ಶತ್ರುಗಳಿಗೆ ಇವರೇ ಯಮ: ರಾಹು ಪ್ರಭಾವದ 4ನೇ ಸಂಖ್ಯೆಯವರ ಸೀಕ್ರೆಟ್ ಪವರ್ ಏನು ಗೊತ್ತಾ?
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 4, 13, 22, 31ನೇ ತಾರೀಖಿನಂದು ಜನಿಸಿದವರು ರಾಹುವಿನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಇವರ ವ್ಯಕ್ತಿತ್ವ ಹಾಗೂ ಇವರಲ್ಲಿ ಅಡಗಿರುವ 'ರಹಸ್ಯ ಶಕ್ತಿ' ಬಗ್ಗೆ ಇಲ್ಲಿ ತಿಳಿಯೋಣ.

ಎಲ್ಲಾ ಸಂಖ್ಯೆಗಳಿಗಿಂತ 4 ಭಿನ್ನ
ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ವಿಶೇಷತೆ ಇದೆ. ಆದರೆ, '4'ನೇ ಸಂಖ್ಯೆಯ ಮಹತ್ವ ಉಳಿದೆಲ್ಲ ಸಂಖ್ಯೆಗಳಿಗಿಂತ ಭಿನ್ನವಾಗಿದೆ. ಈ ಸಂಖ್ಯೆಯ ಹಿಂದೆ ಒಂದು ರೀತಿಯ ನಿಗೂಢತೆ ಅಡಗಿದೆ ಎನ್ನುತ್ತಾರೆ ತಜ್ಞರು.
ಯಾವುದೇ ತಿಂಗಳ 4, 13, 22 ಅಥವಾ 31ನೇ ತಾರೀಖಿನಂದು ಜನಿಸಿದವರು ಈ ಗುಂಪಿಗೆ ಸೇರುತ್ತಾರೆ. ಛಾಯಾ ಗ್ರಹವಾದ ರಾಹುವಿನ ಪ್ರಭಾವ ಇವರ ಮೇಲೆ ಹೆಚ್ಚಾಗಿರುತ್ತದೆ. ಹೀಗಾಗಿಯೇ ಇವರ ಆಲೋಚನೆಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ.
ಶಾಂತ ಹಾಗೂ ಗಂಭೀರ
ಶತ್ರುಗಳಿಗೆ ಅತ್ಯಂತ ಅಪಾಯಕಾರಿ
ರಾಹುವಿನಿಂದ ಸಿಗುವ ಬುದ್ಧಿವಂತಿಕೆ
ಇವರು ಏನು ಯೋಚಿಸುತ್ತಿದ್ದಾರೆ ಎಂಬುದು ಅವರ ಸುತ್ತಮುತ್ತಲಿನವರಿಗೂ ತಿಳಿಯುವುದಿಲ್ಲ. ಈ ಸಸ್ಪೆನ್ಸ್ ಅವರ ಶತ್ರುಗಳನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ರಾಹುವಿನಿಂದ ಸಿಗುವ ಬುದ್ಧಿವಂತಿಕೆ ಇವರನ್ನು ಸಮಾಜದಲ್ಲಿ ತಡೆಯಲಾಗದ ಶಕ್ತಿಯನ್ನಾಗಿ ಮಾಡುತ್ತದೆ. ಜೀವನದಲ್ಲಿ ಇದ್ದಕ್ಕಿದ್ದಂತೆ ಉತ್ತಮ ಅವಕಾಶಗಳು ಸಿಗುತ್ತವೆ.
ಯಾರೂ ನಿರೀಕ್ಷಿಸದ ರೀತಿಯಲ್ಲಿ ಉನ್ನತ ಸ್ಥಾನಗಳನ್ನು ತಲುಪುತ್ತಾರೆ. ವಿಶೇಷವಾಗಿ ಸಂಶೋಧನೆ, ಕಾನೂನು, ರಾಜಕೀಯ, ತಂತ್ರಜ್ಞಾನ ಮತ್ತು ರಹಸ್ಯ ಇಲಾಖೆಗಳಲ್ಲಿ ಇವರು ಯಶಸ್ಸು ಕಾಣುತ್ತಾರೆ. ಸಾಮಾನ್ಯವಾಗಿ 35 ವರ್ಷದವರೆಗೆ ಕೆಲವು ಸಮಸ್ಯೆಗಳನ್ನು ಎದುರಿಸಿದರೂ, ನಂತರ ಇವರ ವೃತ್ತಿಜೀವನ ಹಂತಹಂತವಾಗಿ ಬೆಳೆಯುತ್ತದೆ.
ಇದನ್ನೂ ಓದಿ: ಹಲವು ವರ್ಷದ ನಂತರ ಅಪರೂಪಕ್ಕೊಮ್ಮೆ ಬರುವ ತ್ರಿಪುಷ್ಕರ ಯೋಗ, ಈ 5 ರಾಶಿಗೆ ಚಿನ್ನದಂತ ಅದೃಷ್ಟ
ಹಣಕಾಸಿನ ವಿಷಯ
ಹಣಕಾಸಿನ ವಿಷಯದಲ್ಲಿ ಇವರು ಬಹಳ ಜಾಗರೂಕರಾಗಿರುತ್ತಾರೆ. ದೀರ್ಘಾವಧಿಯ ಹೂಡಿಕೆಗಳ ಮೂಲಕ ಹೆಚ್ಚು ಹಣ ಗಳಿಸುವ ಸಾಧ್ಯತೆ ಇದೆ. ಆರೋಗ್ಯದ ವಿಚಾರಕ್ಕೆ ಬಂದರೆ, ಇವರು ಕೀಲು ನೋವು, ಮಾನಸಿಕ ಒತ್ತಡ ಅಥವಾ ನಿದ್ರಾಹೀನತೆಯನ್ನು ಎದುರಿಸಬಹುದು. ಆದ್ದರಿಂದ, ಯೋಗ ಮತ್ತು ಧ್ಯಾನ ಇವರಿಗೆ ಬಹಳ ಮುಖ್ಯ. ಸಂಬಂಧಗಳ ವಿಷಯದಲ್ಲಿ, ಇವರು ತುಂಬಾ ನಿಷ್ಠಾವಂತರಾಗಿರುತ್ತಾರೆ. ಆದರೂ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ವಲ್ಪ ಹಿಂಜರಿಯುತ್ತಾರೆ. ಇದು ಅವರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಓದಿನಲ್ಲಿ ಹಿಂದೆ ಬಿದ್ರೂ, ಬದುಕಲ್ಲಿ ಇವ್ರೇ ಗೆಲ್ಲೋದು; ಸೋಲನ್ನು ಮೆಟ್ಟಿ ನಿಲ್ಲೋರ ಜನ್ಮ ದಿನಾಂಕ
ಪರಿಹಾರ
ರಾಹುವಿನ ಅನುಗ್ರಹವನ್ನು ಸದಾಕಾಲ ಪಡೆಯಲು ಈ ಪರಿಹಾರಗಳನ್ನು ಪಾಲಿಸಿ. 'ಓಂ ರಾಹವೇ ನಮಃ' ಮಂತ್ರ ಜಪಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಶನಿವಾರದಂದು ಕಪ್ಪು ಎಳ್ಳು, ಸಾಸಿವೆ ಎಣ್ಣೆ ಅಥವಾ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಮಂಗಳಕರ. ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸುವುದು ಇವರಿಗೆ ಸೂಕ್ತ. 4ನೇ ಸಂಖ್ಯೆಯವರು ತಮ್ಮ ಜ್ಞಾನ ಮತ್ತು ತಾಳ್ಮೆಯನ್ನು ಅಸ್ತ್ರವಾಗಿ ಬಳಸಿದರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು.
ಇದನ್ನೂ ಓದಿ: ಹಲವು ವರ್ಷದ ನಂತರ ಅಪರೂಪಕ್ಕೊಮ್ಮೆ ಬರುವ ತ್ರಿಪುಷ್ಕರ ಯೋಗ, ಈ 5 ರಾಶಿಗೆ ಚಿನ್ನದಂತ ಅದೃಷ್ಟ

