MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ದೇವರಿಗೆ ತೆಂಗಿನಕಾಯಿ ಅರ್ಪಿಸುವುದೇಕೆ?

ದೇವರಿಗೆ ತೆಂಗಿನಕಾಯಿ ಅರ್ಪಿಸುವುದೇಕೆ?

ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಪೂಜಾ ನಿಯಮಗಳಿವೆ. ಇದರೊಂದಿಗೆ ವಿವಿಧ ದೇವತೆಗಳನ್ನು ಪೂಜಿಸುವ ವಿಧಾನದಲ್ಲಿ ವ್ಯತ್ಯಾಸವಿದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ವಾರದ ಪ್ರತಿ ದಿನವನ್ನು ಒಂದಿಲ್ಲೊಂದು ದೇವರಿಗೆ ಸಮರ್ಪಿಸಲಾಗಿದೆ. 

1 Min read
Sushma Hegde
Published : May 09 2025, 05:07 PM IST
Share this Photo Gallery
  • FB
  • TW
  • Linkdin
  • Whatsapp
14

ಪುರಾಣದ ನಂಬಿಕೆಯ ಪ್ರಕಾರ, ಭಗವಾನ್ ವಿಷ್ಣುವು ಭೂಮಿಯ ಮೇಲೆ ಅವತರಿಸಿದಾಗ, ಅವನು ತನ್ನೊಂದಿಗೆ ತಾಯಿ ಲಕ್ಷ್ಮಿ, ತೆಂಗಿನ ಮರ ಮತ್ತು ಹಸು ಕಾಮಧೇನುವನ್ನು ತಂದನು. ಹಾಗಾಗಿ ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ತ್ರಿದೇವ ಬ್ರಹ್ಮ, ವಿಷ್ಣು ಮತ್ತು ಮಹೇಶ ಇದರಲ್ಲಿ ನೆಲೆಸಿದ್ದಾರೆ. ತೆಂಗಿನಕಾಯಿಯ ಮೇಲಿನ ಮೂರು ರಂಧ್ರವನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಬಿಳಿಭಾಗವು ದೇವಿ ಪಾರ್ವತಿಯನ್ನು ಸಂಕೇತಿಸುತ್ತದೆ, ನೀರು ಗಂಗೆಯನ್ನು ಸೂಚಿಸುತ್ತದೆ ಮತ್ತು ಕಂದು ಬಣ್ಣದ ಚಿಪ್ಪು ಭಗವಂತ ಕಾರ್ತಿಕೇಯನನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತದೆ. 
 

24

ತೆಂಗಿನಕಾಯಿಯ ಬಗೆಗಿನ ಇನ್ನೊಂದು ನಂಬಿಕೆಯೆಂದರೆ, ತೆಂಗಿನಕಾಯಿಯನ್ನು ಮಾನವ ರೂಪದಲ್ಲಿ ವಿಶ್ವಾಮಿತ್ರನು ಸಿದ್ಧಪಡಿಸಿದನು. ಒಮ್ಮೆ ವಿಶ್ವಾಮಿತ್ರರು ಇಂದ್ರನ ಮೇಲೆ ಕೋಪಗೊಂಡು ಮತ್ತೊಂದು ಸ್ವರ್ಗವನ್ನು ನಿರ್ಮಿಸಲು ಪ್ರಾರಂಭಿಸಿದರು. ಎರಡನೆಯ ಪ್ರಪಂಚವನ್ನು ರಚಿಸುವಾಗ, ಅವರು ತೆಂಗಿನಕಾಯಿಯನ್ನು ಮಾನವ ರೂಪದಲ್ಲಿ ರಚಿಸಿದರು. ಅದಕ್ಕಾಗಿಯೇ ತೆಂಗಿನ ಚಿಪ್ಪಿನ ಹೊರಭಾಗದಲ್ಲಿ ಎರಡು ಕಣ್ಣುಗಳು ಮತ್ತು ಬಾಯಿಯ ವಿನ್ಯಾಸವಿದೆ. ಇದರ ಮೇಲಿನ ನಾರನ್ನು ಮನುಷ್ಯರ ಕೂದಲಿಗೆ, ಚಿಪ್ಪನ್ನು ಅಸ್ಥಿಪಂಜರಕ್ಕೆ, ನೀರನ್ನು ರಕ್ತಕ್ಕೆ ಹಾಗೂ ಕಾಯಿಯನ್ನು ನಮ್ಮ ಮಾಂಸಕ್ಕೆ ಹೋಲಿಸಲಾಗುತ್ತದೆ. ಹಾಗಾಗಿ, ತೆಂಗಿನಕಾಯಿ ಅರ್ಪಿಸುವುದೆಂದರೆ ನಮ್ಮನ್ನೇ ನಾವು ದೇವರಿಗೆ ಸಮರ್ಪಿಸಿಕೊಂಡಂತೆ ಎಂಬ ಸೂಚ್ಯಾರ್ಥವೂ ಇದೆ. 

Related Articles

Related image1
ಈ 4 ರಾಶಿಗೆ ಒಂಟಿ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ
Related image2
ಆ ಎರಡು ಗ್ರಹ ಪರಿವರ್ತನೆಯಿಂದ ಅದೃಷ್ಟವೋ, ಅದೃಷ್ಟ, ಮೂರು ದಿನಗಳಲ್ಲಿ ಅನಿರೀಕ್ಷಿತ ಸಂಪತ್ತು, ಹಣ
34

ತೆಂಗಿನಕಾಯಿಯನ್ನು ಶ್ರೀ ಫಲ ಎಂದು ಕರೆಯಲಾಗುತ್ತದೆ. ಶ್ರೀ ಫಲ ಎಂದರೆ ಮಾ ಲಕ್ಷ್ಮಿ. ಆದರೆ ವಿವಿಧ ಸಮಯಗಳಲ್ಲಿ ತೆಂಗಿನಕಾಯಿಯನ್ನು ಅರ್ಪಿಸುವುದು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಸಾತ್ವಿಕ ಪೂಜೆಯಲ್ಲಿ ತೆಂಗಿನಕಾಯಿಯ ಆಯ್ಕೆ ಅಗತ್ಯ. ಪೂಜೆಯಲ್ಲಿ ಹಸಿರು ತೆಂಗಿನಕಾಯಿಯನ್ನು ಬಳಸುವುದಿಲ್ಲ. ಇದನ್ನು ಪಾನೀಯವಾಗಿ ಮಾತ್ರ ಬಳಸಲಾಗುತ್ತದೆ.
 

44

ಬಾಬಾ ಭೈರವನಿಗೆ ತೆಂಗಿನಕಾಯಿಯನ್ನು ಅರ್ಪಿಸಿದಾಗ ಅದನ್ನು ಒಡೆದು ಅದರ ನಡುವೆ ಕುಂಕುಮ, ಕರಿಮೆಣಸು ಮತ್ತು ಲವಂಗ ಇತ್ಯಾದಿ ಅಥವಾ ನಾವು ನೀಡುವ ಪ್ರಸಾದವನ್ನು ಹಾಕಲಾಗುತ್ತದೆ.
ತೆಂಗಿನಕಾಯಿಯನ್ನು ಒಡೆದು ವಿಷ್ಣು ಮತ್ತು ಲಕ್ಷ್ಮೀಗೆ ಎಂದೂ ಅರ್ಪಿಸಬಾರದು. ನೀವು ಸಂಪೂರ್ಣ ತೆಂಗಿನಕಾಯಿಯನ್ನು ನೀಡಬಹುದು. ಜಟಾ ತೆಂಗಿನಕಾಯಿಯನ್ನು ಎಲ್ಲಾ ತಾಮಸಿಕ ದೇವತೆಗಳಿಗೆ ಮತ್ತು ಆಂಜನೇಯನಿಗೆ ಅರ್ಪಿಸಬಹುದು.
 

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 4ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಇದೆ. ಜ್ಯೋತಿಷ್ಯ, ಲೈಫ್‌ಸ್ಟೈಲ್‌ ನೆಚ್ಚಿನ ಕ್ಷೇತ್ರ. ಉತ್ತರ ಕನ್ನಡದ ಹುಡುಗಿ. ಚಿತ್ರಕಲೆ ಪಂಚಪ್ರಾಣ. ಓದು, ಪ್ರಕೃತಿ ಸೌಂದರ್ಯ ಸವಿಯುವುದು ಇಷ್ಟ.
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved