಮದ ಅನಂತ ಸ್ವಭಾವವನ್ನು ಇದು ಎತ್ತಿ ತೋರಿಸುತ್ತದೆ. ಇದು ಕೇವಲ ಗತದ ಅವಶೇಷಗಳಾಗಿರದೆ, ಈಗ ಜೀವಂತವಾಗಿ ಉಸಿರಾಡುತ್ತಿರುವ ನಮ್ಮ ಭವ್ಯ ಪರಂಪರೆ. ಇದು ಎಲ್ಲಾ ಕಾಲಘಟ್ಟಗಳಲ್ಲೂ ವಿಕಸನಗೊಳ್ಳುತ್ತಾ, ಪ್ರಗತಿ ಹೊಂದುತ್ತಾ ಮುಂದುವರಿಯುತ್ತಲೇ ಇರುವಂತದ್ದು" ಎನ್ನುತ್ತಾರೆ.
 

56

ಮಧ್ಯರಾತ್ರಿಯಲ್ಲಿ ಬೆಂಗಳೂರಿನ ಆಶ್ರಮವು "ಓಂ ನಮಃ ಶಿವಾಯ" ಮಂತ್ರಘೋಷದಿಂದ ಮೊಳಗುತ್ತಿತ್ತು. ಎಲ್ಲರಿಗೂ ಗುರುದೇವರು ಮಧ್ಯರಾತ್ರಿಯ ಧ್ಯಾನವನ್ನು ಮಾಡಿಸಿದರು. ರುದ್ರಪಠಣ, ವೇದಘೋಷಗಳು ಭಕ್ತಿ ಸಂಗೀತ ಜಗತ್ತಿನ ಎಲ್ಲಾ ಮೂಲೆಗಳ ಭಕ್ತರನ್ನೂ ಒಂದಾಗಿಸಿತು.

ಈ ಅಭೂತಪೂರ್ವ ಶಿವರಾತ್ರಿಯಂದು ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶಿತಗೊಂಡ ರಾಜಾ ಕುಮಾರಿಯವರು ತಮ್ಮ ಭಕ್ತಿಸಂಗೀತವನ್ನು, ಸಾಧೋ, ಅಭಂಗ ರೀಪೋಸ್ಟ್ ಮತ್ತು ನಿರ್ವಾಣಾ ಸ್ಟೇಷನ್ ರವರೊಡನೆ ಜನರ ಮನರಂಜಿಸಿದರು. ಈ ಸಂಗೀತಗಾರರೆಲ್ಲರೂ ಕಾಲಾತೀತವಾದ ಭಕ್ತಿ ಸಂಗೀತಕ್ಕೆ ಆಧುನಿಕ ಅಭಿವ್ಯಕ್ತಿಯನ್ನು ನೀಡುತ್ತಿದ್ದಾರೆ.  


 

66

ಆಶ್ರಮದೊಳಗಿನ ಪವಿತ್ರ ಶಿವ ದೇವಾಲಯದಲ್ಲಿ ಲಕ್ಷಾಂತರ ಭಕ್ತರಿಂದ ಅಭಿಷೇಕ ನಡೆಯುವ ಮೂಲಕ ಶಿವರಾತ್ರಿಯ ದಿನ ಆರಂಭವಾಯಿತು ಮತ್ತು ಉತ್ಸವ ಆಚರಣೆಯುದ್ದಕ್ಕೂ ಸ್ವಯಂಸೇವಕರು ಬಂದಿದ್ದ ಎಲ್ಲಾ ಭಕ್ತರಿಗೂ ನಿರಂತರವಾಗಿ ಪ್ರಸಾದ ವಿತರಣೆಯನ್ನು  ನೆರವೇರಿಸಿದರು. ರಾತ್ರಿಯು ನಿಶ್ಚಲತೆಯಲ್ಲಿ ಅಂತ್ಯವಾಗುತ್ತಿದ್ದಂತೆ, ಸಾಧಕರು ಶಿವಪ್ರಜ್ಞೆಯ ಕೃಪೆಯಲ್ಲಿ ಮುಳುಗಿದರು, ಅವರ ಹೃದಯಗಳು ಭಕ್ತಿ ಮತ್ತು ಕೃತಜ್ಞತೆಯಿಂದ ತುಂಬಿದ್ದವು. ಇದು ಕೇವಲ ಒಂದು ಹಬ್ಬವಾಗಿರದೆ, ನವೀನ ಇತಿಹಾಸ ಸೃಷ್ಟಿಯ ಸಮಯವಾಗಿತ್ತು. ಪವಿತ್ರ ಜ್ಯೋತಿರ್ಲಿಂಗದ ಪುನಃ ಪ್ರತಿಷ್ಠಾಪನೆ ಸೋಮನಾಥದಲ್ಲಿ ನೆರವೇರುವ ಮೊದಲು ನಡೆದ ಈ ಮಹಾಶಿವರಾತ್ರಿಯು ಶ್ರದ್ಧೆ, ಭಕ್ತಿ ಮತ್ತು ಸನಾತನ ಧರ್ಮದ ಶಾಶ್ವತ ಶಕ್ತಿಗೆ ಸಾಕ್ಷಿಯಾಯಿತು.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 4ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಇದೆ. ಜ್ಯೋತಿಷ್ಯ, ಲೈಫ್‌ಸ್ಟೈಲ್‌ ನೆಚ್ಚಿನ ಕ್ಷೇತ್ರ. ಉತ್ತರ ಕನ್ನಡದ ಹುಡುಗಿ. ಚಿತ್ರಕಲೆ ಪಂಚಪ್ರಾಣ. ಓದು, ಪ್ರಕೃತಿ ಸೌಂದರ್ಯ ಸವಿಯುವುದು ಇಷ್ಟ.
ಆರ್ಟ್ ಆಫ್ ಲಿವಿಂಗ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved