ಏಪ್ರಿಲ್ 13 ರಿಂದ 4 ರಾಶಿಗಳಿಗೆ ಕಾದಿದೆ ಕಂಟಕ! ಚಂದ್ರ-ರಾಹು ಸಂಯೋಗದಿಂದ ಗ್ರಹಣ ದೋಷ
Chandra Rahu Conjunction ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ರಾಹುವಿನ ಸಂಯೋಗದಿಂದ 4 ರಾಶಿಗಳಿಗೆ ಕಂಟಕ ಎದುರಾಗಲಿದೆ. ಹಾಗಾದ್ರೆ ಆ ರಾಶಿಗಳು ಯಾವುವು? ಅದಕ್ಕೆ ಪರಿಹಾರಗಳೇನು? ಇಲ್ಲಿದೆ ಮಾಹಿತಿ.

ಚಂದ್ರ-ರಾಹು ಸಂಯೋಗ
ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಒಂದಲ್ಲ ಒಂದು ಗ್ರಹ ತನ್ನ ಸ್ಥಾನ ಬದಲಿಸುತ್ತದೆ. ಏಪ್ರಿಲ್ 13 ರಂದು ಚಂದ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಕುಂಭ ರಾಶಿಯಲ್ಲಿ ರಾಹು ಇದ್ದಾನೆ. ಹೀಗಾಗಿ, ಚಂದ್ರ ಮತ್ತು ರಾಹು ಸಂಯೋಗದಿಂದ ಅಪಾಯಕಾರಿ ಗ್ರಹಣ ಯೋಗ ಉಂಟಾಗುತ್ತದೆ.
ಈ ಸಂಯೋಗವು ನಾಲ್ಕು ರಾಶಿಯವರಿಗೆ ಕಠಿಣ ಕಾಲವನ್ನು ತರಲಿದೆ. ಈ ಚಂದ್ರನ ಸಂಚಾರವು ಮಾನಸಿಕ ಒತ್ತಡ, ಕೆಲಸ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಇದರಿಂದ ಪ್ರಭಾವಕ್ಕೆ ಒಳಗಾಗುವ ಆ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ.
ಕನ್ಯಾ
ವೃಶ್ಚಿಕ
ಮೇಷ
ಮೀನ
ಮೀನ ರಾಶಿಯವರೇ, ಪ್ರಸ್ತುತ ರಾಹು ನಿಮ್ಮ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಈ ಗ್ರಹಣ ದೋಷವು ನಿಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ಮೀನ ರಾಶಿಯಲ್ಲಿ ರಾಹು ಮತ್ತು ಕನ್ಯಾ ರಾಶಿಯಲ್ಲಿ ಕೇತು ಇರುವುದರಿಂದ ಕೆಲವು ಕೆಟ್ಟ ಪರಿಣಾಮಗಳು ಉಂಟಾಗಬಹುದು. ಈ ಅವಧಿಯಲ್ಲಿ ಅನಗತ್ಯ ಭಯ, ನಿದ್ರಾಹೀನತೆ ಮತ್ತು ಭವಿಷ್ಯದ ಬಗ್ಗೆ ಆತಂಕ ಉಂಟಾಗಬಹುದು.
ನಿಮ್ಮ ಕಲ್ಪನಾ ಶಕ್ತಿಯು ನಕಾರಾತ್ಮಕ ಆಲೋಚನೆಗಳತ್ತ ಸಾಗುವ ಸಾಧ್ಯತೆಯಿದೆ. ಏಪ್ರಿಲ್ 13ರ ನಂತರ ಕೆಲಸ ಬದಲಾವಣೆ ಅಥವಾ ಹೊಸ ಆಸ್ತಿ ಖರೀದಿ ಮಾಡುವಾಗ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ಅಲರ್ಜಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಆದ್ದರಿಂದ ಆಹಾರದಲ್ಲಿ ಹಿಡಿತವಿರಲಿ.
ಇದನ್ನೂ ಓದಿ: Numerology: ಮೊದಲ ಪ್ರೇಮವೇ ಕೊನೆಯ ಪ್ರೀತಿ: ಈ ದಿನಾಂಕದಂದು ಜನಸಿದವರಿಗೆ ಗಂಡನೇ ಸರ್ವಸ್ವ!
ಈ 4 ರಾಶಿಯವರು ಏನು ಮಾಡಬೇಕು?
ಸಾಮಾನ್ಯವಾಗಿ ರಾಹು ಗೊಂದಲವನ್ನು ಉಂಟುಮಾಡುವುದರಲ್ಲಿ ನಿಪುಣ. ಹಾಗಾಗಿ, ಮೇಲೆ ತಿಳಿಸಿದ ನಾಲ್ಕು ರಾಶಿಯವರು ಯಾವುದೇ ವಿಷಯದಲ್ಲಿ ಆತುರಪಡದೆ, ಸ್ಪಷ್ಟವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಈ ಗ್ರಹಣ ದೋಷದ ಸಮಯದಲ್ಲಿ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುವುದು ಮತ್ತು ಗ್ರಹಣದ ನಂತರ ದಾನ-ಧರ್ಮಗಳನ್ನು ಮಾಡುವುದು ನಿಮಗೆ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ: ನಾಳೆ ಏಪ್ರಿಲ್ 11 ಸಿದ್ಧಿ ಯೋಗ, ಐದು ರಾಶಿಗೆ ಶನಿವಾರ ಅದೃಷ್ಟ, ದೊಡ್ಡ ಲಾಭ

