MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Chanakya Niti : ನೀವು ಖುಷಿಯಾಗಿರಿ, ಬೇಜಾರಾಗಿರಿ, ಆದ್ರೆ ಈ ಕೆಲಸ ಅಂತೂ ಮಾಡ್ಲೇ ಬೇಡಿ…

Chanakya Niti : ನೀವು ಖುಷಿಯಾಗಿರಿ, ಬೇಜಾರಾಗಿರಿ, ಆದ್ರೆ ಈ ಕೆಲಸ ಅಂತೂ ಮಾಡ್ಲೇ ಬೇಡಿ…

ಆಚಾರ್ಯ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಕೆಲವೊಂದು ವಿಷಯಗಳನ್ನು ತಿಳಿಸಿದ್ದಾರೆ. ಅದು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಚಾಣಕ್ಯ ತಿಳಿಸಿರುವಂತೆ ನಮ್ಮ ಜೀವನದಲ್ಲಿ ಒಳ್ಳೆಯದಾಗಲಿ ಅಥವಾ ಕೆಟ್ಟದೇ ಆಗಲಿ, ಯಾವತ್ತೂ ಈ ಮೂರು ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ. ಅದು ಯಾವುದು ತಿಳಿಯೋಣ. 

2 Min read
Author : Suvarna News
Published : Apr 20 2023, 06:17 PM IST
Share this Photo Gallery
  • FB
  • TW
  • Linkdin
  • Whatsapp
18

ಆಚಾರ್ಯ ಚಾಣಕ್ಯ (Acharya Chanakya) ಜನಪ್ರಿಯ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ತಂತ್ರಜ್ಞ. ಅವರು ಅನೇಕ ವಿಷಯಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದಾರೆ. ಅವರ ಅನುಭವಗಳ ಆಧಾರದ ಮೇಲೆ ಚಾಣಕ್ಯ ನೀತಿಯನ್ನು ಮಾಡಿದ್ದಾರೆ. ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಇಂತಹ ಅನೇಕ ವಿಷಯ ಮತ್ತು ನೀತಿಗಳನ್ನು ಉಲ್ಲೇಖಿಸಿದ್ದಾನೆ.

28

ಜೀವನದ(Life) ಕೆಲವು ನಿಯಮಗಳನ್ನು ಸಹ ಬಹಿರಂಗವಾಗಿ ಹೇಳಲಾಗಿದೆ. ಆಚಾರ್ಯ ಚಾಣಕ್ಯ ಹೇಳುವಂತೆ ವ್ಯಕ್ತಿಯ ಜೀವನದಲ್ಲಿ ಕೆಲವೊಮ್ಮೆ ಸಂತೋಷ ಮತ್ತು ಕೆಲವೊಮ್ಮೆ ದುಃಖವಿರುತ್ತೆ. ಹಾಗಾಗಿ, ಸಂತೋಷವಾಗಿರುವಾಗ ಅದನ್ನು ಹೆಚ್ಚು ವ್ಯಕ್ತಪಡಿಸಬೇಡಿ ಮತ್ತು  ದುಃಖಿತರಾಗಿದ್ದರೂ ಸಹ ಯಾವುದೇ ಭರವಸೆಯನ್ನು ನೀಡಬೇಡಿ.
 

38

ಏಕೆಂದರೆ ಜೀವನದಲ್ಲಿ ಸಂತೋಷ ಮತ್ತು ದುಃಖ (Sadness) ಬರುತ್ತೆ, ಹೋಗುತ್ತೆ, ಆದರೆ ಈ ಸಮಯದಲ್ಲಿ ಮಾಡಿದ ಕೆಲವು ಕೆಲಸಗಳು ಜೀವನದಲ್ಲಿ ಬಹಳ ಆಳವಾದ ಪರಿಣಾಮ ಬೀರುತ್ತವೆ. ಹಾಗಾದರೆ ನಮ್ಮ ಜೀವನದಲ್ಲಿ ಒಳ್ಳೆಯದು ಅಥವಾ ಕೆಟ್ಟ ಸಮಯ ಏನೇ ಬರಲಿ, ಯಾವ ಕೆಲಸವನ್ನು  ಮಾಡಲೇಬಾರದು ಅನ್ನೋದನ್ನು ನೋಡೋಣ. 
 

48

ಸಂತೋಷವಾಗಿರುವಾಗ(Happiness) ಯಾವುದೇ ಭರವಸೆಗಳನ್ನು ನೀಡಬೇಡಿ -
ಆಚಾರ್ಯ ಚಾಣಕ್ಯನು ಹೇಳುವಂತೆ ಒಬ್ಬ ವ್ಯಕ್ತಿಯ ಜೀವನದಲ್ಲಿ  ಸಂತೋಷಕ್ಕೆ ಅವಕಾಶವಿದ್ದರೆ, ಅದನ್ನು ಹೆಚ್ಚು ವ್ಯಕ್ತಪಡಿಸಬಾರದು. ಸಂತೋಷವಾಗಿರುವಾಗ, ನೀವು ಯಾವುದೇ  ವಾಗ್ದಾನವನ್ನು ಸಹ ನೀಡಬೇಡ. ಇದರಿಂದ ಮುಂದೆ ನೀವೇ ನೋವು ಅನುಭವಿಸಬೇಕಾಗಿ ಬರಬಹುದು.
 

58

ಸಂತೋಷದ ಸಂದರ್ಭದಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಯಾಕಂದ್ರೆ ಕೆಲವೊಮ್ಮೆ ಸಂತೋಷವು ಅಂತಹ ಭರವಸೆಯನ್ನು, ವಾಗ್ದಾನವನ್ನು ನೀಡಲು ಪ್ರೇರೇಪಿಸುತ್ತೆ, ಇದರಿಂದಾಗಿ  ನಂತರ ನಷ್ಟವನ್ನು(Loss) ಅನುಭವಿಸಬೇಕಾಗುತ್ತೆ. ಆದುದರಿಂದಾ ಭರವಸೆ ನೀಡುವಾಗ ಯೋಚನೆ ಮಾಡಿ ಭರವಸೆ ನೀಡಿ. 
 

68

ದುಃಖದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳೋದನ್ನು ತಪ್ಪಿಸಿ - 
ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ದುಃಖ ಅಥವಾ ಕೆಟ್ಟ ಸಮಯವಿದ್ದರೆ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಕೆಟ್ಟ ಸಮಯ ಬಂದಾಗ, ವ್ಯಕ್ತಿಯು ಯೋಚಿಸುವ ಶಕ್ತಿಯನ್ನು(Thinking power) ಕಳೆದುಕೊಳ್ಳುತ್ತಾನೆ. ಹಾಗಾಗಿ, ಈ ಸಮಯದಲ್ಲಿ ತೆಗೆದುಕೊಂಡ ನಿರ್ಧಾರವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ದುಃಖದ ಸಮಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರೋದು ಉತ್ತಮ.

78

ಕೋಪದಲ್ಲಿ(Angry ಉತ್ತರ ನೀಡೋದು 
ಒಬ್ಬ ವ್ಯಕ್ತಿ ಕೋಪಗೊಂಡಾಗ, ಅವನು ಸರಿ ಮತ್ತು ತಪ್ಪುಗಳ ಪ್ರಜ್ಞೆ ಕಳೆದುಕೊಳ್ಳುತ್ತಾನೆ ಮತ್ತು ಅಂತಹ ಸಂದರ್ಭದಲ್ಲಿ ಕೆಲವು ವಿಷಯಗಳು ಅವನ ನಾಲಿಗೆಯಿಂದ ಹೊರಬರುತ್ತವೆ, ಅದು ಜೀವನದುದ್ದಕ್ಕೂ ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತೆ.

88

ಜೀವನದ ಯಾವುದೇ ಸಂದರ್ಭದಲ್ಲಿ ಕೋಪಗೊಂಡಾಗ, ವ್ಯಕ್ತಿ ತನ್ನ ಬಾಯಿಯನ್ನು ಲಾಕ್ (Lock) ಮಾಡಬೇಕು. ಉತ್ತಮ ಪರಿಹಾರವೆಂದರೆ ಕೋಪದ ಸಂದರ್ಭದಲ್ಲಿ ಪ್ರತಿಕ್ರಿಯಿಸದಿರೋದು ಮತ್ತು ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನೀವು ಶಾಂತವಾಗಿಡಲು ಪ್ರಯತ್ನಿಸಿ. ಇದರಿಂದ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತೆ. 

About the Author

SN
Suvarna News
ಚಾಣಕ್ಯ ನೀತಿ

Latest Videos
Recommended Stories
Recommended image1
ನಾಳೆ ಫೆಬ್ರವರಿ 26 ರಂದು ಕುಂಭ ರಾಶಿಯಲ್ಲಿ ಬುಧ ಹಿಮ್ಮುಖ, ನಾಳೆಯಿಂದ ಈ 3 ರಾಶಿಗೆ ಹಣ ಮತ್ತು ಸಮೃದ್ಧಿ
Recommended image2
ಮುಂದಿನ 8 ದಿನಗಳವರೆಗೆ 5 ರಾಶಿಗೆ ಕಷ್ಟ-ನಷ್ಟ, 9 ಗ್ರಹಗಳು ತೀವ್ರ ಕೋಪದಿಂದ ವಿಪತ್ತು
Recommended image3
ಆರ್ಥಿಕ ಲಾಭದಿಂದ ದ್ವಿಗುಣ ಪ್ರಗತಿ, ಮಾರ್ಚ್‌ನಲ್ಲಿ ಶನಿಗ್ರಹ ಅಸ್ತಮದಿಂದ 3 ರಾಶಿಗೆ ಕೋಟ್ಯಾಧಿಪತಿಯಾಗುವ ಯೋಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved